ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕಕ್ಕಸಗೇರಾ ಗ್ರಾಮದಲ್ಲಿ ದಲಿತ ಸಮುದಾಯದ ವತಿಯಿಂದ 208ನೇ ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ಬುಧವಾರ ಶಾಂತಿಯುತವಾಗಿ ಹಾಗೂ ಉತ್ಸಾಹದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ವಕ್ತಾರರು, ‘ಭೀಮಾ ಕೋರೆಗಾಂವ್ ಯುದ್ಧವು ಹಣ, ಆಸ್ತಿ ಅಥವಾ ಸಾಮ್ರಾಜ್ಯ ವಿಸ್ತರಣೆಗೆ ನಡೆದ ಯುದ್ಧವಲ್ಲ. ಮೇಲ್ವರ್ಗದ ದರ್ಪದ ವಿರುದ್ಧವಾಗಿ ಕೆಳವರ್ಗದ ಸ್ವಾಭಿಮಾನಕ್ಕಾಗಿ ನಡೆದ ಮಹಾನ್ ಹೋರಾಟ ಇದಾಗಿದ್ದು, ಶೋಷಿತ ಸಮುದಾಯದ ಆತ್ಮಗೌರವದ ಸಂಕೇತವಾಗಿದೆ ಎಂದು ಹೇಳಿದರು. 1818ರ ಜನವರಿ 1ರಂದು ಇಡೀ ವಿಶ್ವ ಹೊಸ ವರ್ಷದ ಸಂಭ್ರಮದಲ್ಲಿದ್ದಾಗ, ನಮ್ಮ ಪೂರ್ವಜರು ಶೋಷಣೆಯ ವಿರುದ್ಧ ಆಯುಧ ಹಿಡಿದು ಹೋರಾಡಿ ಇತಿಹಾಸ ನಿರ್ಮಿಸಿದ್ದಾರೆ’ ಎಂದು ಸ್ಮರಿಸಿದರು.
‘ಭೀಮಾ ಕೋರೆಗಾಂವ್ ಹೋರಾಟವು ದಲಿತ ವೀರಶೂರರ ತ್ಯಾಗ, ಧೈರ್ಯ ಹಾಗೂ ಆತ್ಮಗೌರವದ ಅಮೋಘ ಉದಾಹರಣೆಯಾಗಿದ್ದು, ಈ ಸತ್ಯ ಇತಿಹಾಸವನ್ನು ಯಾವತ್ತೂ ಮುಚ್ಚಿಡಲು ಸಾಧ್ಯವಿಲ್ಲ. ಶೋಷಿತ ಸಮುದಾಯದ ಸ್ವಾಭಿಮಾನವನ್ನು ಜಗತ್ತಿಗೆ ಸಾರಿದ ಈ ಹೋರಾಟ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು.
ಇದನ್ನು ಓದಿದ್ದೀರಾ? ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿಗೆ ಕಲಬುರಗಿ ಜಿಲ್ಲೆಯ ಮೂವರು ಮಹಿಳಾ ಸಾಧಕಿರು ಆಯ್ಕೆ
ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ್ ಅಂಗಡಿ, ಬಾಲಪ್ಪ ಅಮ್ಮಪುರ, ನಿಂಗಪ್ಪ ಕಟ್ಟಿಮನಿ, ಭೀಮಣ್ಣ ಬಿರನೂರ, ಹಣಮಂತ ದೊಡ್ಮನಿ, ನಿಂಗಪ್ಪ ದೊಡ್ಮನಿ, ಹಣಮಂತ ಅಮ್ಮಪುರ, ಭೀಮರಾಯ ವಡಗೇರಾ, ಭೀಮಣ್ಣ ಪಡಸಾಲಿ, ಜೈ ಭೀಮ್ ಬಡಿಗೇರ್, ಬಾಲಪ್ಪ ಎವೂರ್, ಬಸಪ್ಪ ಕರಿಕಲ್, ಅಶೋಕ್ ವಡಗೇರಿ, ನಿಂಗಪ್ಪ ಬಡಿಗೇರ, ಶಶಿಕುಮಾರ್ ದೊಡ್ಮನಿ, ಸುನೀಲ್ ಕುಮಾರ್ ಎವೂರ್, ಮಲ್ಲು ಅಂಗಡಿ, ಸುದೀಪ್ ಬಡಿಗೇರ್, ನಿಂಗಪ್ಪ ಗುಂಡಕನಾಳ ಸೇರಿದಂತೆ ಅನೇಕ ದಲಿತ ಮುಖಂಡರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.





