ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಸಾವೂರ ಗ್ರಾಮದಲ್ಲಿ ಮಂಗನಿಗೂ ಮನುಷ್ಯರಂತೆ ಅಂತ್ಯಸಂಸ್ಕಾರ ನೆರವೇರಿಸಿರುವ ಘಟನೆ ಶುಕ್ರವಾರ ನಡೆದಿದೆ.
ಗುರುವಾರ ಬೆಳಿಗ್ಗೆ ಗ್ರಾಮದ ಹೊರವಲಯದ ಆಲದ ಮರದ ಮೇಲೆ ಮೃತಪಟ್ಟಿದ್ದ ಮಂಗನ ಶವವನ್ನು ಗ್ರಾಮಸ್ಥರು ಗುರುತಿಸಿ. ಪ್ರಾರಂಭದಲ್ಲಿ ಕಾಡಿನಲ್ಲೇ ಹೂಳೋಣವೆಂದು ಕೆಲವರು ಅಭಿಪ್ರಾಯಪಟ್ಟರೂ, ಗ್ರಾಮದ ಹಿರಿಯರು ‘ಈ ಮಂಗ ನಮ್ಮ ಊರಿನ ಸರ್ವರಿಗೂ ಪರಿಚಿತ. ಪ್ರತಿದಿನ ಮನೆಮನೆಗೆ ಬಂದು ಮಕ್ಕಳ ಜೊತೆ ಆಟವಾಡುತ್ತಿತ್ತು. ಗೌರವದಿಂದ ಅಂತ್ಯಸಂಸ್ಕಾರ ಮಾಡೋಣ’ ಎಂದು ನಿರ್ಧರಿಸಿದರು.
ನಂತರ ಗ್ರಾಮಸ್ಥರು ಸೇರಿ ಮಂಗನ ಶವವನ್ನು ಶುದ್ಧ ನೀರಿನಿಂದ ಸ್ನಾನ ಮಾಡಿಸಿ, ಹೂಮಾಲೆಗಳಿಂದ ಅಲಂಕರಿಸಿದರು. ಕೆಲವರು ತುಳಸಿ, ಚಂದನ ಮತ್ತು ಹೂವುಗಳಿಂದ ಪೂಜೆ ನೆರವೇರಿಸಿದರು. ಬಳಿಕ ಬಾಜಾ-ಬಜೆಂತ್ರಿಯ ಸದ್ದಿನ ನಡುವೆ ಮೆರವಣಿಗೆ ನಡೆಸಿ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಆವರಣದಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು.
ಮೆರವಣಿಗೆಯಲ್ಲಿ ಮಹಿಳೆಯರು, ಪುರುಷರು, ಮಕ್ಕಳು ಸೇರಿದಂತೆ ಇಡೀ ಗ್ರಾಮವೇ ಭಾಗವಹಿಸಿತು. ಮೆರವಣಿಗೆಯ ವೇಳೆ ಗ್ರಾಮದ ಕೆಲವರು ಕಣ್ಣೀರಿಟ್ಟರು ಎಂದು ಗ್ರಾಮದ ನಿವಾಸಿ ಮರಲಿಂಗ ಹಿರೇಮಠಿ ತಿಳಿಸಿದರು.

ಮಂಗನಿಗೆ ಮಾನವೀಯ ರೀತಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸುವ ಮೂಲಕ ಸಾವೂರ ಗ್ರಾಮಸ್ಥರು ಪ್ರಾಣಿಪ್ರೀತಿಯ ನಿಜವಾದ ಮಾದರಿ ತೋರಿದ್ದಾರೆ ಎಂದು ಜನರು ಶ್ಲಾಘಿಸಿದ್ದಾರೆ.
ಇದನ್ನು ಓದಿದ್ದೀರಾ? ಯಾದಗಿರಿ | ಸಾರ್ವಜನಿಕ ಶೌಚಾಲಯ ದುರಸ್ತಿಗೆ ಆಗ್ರಹಿಸಿ ಕಾರ್ಮಿಕರ ಸಂಘದ ಮನವಿ
ಮಂಗನಿಗೆ ಗೌರವಪೂರ್ಣವಾಗಿ ವಿದಾಯ ನೀಡಿದ ಸಾವೂರ ಗ್ರಾಮಸ್ಥರ ಈ ಕ್ರಮ ಈಗ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾನವೀಯತೆ ಮತ್ತು ಸಹಾನುಭೂತಿಯ ನಿಜವಾದ ಪಾಠವಾಗಿ ಚರ್ಚೆಯಾಗಿದೆ.





