ಯಾದಗಿರಿ ಸಂಚಾರಿ ಪೊಲೀಸ್ ಠಾಣೆ ಸಿಬ್ಬಂದಿ ಕಾರ್ಯವೈಖರಿಯ ಹಾಗೂ ಕಾಶಪ್ಪ ಇವರ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಒತ್ತಾಯಿಸಿ ಅಂಬೇಡ್ಕರ್ ಸೇವಾ ಸಮಿತಿಯ ಪದಾಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸಮಿತಿಯ ಜಿಲ್ಲಾಧ್ಯಕ್ಷ ರಾಹುಲ್ ಕೊಲ್ಲೂರಕರ್ ಮಾತನಾಡಿ, “ಯಾದಗಿರಿ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳ ದರ್ಪ ದಿನ ದಿನಕ್ಕೆ ಮಿತಿ ಮಿರುತ್ತಿದೆ, ಸಂಚಾರಿ ಠಾಣೆಯ ಸಿಬ್ಬಂದಿಗಳು ಒಂದೇ ಜಾಗದಲ್ಲಿ ಏಳೆಂಟು ಜನ ಗುಂಪಾಗಿ ನಿಂತು ಹಳ್ಳಿಯಿಂದ ಬರುವ ಜನರಿಂದ ಹಣ ವಸೂಲಿ ಮಾಡುತ್ತಿದ್ದು, ದಂಡ ಕಟ್ಟದಿದ್ದರೆ ಚಾಲಕರಿಂದ 200, 300 ರೂಪಾಯಿ ಕೊಡುವಂತೆ ಡಿಮ್ಯಾಂಡ್ ಮಾಡುತ್ತಾರೆ. ಅದಕ್ಕೆ ಯಾವುದೇ ರಸೀದಿ ಸಹ ನೀಡುವುದಿಲ್ಲʼ ಎಂದು ಆರೋಪಿಸಿದರು.
ʼಯಾದಗಿರಿಯಲ್ಲಿ ಪ್ರತಿ ಮಂಗಳವಾರ ನಡೆಯುವ ಸಂತೆಯಲ್ಲಿ ಗ್ರಾಮೀಣ ಭಾಗದ ಬಡ ರೈತರು, ಕಾರ್ಮಿಕರು, ತರಕಾರಿ, ಇತರೆ ಸಾಮಾಗ್ರಿ ತರುವ ವಾಹನಗಳಿಗೆ ಅಡ್ಡಗಟ್ಟಿ, ಅವರಿಗೆ ಧಮಕಿ ಹಾಕಿ, ವಾಹನಗಳ ದಾಖಲೆಗಳು ಇದ್ದರೂ ಕೂಡಾ ಅವರ ಬಳಿ ಹಣ ವಸೂಲಿ ಮಾಡುತ್ತಿದ್ದು, ನಾಮಕೆ ವಾಸ್ತೆ ಕೆಲವು ವಾಹನಗಳಿಗೆ ದಂಡ ಹಾಕಿ, ರಸೀದಿಗಳು ನೀಡುತ್ತಿದ್ದು, ಇದರಿಂದ ಗ್ರಾಮೀಣ ಭಾಗದ ಜನರ ವ್ಯಾಪಾರಕ್ಕೆ ಅಡ್ಡಿಯಾಗುತ್ತಿದೆʼ ಎಂದು ದೂರಿದರು.
ʼಈ ಬಗ್ಗೆ ಪ್ರಶ್ನಿಸಿದರೆ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಾರೆ. ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ವಾಹನ ಸವಾರರ ಮೇಲೆ ಹಲ್ಲೆ ಮಾಡಿ ಅವರ ಮೊಬೈಲ್ ಕಸಿದುಕೊಳ್ಳುತ್ತಿದ್ದು.ಅನೇಕ ಕಡೆ ಸಿಸಿ ಟಿವಿಗಳಿಲ್ಲ. ಅಪಘಾತದಿಂದ ಮರಣ ಹೊಂದುತ್ತಿದ್ದು, ಕೇವಲ ತೊಂದರೆ ಕೊಡುವ ಕೆಲಸದಲ್ಲಿ ನಿರತರಾಗಿದ್ದಾರೆ. ವಾಹನ ಸವಾರರ ಸುಳ್ಳು ಆರೋಪ ಮಾಡಿ, ಜನರ ಜೀವದ ಜೊತೆ ಆಟವಾಡುತ್ತಿರುವುದು ಖಂಡನೀಯʼ ಎಂದರು.
ಈ ಕುರಿತು ಸೂಕ್ತ ತನಿಖೆಯಾಗಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಬೀದರ್ | ʼಗೃಹ ಆರೋಗ್ಯʼ ಯೋಜನೆಗೆ ಚಾಲನೆ; ಮನೆ ಬಾಗಿಲಲ್ಲೇ ಆರೋಗ್ಯ ತಪಾಸಣೆ : ಸಚಿವ ಈಶ್ವರ ಖಂಡ್ರೆ
ಈ ಸಂದರ್ಭದಲ್ಲಿ ಪ್ರಮುಖರಾದ ಬಂದಪ್ಪ ಕಟ್ಟಿಮನಿ, ಕಾಶಿನಾಥ್ ಕಾಣೆಕಲ್, ಬಿ.ಆಂಜನೇಯ ಭಂಡಾರಿ, ಮೋನಪ್ಪ ಮುನೆಪ್ಪಾನೋರ್, ಸೈದಪ್ಪ ಕೊಲೂರ್, ರಮೇಶ್ ಕ್ಯಾತ್ನಾಳ್, ಮಶಪ್ಪ ಅರಿಕೇರಿ, ರಮೇಶ್ ಗಣಪುರ, ಹಣಮಂತ ಕೊಲ್ಲೂರ್, ಬಾಲು ಹಳ್ಳಿ ಮತ್ತಿತರರು ಉಪ್ಪಸ್ಥಿತರುದರು.





