ಶಿಕ್ಷಕರು ಬೋಧನೆಯಲ್ಲಿ ನೂತನ ವಿಧಾನಗಳು ಹಾಗೂ ಸೃಜನಾತ್ಮಕ ಚಟುವಟಿಕೆಗಳನ್ನು ಅಳವಡಿಸಿಕೊಂಡು ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಸುಧಾರಿಸಲು ಕ್ರಿಯಾಯೋಜನೆ ರೂಪಿಸಿ ಕಾರ್ಯನಿರ್ವಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಈರಣ್ಣ ಕನ್ನಳ್ಳಿ ಅವರು ಹೇಳಿದರು.
ಯಾದಗಿರಿ ತಾಲೂಕಿನ ಮಲ್ಹಾರ ಕ್ಲಸ್ಟರಿನ ಲಿಂಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಮಲ್ಹಾರ ಕ್ಲಸ್ಟರ್ ಮಟ್ಟದ 1–5 FLN (ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನ) ಆಧಾರಿತ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹತ್ತನೇ ತರಗತಿಯ ಫಲಿತಾಂಶ ಸುಧಾರಣೆಯ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳಲ್ಲಿ ಮೂಲಭೂತ ಸಾಕ್ಷರತೆ ಹಾಗೂ ಸಂಖ್ಯಾ ಜ್ಞಾನಕ್ಕೆ ಸಂಬಂಧಿಸಿದ ಕೌಶಲ್ಯಗಳನ್ನು ಚಟುವಟಿಕೆ ಆಧಾರಿತ, ಅನುಭವಾಧಾರಿತ ಹಾಗೂ ಸಂತಸದಾಯಕ ರೀತಿಯಲ್ಲಿ ಬೋಧಿಸಬೇಕು ಎಂದು ಅವರು ಸಲಹೆ ನೀಡಿದರು. ಈ ಕಾರ್ಯದಲ್ಲಿ ಪೋಷಕರು ಶಿಕ್ಷಕರಿಗೆ ಬೆಂಬಲವಾಗಿ ನಿಲ್ಲಬೇಕು’ ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಾಧಿಕಾರಿಗಳಾದ ಜಗದೀಶ್ ಸಜ್ಜನ್, ಚಂದ್ ಸಾಬ್ ಚೌಕಿ, ಕಿಶನ್ ಪವರ್, ಬಿಆರ್ಪಿಗಳಾದ ಯಲ್ಲಪ್ಪ, ಮಲ್ಲಪ್ಪ, ಷಣ್ಮುಖ ಉಪಸ್ಥಿತರಿದ್ದರು.
ಇದನ್ನು ಓದಿದ್ದೀರಾ? ಯಾದಗಿರಿ | ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಸರ್ಕಾರಿ ಶಾಲೆ ಮುಚ್ಚುವ ಷಡ್ಯಂತ್ರ : ಮೈಲಾಪುರ ಗ್ರಾಮಸ್ಥರ ತ್ರೀವ ವಿರೋಧ
ಯಾದಗಿರಿ ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲಯ್ಯ ಸಂಜೀವಿನಿ, ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಹೊನ್ನಪ್ಪ, ಉಪಾಧ್ಯಕ್ಷ ರವಿ ಸ್ವಾಮಿ, ರಾಚಪ್ಪ ಗ್ರಾಮ ಪಂಚಾಯಿತಿ ಸದಸ್ಯರು, ಮುಖ್ಯಗುರು ಸುಜಾತ ಸೇರಿದಂತೆ ಶಿಕ್ಷಕರು ಹಾಗೂ ಪೋಷಕರು ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಶಿಕ್ಷಕ ತಿಮ್ಮಣ್ಣ ಹಕ್ಕಿ ಸ್ವಾಗತಿಸಿ, ತಾಯಪ್ಪ ನಿರೂಪಿಸಿದರು. ಶ್ರೀ ಲಕ್ಷ್ಮಿಕಾಂತ್ ವಂದಿಸಿದರು.





