ಯಾದಗಿರಿ | ನೀರು ಹರಿಸುವಂತೆ ದಸಂಸ ಮನವಿ

Date:

ಕಲಬುರಗಿ ಮತ್ತು ಯಾದಗಿರಿ ಎರಡು ಜಿಲ್ಲೆಗಳಲ್ಲಿರುವ ಒಟ್ಟು 5 ಬ್ಯಾರೇಜ್‌ಗಳಲ್ಲಿ ನೀರು ತುಂಬಿದರೂ ಜೋಳದಡಿಗಿ ಬ್ಯಾರೇಜಿನಿಂದ ಸಂಗಮದವರೆಗೆ ಬರುವ ಸುಮಾರು 10 ರಿಂದ 15 ಗ್ರಾಮಗಳಿಗೆ ನೀರು ಸಾಕಾಗುವುದಿಲ್ಲ. ದನಕರುಗಳಿಗೆ ಮತ್ತು ಪ್ರಾಣಿ ಪಕ್ಷಿಗಳಿಗಾಗಿ ಹೆಚ್ಚಿನ ನೀರು ಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಯಾದಗಿರಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, “ಕಲಬುರಗಿ ಜಿಲ್ಲೆಯಲ್ಲಿ ಬರುವ ಘತ್ತರಗಿ ಮತ್ತು ಸನ್ನತಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಬರುವ ವಡಗೇರಾ ತಾಲೂಕಿನ ಗುಲ್ಲರಂ (ಗುರುಸಣಗಿ) ಕಂದಳ್ಳಿ ಹಾಗೂ ಜೋಳದಡಗಿ ಈ ಎರಡು ಜಿಲ್ಲೆಗಳಿಗೆ ಸಂಬಂಧಪಟ್ಟಂತೆ ಒಟ್ಟು 5 ಗ್ರಾಮಗಳ ಬ್ಯಾರೇಜುಗಳಲ್ಲಿ ಸದ್ಯ ನೀರು ಸ್ಟಾಕ್ ಇದೆ. ಆದರೆ ಜೋಳದಡಗಿ ಬ್ಯಾರೇಜಿನ್ ಕೆಳಗಡೆಯಿಂದ ಸಂಗಮದವರೆಗೆ ಕರ್ನಾಟಕಕ್ಕೆ ಸಂಬಂಧಿಸಿದಂತೆ ಜೋಳದಡಗಿ, ಕೊಂಗಂಡಿ, ಸೂಗೂರು, ಅಗ್ನಿಹಾಳ ಮತ್ತು ತೆಲಂಗಾಣಕ್ಕೆ ಸಂಬಂಧಪಟ್ಟಂತೆ ಲಿಂಗದಳ್ಳಿ, ಐನಾಪೂರ, ಕುಸಮೂರ್ತಿ, ತಂಗಡಗಿ ಈ ಪ್ರಕಾರ ಜೋಳದಡಗಿ ಬ್ಯಾರೇಜ್‌ನಿಂದ ಸಂಗಮದವರೆಗೆ 10 ರಿಂದ 15 ಕಿಮೀಟರ್‌ವರೆಗೆ ನೀರಿನ ಅಗತ್ಯವಿದೆ” ಎಂದರು.

“ಕರ್ನಾಟಕ ಮತ್ತು ತೆಲಂಗಾಣ ಸೇರಿ ಒಟ್ಟು 10 ರಿಂದ 15 ಗ್ರಾಮಗಳ ದನಕರುಗಳಿಗೆ ಪ್ರಾಣಿ ಪಕ್ಷಿಗಳಿಗೆ ನೀರು ಬೇಕಾಗುತ್ತದೆ. ವಿಜಯಪುರ, ಬೆಳಗಾಂ ಮತ್ತು ಇತರೆ ಜಿಲ್ಲೆಗಳಿಂದ ಮನವಿಯಲ್ಲಿ ತೋರಿಸಿದ ಗ್ರಾಮಗಳಿಗೆ ಬೇಸಿಗೆ ಸಮಯದಲ್ಲಿ ಲಕ್ಷಾನುಗಟ್ಟಲೆ ಕುರಿಗಳ ಸಹಿತ ಕುರಿಗಾಹಿಗಳು ಬಂದು, ಮಳೆಗಾಲ ಪ್ರಾರಂಭವಾಗುವವರೆಗೆ ಇಲ್ಲೇ ತಂಗಿರುತ್ತಾರೆ. ಸದ್ಯ ನಾವುಗಳು ಕೆಲ ಗ್ರಾಮಸ್ಥರು ನಮಗೆ ಹೇಳಿದ ಪ್ರಕಾರ ಫೆಬ್ರವರಿ 18ರಂದು ಬೆಳಿಗ್ಗೆಯಿಂದ ಸಂಜೆಯವರೆಗೆ ಜೋಳದಡಗಿಯಿಂದ ಸಂಗಮದವರೆಗೆ ನದಿಯನ್ನು ನೋಡಲಾಗಿ ಭೀಮಾ ನದಿಯಲ್ಲಿ ಒಂದೇ ಒಂದು ಹನಿ ನೀರಿಲ್ಲ” ಎಂದು ಹೇಖಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಜಲಚರ ಪ್ರಾಣಿಗಳಾದ ಮೀನುಗಳು, ಮೊಸಳೆ ಹಾಗೂ ಇತರೆ ಪ್ರಾಣಿಗಳು ನೀರಿಲ್ಲದೆ ಈಗಾಗಲೇ ಸತ್ತು ಹೋಗಿವೆ. ಆದರೆ ಕೇವಲ ಭತ್ತ ಬೆಳೆ ಬಾರದೆಂಬ ಒಂದೇ ಒಂದು ಉದ್ದೇಶದಿಂದ ಇವತ್ತು ಜಿಲ್ಲಾಡಳಿತ ನೀರು ಬಿಡುವುದನ್ನು ಬಂದ್ ಮಾಡಿ, ಜೂನ್ ತಿಂಗಳವರೆಗೆ ತಾವು ಕ್ರಮ ಕೈಗೊಂಡಿರುವುದು ಭತ್ತ ಬೆಳೆಯುವ ಕೆಲವರಿಗೆ ಅನುಕೂಲವಾಗಿದೆ. ಕೆಲವರಿಗೆ ಅನಾನುಕೂಲವಾಗಿದೆ. ಆದರೆ ಜೋಳದಡಗಿ ಬ್ಯಾರೇಜಿನಿಂದ ಕೆಳಗಡೆ ನಾವುಗಳು ಕಲ್ಲುಗಳಿರುವ ನದಿಯ ಒಳಗಡೆಯ ವಿಡಿಯೋ ಮತ್ತು ಫೋಟೋಗಳನ್ನು ತೆಗೆದಿರುತ್ತೇವೆ. ಆದರೆ ಸದ್ಯ ಜಲಚರ ಪ್ರಾಣಿಗಳು ಸತ್ತು ಹೋಗಿರುವುದು ಕಂಡುಬಂದಿದೆ” ಎಂದರು.

“ಮುಂದೆ 10 ರಿಂದ 15 ಗ್ರಾಮಗಳ ದನಕರುಗಳಿಗೆ ಕುಡಿಯಲಿಕ್ಕಾದರೂ ತಾವುಗಳು ಎಲ್ಲ ಬ್ಯಾರೇಜ್‌ಗಳಿರುವ ಅಲ್ಪ-ಸ್ವಲ್ಪವಾದರೂ ನೀರು ಬಿಟ್ಟು ಜೋಳದಡಗಿ ಬ್ಯಾರೇಜ್ ಕೆಳಗಡೆ ಹಿನ್ನೀರು ಕರ್ನಾಟಕ ಮತ್ತು ತೆಲಂಗಾಣಗಳ ರಾಜ್ಯಗಳಿಗೆ ಸಂಬಂಧಪಟ್ಟ 10 ರಿಂದ 15 ಗ್ರಾಮಗಳ ದನಕರುಗಳಿಗೆ ಈ ನೀರಿನಿಂದ ಅನುಕೂಲವಾಗಿರುತ್ತದೆ. ಒಂದು ವೇಳೆ ವಿಳಂಭವಾದರೆ ಸುಮಾರು 10 ರಿಂದ 15 ಗ್ರಾಮಗಳ ದನ ಕರುಗಳೊಂದಿಗೆ ಮತ್ತು ಕುರಿಗಳೊಂದಿಗೆ ತಮ್ಮ ಕಚೇರಿಯ ಎದುರು ಪ್ರತಿಭಟನೆ ಮಾಡುವುದು ಅನಿವಾರ್ಯವಾಗುತ್ತದೆ” ಎಂದು ಎಚ್ಚರಿಸಿದರು.

ಈ ಸುದ್ದಿ ಓದಿದ್ದೀರಾ? ಕಲಬುರಗಿ | ದೇವದಾಸಿಯರ ಬೇಡಿಕೆ ಈಡೇರಿಕೆಗೆ ಆಗ್ರಹ

ರವಿಚಂದ್ರ ಬೊಮ್ಮನಹಳ್ಳಿ, ದಲಿತ ಮುಖಂಡ ಮಾನು ಗುರಿಕಾರ, ಮಲ್ಲಿಕಾರ್ಜುನ ಕುರುಕುಂದಿ, ಆಜೀಜ್ ಸಾಬ ಐಕೂರು, ಮಲ್ಲಿಕಾರ್ಜುನ ಶಾಖಾನವರ, ಬುದ್ದಿವಂತ ನಾಗರಾಳ, ಮಹಾದೇವಪ್ಪ ಬಿಜಾಪುರ, ಮರೆಪ್ಪ ಹಾಲಗೇರಾ, ರಾಮಣ್ಣ ಶೆಳ್ಳಗಿ, ಮೂರ್ತಿ ಬೊಮ್ಮನಹಳ್ಳಿ, ಬಸವರಾಜ್ ಗೋನಾಲ, ನಿಂಗಪ್ಪ ಕಟಗಿ ಶಹಾಪುರ, ಮಲ್ಲಪ್ಪ ಉರುಸುಲ್, ಭೀಮಣ್ಣ ಲಕ್ಷ್ಮೀಪುರ, ಭೀಮನಗೌಡ ಸೂಗೂರು, ಬಸವರಾಜ್ ದೊಡ್ಡಮನಿ ಶೆಳ್ಳಗಿ, ಖಾಜಾಹುಸೇನ್ ಗುಡಗುಂಟಿ ಇದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...