ಕಲಬುರಗಿ ಮತ್ತು ಯಾದಗಿರಿ ಎರಡು ಜಿಲ್ಲೆಗಳಲ್ಲಿರುವ ಒಟ್ಟು 5 ಬ್ಯಾರೇಜ್ಗಳಲ್ಲಿ ನೀರು ತುಂಬಿದರೂ ಜೋಳದಡಿಗಿ ಬ್ಯಾರೇಜಿನಿಂದ ಸಂಗಮದವರೆಗೆ ಬರುವ ಸುಮಾರು 10 ರಿಂದ 15 ಗ್ರಾಮಗಳಿಗೆ ನೀರು ಸಾಕಾಗುವುದಿಲ್ಲ. ದನಕರುಗಳಿಗೆ ಮತ್ತು ಪ್ರಾಣಿ ಪಕ್ಷಿಗಳಿಗಾಗಿ ಹೆಚ್ಚಿನ ನೀರು ಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಯಾದಗಿರಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, “ಕಲಬುರಗಿ ಜಿಲ್ಲೆಯಲ್ಲಿ ಬರುವ ಘತ್ತರಗಿ ಮತ್ತು ಸನ್ನತಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಬರುವ ವಡಗೇರಾ ತಾಲೂಕಿನ ಗುಲ್ಲರಂ (ಗುರುಸಣಗಿ) ಕಂದಳ್ಳಿ ಹಾಗೂ ಜೋಳದಡಗಿ ಈ ಎರಡು ಜಿಲ್ಲೆಗಳಿಗೆ ಸಂಬಂಧಪಟ್ಟಂತೆ ಒಟ್ಟು 5 ಗ್ರಾಮಗಳ ಬ್ಯಾರೇಜುಗಳಲ್ಲಿ ಸದ್ಯ ನೀರು ಸ್ಟಾಕ್ ಇದೆ. ಆದರೆ ಜೋಳದಡಗಿ ಬ್ಯಾರೇಜಿನ್ ಕೆಳಗಡೆಯಿಂದ ಸಂಗಮದವರೆಗೆ ಕರ್ನಾಟಕಕ್ಕೆ ಸಂಬಂಧಿಸಿದಂತೆ ಜೋಳದಡಗಿ, ಕೊಂಗಂಡಿ, ಸೂಗೂರು, ಅಗ್ನಿಹಾಳ ಮತ್ತು ತೆಲಂಗಾಣಕ್ಕೆ ಸಂಬಂಧಪಟ್ಟಂತೆ ಲಿಂಗದಳ್ಳಿ, ಐನಾಪೂರ, ಕುಸಮೂರ್ತಿ, ತಂಗಡಗಿ ಈ ಪ್ರಕಾರ ಜೋಳದಡಗಿ ಬ್ಯಾರೇಜ್ನಿಂದ ಸಂಗಮದವರೆಗೆ 10 ರಿಂದ 15 ಕಿಮೀಟರ್ವರೆಗೆ ನೀರಿನ ಅಗತ್ಯವಿದೆ” ಎಂದರು.
“ಕರ್ನಾಟಕ ಮತ್ತು ತೆಲಂಗಾಣ ಸೇರಿ ಒಟ್ಟು 10 ರಿಂದ 15 ಗ್ರಾಮಗಳ ದನಕರುಗಳಿಗೆ ಪ್ರಾಣಿ ಪಕ್ಷಿಗಳಿಗೆ ನೀರು ಬೇಕಾಗುತ್ತದೆ. ವಿಜಯಪುರ, ಬೆಳಗಾಂ ಮತ್ತು ಇತರೆ ಜಿಲ್ಲೆಗಳಿಂದ ಮನವಿಯಲ್ಲಿ ತೋರಿಸಿದ ಗ್ರಾಮಗಳಿಗೆ ಬೇಸಿಗೆ ಸಮಯದಲ್ಲಿ ಲಕ್ಷಾನುಗಟ್ಟಲೆ ಕುರಿಗಳ ಸಹಿತ ಕುರಿಗಾಹಿಗಳು ಬಂದು, ಮಳೆಗಾಲ ಪ್ರಾರಂಭವಾಗುವವರೆಗೆ ಇಲ್ಲೇ ತಂಗಿರುತ್ತಾರೆ. ಸದ್ಯ ನಾವುಗಳು ಕೆಲ ಗ್ರಾಮಸ್ಥರು ನಮಗೆ ಹೇಳಿದ ಪ್ರಕಾರ ಫೆಬ್ರವರಿ 18ರಂದು ಬೆಳಿಗ್ಗೆಯಿಂದ ಸಂಜೆಯವರೆಗೆ ಜೋಳದಡಗಿಯಿಂದ ಸಂಗಮದವರೆಗೆ ನದಿಯನ್ನು ನೋಡಲಾಗಿ ಭೀಮಾ ನದಿಯಲ್ಲಿ ಒಂದೇ ಒಂದು ಹನಿ ನೀರಿಲ್ಲ” ಎಂದು ಹೇಖಿದರು.
“ಜಲಚರ ಪ್ರಾಣಿಗಳಾದ ಮೀನುಗಳು, ಮೊಸಳೆ ಹಾಗೂ ಇತರೆ ಪ್ರಾಣಿಗಳು ನೀರಿಲ್ಲದೆ ಈಗಾಗಲೇ ಸತ್ತು ಹೋಗಿವೆ. ಆದರೆ ಕೇವಲ ಭತ್ತ ಬೆಳೆ ಬಾರದೆಂಬ ಒಂದೇ ಒಂದು ಉದ್ದೇಶದಿಂದ ಇವತ್ತು ಜಿಲ್ಲಾಡಳಿತ ನೀರು ಬಿಡುವುದನ್ನು ಬಂದ್ ಮಾಡಿ, ಜೂನ್ ತಿಂಗಳವರೆಗೆ ತಾವು ಕ್ರಮ ಕೈಗೊಂಡಿರುವುದು ಭತ್ತ ಬೆಳೆಯುವ ಕೆಲವರಿಗೆ ಅನುಕೂಲವಾಗಿದೆ. ಕೆಲವರಿಗೆ ಅನಾನುಕೂಲವಾಗಿದೆ. ಆದರೆ ಜೋಳದಡಗಿ ಬ್ಯಾರೇಜಿನಿಂದ ಕೆಳಗಡೆ ನಾವುಗಳು ಕಲ್ಲುಗಳಿರುವ ನದಿಯ ಒಳಗಡೆಯ ವಿಡಿಯೋ ಮತ್ತು ಫೋಟೋಗಳನ್ನು ತೆಗೆದಿರುತ್ತೇವೆ. ಆದರೆ ಸದ್ಯ ಜಲಚರ ಪ್ರಾಣಿಗಳು ಸತ್ತು ಹೋಗಿರುವುದು ಕಂಡುಬಂದಿದೆ” ಎಂದರು.
“ಮುಂದೆ 10 ರಿಂದ 15 ಗ್ರಾಮಗಳ ದನಕರುಗಳಿಗೆ ಕುಡಿಯಲಿಕ್ಕಾದರೂ ತಾವುಗಳು ಎಲ್ಲ ಬ್ಯಾರೇಜ್ಗಳಿರುವ ಅಲ್ಪ-ಸ್ವಲ್ಪವಾದರೂ ನೀರು ಬಿಟ್ಟು ಜೋಳದಡಗಿ ಬ್ಯಾರೇಜ್ ಕೆಳಗಡೆ ಹಿನ್ನೀರು ಕರ್ನಾಟಕ ಮತ್ತು ತೆಲಂಗಾಣಗಳ ರಾಜ್ಯಗಳಿಗೆ ಸಂಬಂಧಪಟ್ಟ 10 ರಿಂದ 15 ಗ್ರಾಮಗಳ ದನಕರುಗಳಿಗೆ ಈ ನೀರಿನಿಂದ ಅನುಕೂಲವಾಗಿರುತ್ತದೆ. ಒಂದು ವೇಳೆ ವಿಳಂಭವಾದರೆ ಸುಮಾರು 10 ರಿಂದ 15 ಗ್ರಾಮಗಳ ದನ ಕರುಗಳೊಂದಿಗೆ ಮತ್ತು ಕುರಿಗಳೊಂದಿಗೆ ತಮ್ಮ ಕಚೇರಿಯ ಎದುರು ಪ್ರತಿಭಟನೆ ಮಾಡುವುದು ಅನಿವಾರ್ಯವಾಗುತ್ತದೆ” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ದೇವದಾಸಿಯರ ಬೇಡಿಕೆ ಈಡೇರಿಕೆಗೆ ಆಗ್ರಹ
ರವಿಚಂದ್ರ ಬೊಮ್ಮನಹಳ್ಳಿ, ದಲಿತ ಮುಖಂಡ ಮಾನು ಗುರಿಕಾರ, ಮಲ್ಲಿಕಾರ್ಜುನ ಕುರುಕುಂದಿ, ಆಜೀಜ್ ಸಾಬ ಐಕೂರು, ಮಲ್ಲಿಕಾರ್ಜುನ ಶಾಖಾನವರ, ಬುದ್ದಿವಂತ ನಾಗರಾಳ, ಮಹಾದೇವಪ್ಪ ಬಿಜಾಪುರ, ಮರೆಪ್ಪ ಹಾಲಗೇರಾ, ರಾಮಣ್ಣ ಶೆಳ್ಳಗಿ, ಮೂರ್ತಿ ಬೊಮ್ಮನಹಳ್ಳಿ, ಬಸವರಾಜ್ ಗೋನಾಲ, ನಿಂಗಪ್ಪ ಕಟಗಿ ಶಹಾಪುರ, ಮಲ್ಲಪ್ಪ ಉರುಸುಲ್, ಭೀಮಣ್ಣ ಲಕ್ಷ್ಮೀಪುರ, ಭೀಮನಗೌಡ ಸೂಗೂರು, ಬಸವರಾಜ್ ದೊಡ್ಡಮನಿ ಶೆಳ್ಳಗಿ, ಖಾಜಾಹುಸೇನ್ ಗುಡಗುಂಟಿ ಇದ್ದರು.





