‘ಕನ್ನಡ ಭಾಷೆ ಸಮೃದ್ಧವಾಗಿದೆ ಎಂದು ಕೈಕಟ್ಟಿ ಕುಳಿತುಕೊಳ್ಳದೆ, ಆಧುನಿಕ ಶಿಕ್ಷಣ ಕ್ರಮದ ಮೂಲಕ ಯುವಜನಾಂಗ ಮತ್ತು ಮಕ್ಕಳಲ್ಲಿ ಕನ್ನಡ ಪ್ರೀತಿ ಮೂಡುವಂತೆ ಪಾಲಕರು ಗಮನಹರಿಸಬೇಕು,’ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಾಸುಮಿಯ ನಾಯ್ಕೋಡಿ ಹೇಳಿದರು.
ನಗರದ ಹಳೆ ಪೊಲೀಸ್ ಸ್ಟೇಷನ್ ಹತ್ತಿರ ಜಯ ಕರ್ನಾಟಕ ತಾಲೂಕು ಘಟಕ, ವಡಗೇರಾ ವತಿಯಿಂದ ಶನಿವಾರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಯಿತು. ಘಟಕದ ಅಧ್ಯಕ್ಷ ಭೀಮಣ್ಣ ಬೂದಿನಾಳ ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡಿದರು.
‘ನಾವು ನಮ್ಮ ಭಾಷೆಯನ್ನು ಯಾವುದೇ ಕಾರಣಕ್ಕೂ ಬಲಿ ಕೊಟ್ಟು ಉದಾರಿಗಳಾಗಬಾರದು. ಕನ್ನಡ ಅಭಿಮಾನ ಇರಲೇಬೇಕು. ಅಭಿಮಾನವಿದ್ದರೆ ಮಾತ್ರ ಕನ್ನಡ ಉಳಿಸಿ ಬೆಳೆಸುವುದು ಸಾಧ್ಯ. ಕನ್ನಡ ತಿಳಿಯದವರಿಗೆ ಕನ್ನಡ ಕಲಿಸುವ ಕೆಲಸ ನಡೆಯಬೇಕು,’ ಎಂದು ಅವರು ಸಲಹೆ ನೀಡಿದರು.
ಇದನ್ನು ಓದಿದ್ದೀರಾ? ಕಲಬುರಗಿ | ವಿಕಲಚೇತನ ಶಾಲಾ ಮಕ್ಕಳಿಗೆ ಕಿಟ್ ವಿತರಣೆ ಮೂಲಕ ರಾಜ್ಯೋತ್ಸವ ಆಚರಣೆ
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಕತ್ತಲಿ, ಸಂತೋಷ್ ಬಜ್ಜಿ, ಕುರಕುಂದ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಮಲ್ಲು ಹಲಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೀಮಾಶಂಕರ ಡಿ.ಕೆ. ಕುರುಕುಂದ, ತಾಲೂಕು ಯುವ ಘಟಕ ಅಧ್ಯಕ್ಷ ಹಣಮಂತ ಓಡ್ಕರ್, ತಾಲೂಕು ಉಪಾಧ್ಯಕ್ಷ ಮುತ್ತಣ್ಣ ಜಯದರ್ ಅಂಗಡಿ, ನಿಂಗು ಬಿಳಾರ್, ಶಿವಶರಣಪ್ಪ ಗೋನಾಲ್, ಸಿದ್ಧಪ್ಪ ರೊಟ್ನಡಿಗಿ, ಬಸಲಿಂಗಪ್ಪ ಹಂಚಿನಾಳ, ಮಾಳಿಂಗರಾಯ ಕೋನಹಳ್ಳಿ, ರವಿ ನಸಲೈ (ವಡಗೇರಾ), ಅಕ್ತರ್ ಖುರೇಶಿ, ರಾಮಣ್ಣ ನಾಯಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.





