ಯಾದಗಿರಿ | ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಅರೆಬೆತ್ತಲೆ ಮೆರವಣಿಗೆ

Date:

ಸಾಂವಿಧಾನಿಕ ಸಂಸ್ಥೆಗಳಾದ ಇ.ಡಿ, ಐಟಿ, ಸಿಬಿಐ ಮತ್ತು ರಾಜಭವನಗಳನ್ನು ಕೇಂದ್ರ ಬಿಜೆಪಿ ಸರ್ಕಾರ ತಮ್ಮ ರಾಜಕೀಯ ಲಾಭಕ್ಕಾಗಿ ದುರುಪಯೋಗ ಮಾಡಿಕೊಳ್ಳುತ್ತಿರುವುದನ್ನು ಖಂಡಿಸಿ ಯಾದಗಿರಿ ಜಿಲ್ಲೆಯ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಅರೆಬೆತ್ತಲೆ ಮೆರವಣಿಗೆ ಮಾಡಿ ಜಿಲ್ಲಾಧಿಕಾರಿ ಮುಖಾಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಜಿಲ್ಲಾಧ್ಯಕ್ಷ ಶಿವಪುತ್ರ ಜಾವಳಿ ಮಾತನಾಡಿ, “ಕೇಂದ್ರ ಬಿಜೆಪಿ ಸರ್ಕಾರ ಕೇಂದ್ರಗಳಲ್ಲಿ ಅಧಿಕಾರಕ್ಕೆ ಬಂದ 10 ವರ್ಷಗಳಲ್ಲಿ ದೇಶದ ಅಖಂಡತೆಗೆ ಧಕ್ಕೆ ತಂದೊಡ್ಡಲು ಸಂವಿಧಾನ ಪ್ರಜಾಪ್ರಭುತ್ವಕ್ಕೆ ಅಪಚಾರ ಎಸಗುತ್ತಲಿದೆ. ದೇಶದ ಹಲವು ರಾಜ್ಯಗಳಲ್ಲಿ ಬಿಜೆಪಿಯೇತರರ ಸರ್ಕಾರಗಳು ಜನರ ಆಶೀರ್ವಾದದಿಂದ ಬಹುಸಂಖ್ಯಾತ ಆಯ್ಕೆ ಹೊಂದಿ ರಚನೆಗೊಂಡಿದ್ದ ಸರ್ಕಾರಗಳನ್ನು ಏನಾದರೂ ಮಾಡಿ ಅಸ್ಥಿರಗೊಳಿಸುವ ಹುನ್ನಾರ ಮಾಡುತ್ತಿದ್ದಾರೆ. ಬೇರೆ ಪಕ್ಷದಿಂದ ಆಯ್ಕೆಗೊಂಡಿರುವ ಶಾಸಕರನ್ನು ಪುಸಲಾಯಿಸಿ ಅವರ ಸ್ಥಾನಕ್ಕೆ ರಾಜಿನಾಮೆ ಕೊಡಿಸಿಯಾದರೂ ಇತರೆ ಸರ್ಕಾರಗಳನ್ನು ಉರುಳಿಸಲು ನಿಂತಿದ್ದಾರೆ” ಎಂದು ಟೀಕಿಸಿದರು.

“ಸಂವಿಧಾನಿಕ ಸಂಸ್ಥೆಗಳನ್ನು ರಾಜಕೀಯ ಲಾಭಕ್ಕಾಗಿ ಬಳಕೆ ಮಾಡಿಕೊಂಡು ತನ್ನ ವ್ಯಾಪ್ತಿಯಲ್ಲಿ ಬರುವ ಅಪರಾಧಗಳ ತನಿಖಾ ಸಂಸ್ಥೆಗಳನ್ನು ರಾಜಕೀಯಗೋಸ್ಕರ ಬಳಸಿಕೊಂಡಾದರೂ ಪಿತೂರಿ ನಡೆಸುತ್ತಿರುವ ಬಿಜೆಪಿ, ಬಹುಮತಗಳಿಂದ ಆಯ್ಕೆಯಾಗಿರುವ ಇತರೆ ಸರ್ಕಾರಗಳನ್ನು ಪತನಗೊಳಿಸಲು ಸಂಚುರೂಪಿಸಿ ಹಿಂಬಾಗಿಲುನಿಂದ ಅಧಿಕಾರದ ಗದ್ದುಗೆ ಏರುವ ಕೇಂದ್ರ ಬಿಜೆಪಿ ಸರ್ಕಾರದ ಹುನ್ನಾರವನ್ನು ಪ್ರಜಾಪ್ರಭುತ್ವವಾದಿಗಳು ಅರಿಯಬೇಕಾಗಿದೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಸಂವಿಧಾನ ಪ್ರಜಾಪ್ರಭುತ್ವ ವಿರೋಧಿಸಿ, ಮನುವಾದವನ್ನು ಪ್ರತಿಪಾದಿಸುವ ಕೇಂದ್ರ ಬಿಜೆಪಿ ಸರ್ಕಾರ ಚುನಾವಣಾ ಆಯೋಗಳಂತಹ ಮೂಲಕವೇ ಮೆಟ್ಟಿಹಾಕುವ ಬಾಯಿಮುಚ್ಚಿಸುವ ಫ್ಯೂಡಲ್ ರಾಜಕಾರಣದ ಮಾದರಿಯೊಂದು ದೇಶದಲ್ಲಿ ಈಗ ಚಾಲ್ತಿಯಲ್ಲಿದೆ. ಇದರ ಭಾಗವಾಗಿಯೇ ಸಿದ್ದರಾಮಯ್ಯನವರ ವಿರುದ್ಧ ಮುಡಾ ಪ್ರಕರಣ ಬಳಸಿಕೊಳ್ಳಲಾಗುತ್ತಿದೆ” ಎಂದು ಆರೋಪಿಸಿದರು.

“ಇಂತಹ ಫ್ಯೂಡಲ್ ರಾಜಕಾರಣದ ಆಂತರ್ಯದಲ್ಲಿ ಕೋಮುವಾದ, ಮನುಸಿದ್ಧಾಂತದಂತಹ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಮಿಸಕಾಡುಸುತ್ತಿದೆ. ಕೋಮುವಾದಕ್ಕೆ ಈ ರಾಜ್ಯದಲ್ಲಿ ರಾಜಕೀಯವಾಗಿ ದೊಡ್ಡ ತಡೆಗೋಡೆಯಂತಿರುವುದೇ ಸಿದ್ದರಾಮಯ್ಯ
ಕೇವಲ ಮುಡಾ ಪ್ರಕರಣ ಕೃತಕ ಕಾರಣಕ್ಕೆ ಹೆದರಿ ಸಿದ್ದರಾಮಯ್ಯ ಎಂಬ ಜನಪ್ರಿಯ ನಾಯಕ ಅಧಿಕಾರದಿಂದ ನಿರ್ಗಮಿಸುವುದೆಂದರೆ ಅದು ಈ ಸಮಾಜದ ಬಹುಜನರ ವಿಚಾರದಾರೆಯ ಸೋಲಾಗುತ್ತದೆ. ಆದರೆ ʼನೈತಿಕತೆʼಯೆಂಬ ಗೂಟಕ್ಕೆ ಕಟ್ಟಿ ಬಲಿಹಾಕುವ ರಾಜಕೀಯದ ಸಂಚಿಗೆ ಸಿದ್ದರಾಮಯ್ಯನವರು ಒಳಗಾಗದಂತೆ ಪ್ರಜಾಪ್ರಭುತ್ವವಾದಿಗಳು ನೋಡಿಕೊಳ್ಳಬೇಕಾಗಿದೆ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಉಡುಪಿ | ಮಹಾಲಕ್ಷ್ಮೀ ಬ್ಯಾಂಕ್‌ ಅವ್ಯವಹಾರ: ಸರ್ಕಾರದ ಮಧ್ಯಸ್ಥಿಕೆಗೆ ಬಿ ಕೆ ಹರಿಪ್ರಸಾದ್‌ ಆಗ್ರಹ

ಚಂದಪ್ಪ ಮುನಿಯೋಪ್ಪನವರ್, ಶಿವಲಿಂಗ ಹಸನಾಪೂರ, ಭೀಮಣ್ಣ ನಾಟೇಕರ, ಹುರಸಗುಂಡಗಿ, ಬಲಭೀಮ ಬೇವಿನಹಳ್ಳಿ, ವಾಸು ಕೋಗಿಲರ್, ಸಂದೀಪ್ ಹುರಸಗುಂಡಗಿ, ಸುಭಾಷ ಹುರಸಗುಂಡಗಿ, ತಾಯಪ್ಪ ಭಂಡಾರಿ, ಗಂಗರಾಮ ಬಬಲಾದ, ಶರಣಪ್ಪ ದಾಸನಕೇರಿ, ಶಿವಕುಮಾರ, ಗಿರೆಪ್ಪನೊರ, ಮರೆಪ್ಪ ಗಿರೆಪ್ಪನೊರ, ದೊಡ್ಡಬಸಪ್ಪ ಗಿರಿಪ್ಪನೊವರ, ಮೋನೇಶ ಮುನಿಯಪ್ಪನೊರ, ಈಶಪ್ಪ ತುಮಕೂರ, ಭೀಮರಾಯ ಬೆಳಿಗೇರಿ, ದೇವಪ್ಪ ಜೋಗ, ಮರೆಪ್ಪ ಕ್ರಾಂತಿ, ಸಂತೋಷ ಗುಂಡಳ್ಳಿ, ಶರಬಣ್ಣ ರಸ್ತಾಪೂರ, ಶ್ರೀಮಂತ ಸಿಂಗನಹಳ್ಳಿ, ನಾಗರಾಜ ಕೊಡಮನಹಳ್ಳಿ, ಶರಣಪ್ಪ ಕೋಟಿ, ತಿಪ್ಪಣ್ಣ ಶೆಳ್ಳಗಿ, ಶೇಖರ ಮಂಗಳೂರು, ವೆಂಕಟೇಶ ದೇವಾಪೂರ, ರಾಜು ಬಡಿಗೇರ, ಚನ್ನಪ್ಪ ದೇವಾಪೂರ, ಖಾಜಾ ಅಜಮೀರ, ಎಂ ಪಟೇಲ ಅಲ್ಪ ಸಂಖ್ಯಾತ, ರಂಗಸ್ವಾಮಿ ದಾಸರಿ ಕೊಂಕಲ್, ಪುರಷೋತ್ತಮ ಬಬಲಾದ, ಬಾಲರಾಜ ಖಾನಪೂರ, ದೊಡಪ್ಪ ಕಾಡಂಗೇರಾ, ಚನ್ನಬಸ್ಸು ಗುರುಸುಣಗಿ, ಹಣಮಂತ ಗುರುಸುಣಗಿ, ಬಸಪ್ಪ ಕುರಕುಂದಿ, ಮಲ್ಲು ಕೋಳಿ, ಹಣಮಂತ ರಾಯಣ್ಣ ತಾ.ಸಂ.ಸಂಚಾಲಕರು, ಶರಣಪ್ಪ ಮಳ್ಳಳ್ಳಿ ತಾ. ಖಜಾಂಚಿ, ಬಸಲಿಂಗಪ್ಪ ಹಳ್ಳಿ, ಚಂದ್ರ ಬಲಶೆಟ್ಟಿಹಾಳ, ಚೌಡಪ್ಪ ಯಡ್ಡಳ್ಳಿ, ಶರಣಪ್ಪ ಮಾಳೂರು, ಯಲ್ಲಪ್ಪ ಗುಂಡಲಗೇರಿ, ಪರಮಣ್ಣ ಚಲವಾದಿ, ಸಂಗಮೇಶ ಮಾಳೂರು, ಜೈಭೀಮ ಸಿಂಗನಹಳ್ಳಿ, ಭೀಮಾಶಂಕರ ಗುಂಡಳ್ಳಿ, ಮಲ್ಲಪ್ಪ ತಡಿಬಿಡಿ, ಸಿದ್ದಪ್ಪ ಕೊಡಮನಹಳ್ಳಿ, ನಾಗರಾಜ ರಸ್ತಾಪೂರ, ಬಸಲಿಂಗ ಹಾಲಭಾವಿ, ದೇವಪ್ಪ ಕೊಂಬಿನ್, ಭೀಮರಾಯ ಮಂಗಳೂರು, ಹಣಮಂತ ರತ್ನಾಳ, ನಾಗಪ್ಪ ಹಳಿಸಗರ, ರವಿ ಹಳಿಸಗರ, ಮಲ್ಲುಗಡ್ಡಿಮನಿ, ಚಂದ್ರ ಬುದ್ಧನಗರ, ಪರಶುರಾಮ ಸಿಂಗನಹಳ್ಳಿ, ಸಂತೋಷ ಹಾದಿಮನಿ, ಸುನೀಲ ರಬ್ಬನಳ್ಳಿ, ಭೀಮು ಹೊಸಮನಿ, ಪುನೀತ ಹಾದಿಮನಿ, ಶರಣು ಹಾದಿಮನಿ, ಪರಶುರಾಮ ಹಳಿಗೇರಿ, ಮಲ್ಲಪ್ಪ ಅನವಾರ, ಸಾಯಬಣ್ಣ ಬಳ್ಳಕ್ಕಿ, ಸಾಯಬಣ್ಣ ಗುಂಡಳ್ಳಿ ಇದ್ದರು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...