ಹಳ್ಳಿ ಸೊಬಗಿನ ಹಾಡುಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಶನಿವಾರ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಿತು.
ಮಾತೆ ಸಾವಿತ್ರಿಬಾಯಿ ಫುಲೆ ಸಾಮಾಜಿಕ ಶಿಕ್ಷಣ ಟ್ರಸ್ಟ್ (ರಿ), ದೋರನಹಳ್ಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಹಳ್ಳಿ ಸೊಬಗಿನ ಹಾಡುಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಫುಲೆಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಾಯಿತು.

ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣದಲ್ಲಿ ದಲಿತ ಸಂಘರ್ಷ ಸಮಿತಿ ಮುಖಂಡ ಮರೆಪ್ಪ ಚಟ್ಟೇಕರ್ ಮಾತನಾಡಿ, ಶೋಷಿತ ಸಮುದಾಯಗಳಿಗೆ ಶಿಕ್ಷಣದ ಮೂಲಕ ಸಮಾನತೆ ಮತ್ತು ಗೌರವಯುತ ಜೀವನ ಕಲ್ಪಿಸುವಲ್ಲಿ ಮಾತೆ ಸಾವಿತ್ರಿಬಾಯಿ ಫುಲೆ ಅಪಾರ ಸೇವೆ ಸಲ್ಲಿಸಿದ್ದಾರೆ ಎಂದರು.
‘ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. ಡಾ. ಬಿ.ಆರ್. ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ದಹಿಸಿ, ಸರ್ವರಿಗೂ ಸಮಪಾಲು–ಸಮಬಾಳಿನ ಆಶಯದೊಂದಿಗೆ ಸಂವಿಧಾನವನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆ’ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಅಹಿಂದ ಮುಖಂಡ ಹಣಮೇಗೌಡ ಬೀರನಕಲ್ ಮಾತನಾಡಿ, ‘ಸಾವಿತ್ರಿಬಾಯಿ ಫುಲೆ ಎಲ್ಲರಿಗೂ ಶಿಕ್ಷಣ ನೀಡಿದ ಮಹಾನ್ ಚೇತನ. ಇಂದು ನಾವು ಸಮಾನವಾಗಿ ವೇದಿಕೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗಿರುವುದು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಫಲ. ಶೋಷಿತರ ಧ್ವನಿಯಾಗಿ ನಾವೆಲ್ಲರೂ ಕೆಲಸ ಮಾಡಬೇಕು’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವಿನೋದಗೌಡ ಮಾಲಿ ಪಾಟೀಲ್, ನಿಜಾಗುಣ ದೋರನಹಳ್ಳಿ, ಶರಣು ಟಿ. ಬಿರನೂರ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮರೆಪ್ಪ ಕಸನ್, ಮಲ್ಲಿಕಾರ್ಜುನ ಚಲುವಾದಿ, ಮರಲಿಂಗಪ್ಪ ರೆಡ್ಡಿ, ಮರಿಲಿಂಗಪ್ಪ, ಮಾನಪ್ಪ ಸಗರ, ಭೀಮರಾಯ ಚಾಮನಾಳ, ಸಂಗಣ್ಣ ರಾಕಂಗೇರಾ, ಪರಶುರಾಮ ಕುದುರಿ, ಅಂಬರೀಶ್ ರಾಕಂಗೇರಾ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು.

ಈ ವೇಳೆ ವಿನೋದಗೌಡ, ಚಿದಾನಂದ ಬಡಿಗೇರ, ಭಾಗಣ್ಣಗೌಡ ದೋರನಹಳ್ಳಿ, ಸಿದ್ದಣ್ಣ ರಾಕಂಗೇರಾ, ಮಾನಪ್ಪ ಹುಲಸೂರು, ನಿಂಗಣ್ಣ ನಾಟೇಕಾರ, ರಾಜು ಅಣಬಿ, ಸಂಗಣ್ಣಗೌಡ ಪೋ. ಪಾಟೀಲ, ಮಲ್ಲಿಕಾರ್ಜುನ ಹೊಸ್ಮನಿ, ಸಿದ್ದಣ್ಣ ದೇಸಾಯಿ, ಮಾನಪ್ಪ ಹಾಲಭಾವಿ, ರಾಯಪ್ಪ ಬೇವಿನಹಳ್ಳಿ, ಹಣಮಂತ ಕುದುರಿ, ಅರಣಕುಮಾರ ಸೈದಾಪೂರ, ವಿಶಾಲ ಸಿಂದೆ, ಅಂಬೇಶಸ್ವಾಮಿ ಹಿರೇಮಠ, ಮಹೇಶ ಪತ್ತಾರ, ಜಗದೀಶ ಬಿದರಾಣಿ, ಸುಧಾಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಇದನ್ನು ಓದಿದ್ದೀರಾ? ಬೀದರ್ | ದೇಶದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷದ ಕೊಡುಗೆ ಅನನ್ಯ : ಸಚಿವ ಈಶ್ವರ ಖಂಡ್ರೆ
ಕಾರ್ಯಕ್ರಮದಲ್ಲಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಕೊಳಲು ವಾದನ ಹಾಗೂ ಜನದನಿ ಕಲಾತಂಡ ಬೆಂಗಳೂರು ವತಿಯಿಂದ ಜನಪದ, ಕ್ರಾಂತಿ ಗೀತೆಗಳನ್ನು ಹಾಡುವುದರ ಮೂಲಕ ಜನರನ್ನು ರಂಜಿಸದರು.
ಕಾರ್ಯಕ್ರಮವನ್ನು ವಿಶ್ವ ನಾಟೇಕಾರ್ ನಿರೂಪಿಸಿದರು. ಶಿವಕುಮಾರ್ ಪೋತೆ ಸ್ವಾಗತಿಸಿದರು. ಶೇಖರ್ ಬಡಿಗೇರ್ ವಂದಿಸಿದರು.





