ಕರ್ನಾಟಕ ರಾಜ್ಯದ ಬೆಳೆ ಸಮೀಕ್ಷೆದಾರ(ಪಿಆರ್ಗಳು)ರಿಗೆ ಸೇವಾ ಭದ್ರತೆ, ಜೀವವಿಮೆ ಒದಗಿಸುವ ಹಾಗೂ ಕಾಯಮಾತಿಗೆ ಆಗ್ರಹಿಸಿ ಯಾದಗಿರಿ ಜಿಲ್ಲಾಧಿಕಾರಿ ಮುಖಾಂತರ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
“ಕರ್ನಾಟಕ ರಾಜ್ಯದಲ್ಲಿ ನಾವುಗಳು ಸುಮಾರು 9 ರಿಂದ 10 ವರ್ಷಗಳಿಂದ ಬೆಳೆ ಸಮೀಕ್ಷೆದಾರರಾಗಿ ಸೇವೆ ಸಲ್ಲಿಸುತ್ತಿದ್ದು, ಸೇವೆ ಸಲ್ಲಿಸುತ್ತಿರುವ ಸಮಯದಲ್ಲಿ ಹಾವು, ಚೇಳು, ಕಾಡುಹಂದಿಗಳು ಹಾಗೂ ತೋಳಗಳ ದಾಳಿಯಿಂದ ಗಾಯಗಳಾಗಿವೆ. ಈ ಹಿಂದೆ ಕೆಲವು ಜಿಲ್ಲೆಗಳಲ್ಲಿ ಹಾವು ಕಚ್ಚಿದ್ದು, ಸಂಬಧಪಟ್ಟ ಅಧಿಕಾರಿಗಳಿಗೆ ಮಾಹಿತಿ ಸಲ್ಲಿಸಿದ್ದರೂ ಕೂಡಾ ಯಾವುದೇ ರೀತಿಯ ಪರಿಹಾರ ನೀಡಿಲ್ಲ. ಆದರೂ ನಾವು ಜೀವದ ಆಸೆ ಬಿಟ್ಟು ಶ್ರದ್ದೆಯಿಂದ ಸೇವೆ ಮಾಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಹಲವಾರು ತೊಂದರೆಗಳಿಗೆ ಒಳಗಾಗಿದ್ದೇವೆ” ಎಂದು ಹೇಳಿದರು.
“ಡಿ ಗ್ರೂಪ್ ನೌಕರರಾಗಿ ಪರಿಗಣಿಸಬೇಕು. ಗ್ರಾಮದ ಬೆಳೆ ಸಮೀಕ್ಷೆದಾರರನ್ನು ಕೃಷಿ ಇಲಾಖೆ ಡಿ ಗ್ರೂಪ್ ನೌಕರರನ್ನು ಖಾಯಂಗೊಳಿಸಬೇಕು. ಕಡ್ಡಾಯವಾಗಿ ಪ್ರತಿಯೊಬ್ಬ ಪಿಆರ್ಗಳಿಗೆ ಡಿಜಿಟಲ್ ಐಡಿ ಕಾರ್ಡ್ ನೀಡಬೇಕು ಹಾಗೂ ಜೀವವಿಮಾ ಸೇವಾ ಸೌಲಭ್ಯವನ್ನು ಒದಗಿಸಿಕೊಡಬೇಕು, ಪ್ರತಿಯೊಬ್ಬ ನೌಕರನನ್ನು ಖಾಯಂಗೊಳಿಸಬೇಕು. ಈ ಬಗ್ಗೆ ನಾವು ಈ ಹಿಂದೆ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಆದರೂ ಈವರೆಗೆ ಇದರ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಂಡಿರುವುದಿಲ್ಲ. ದಯವಿಟ್ಟು ಈಗಲಾದರೂ ನಮ್ಮ ಮನವಿಯನ್ನು ಪರಿಗಣಿಸಿ ನೌಕರಿಯನ್ನು ಖಾಯಂಮಾಡಿ ನಮ್ಮಗಳಿಗೆ ಜೀವವಿಮೆ ಮತ್ತು ಇತರೆ ಸೌಲಭ್ಯ ಒದಗಿಸಿಕೊಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಕನಿಷ್ಟ ಕೂಲಿ ಜಾರಿಗೆ ಸರ್ಕಾರದ ಶೂನ್ಯ ಸ್ಪಂದನೆ ; ಬೀದಿಗಿಳಿದ ಬೀಡಿ ಕಾರ್ಮಿಕರು
ರಾಜ್ಯ ಉಪಾಧ್ಯಕ್ಷ ಆಂಜನೇಯ ಕಲಾಲ್, ಯಾದಗಿರಿ ಜಿಲ್ಲಾ ಅಧ್ಯಕ್ಷ ಹೊನ್ನಪ್ಪ ನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಸಜ್ಜನ್ ಸೇರಿದಂತೆ ಬೆಳೆ ಸಮೀಕ್ಷೆದಾರರು ಇದ್ದರು.





