ಹುರಸಗುಂಡಗಿ ಗ್ರಾಮದಿಂದ ದೋರನಹಳ್ಳಿ ಸಂಪರ್ಕ ರಸ್ತೆಯ ಮೇಲಿರುವ ಸೂರತ್, ಚೆನ್ನೈ ರಾಷ್ಟ್ರೀಯ ಹೆದ್ದಾರಿಯ ಬಿದರಾಣಿ, ಹುರಸಗುಂಡಗಿ ಮಧ್ಯದ ಸುರಂಗ ಮಾರ್ಗ (ಬ್ರಿಡ್ಜ್) ಎತ್ತರ ಹೆಚ್ಚಿಸುವಂತೆ ಆಗ್ರಹಿಸಿ ರೈತ ಮುಖಂಡರು ಶನಿವಾರ ಹೈವೇ ಇಂಚಾರ್ಜ್ ನಾಗರ್ಜುನ್ ಅವರಿಗೆ ಮನವಿ ಸಲ್ಲಿಸಿದರು
ಮನವಿ ಸಲ್ಲಿಸಿ ರೈತ ಮುಖಂಡರು ಮಾತನಾಡಿ ‘ಬ್ರಿಡ್ಜ್ ಎತ್ತರ ಕಡಿಮೆಯಿಂದ ಹತ್ತಿ ಸೇರಿದಂತೆ ಕೃಷಿ ಉತ್ಪನ್ನಗಳನ್ನು ಸಾಗಿಸಲು ಸಾಧ್ಯವಾಗದೆ, ಕಳೆದ ಒಂದು ವರ್ಷದಿಂದ ರೈತರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಟ್ರ್ಯಾಕ್ಟರ್ ಹಾಗೂ ಸರಕು ವಾಹನಗಳ ಸಂಚಾರಕ್ಕೂ ಅಡಚಣೆ ಉಂಟಾಗಿದೆ’ ಎಂದು ತಿಳಿಸಿದರು.
‘ಮಳೆಗಾಲದಲ್ಲಿ ಸುರಂಗದ ಕೆಳಭಾಗದಲ್ಲಿ ನೀರು ನಿಲ್ಲುವುದರಿಂದ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತಿದ್ದು, ಅಪಘಾತಗಳ ಭೀತಿ ಹೆಚ್ಚುತ್ತಿದೆ. ಒಳಚರಂಡಿ ವ್ಯವಸ್ಥೆ ಕಲ್ಪಿಸಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕೆಂದು’ ಅವರು ಒತ್ತಾಯಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಹೈವೇ ಇಂಚಾರ್ಜ್ ನಾಗರ್ಜುನ್ ಪರಿಶೀಲನೆ ನಡೆಸಿ, ಒಂದು ವಾರದೊಳಗೆ ಬಾಕಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.
ಇದನ್ನು ಓದಿದ್ದೀರಾ? ಯಾದಗಿರಿ | ಆಸ್ತಿ ವಿವಾದ, ಹಳೆಯ ವೈಷಮ್ಯ ಹಿನ್ನೆಲೆ ₹2.50 ಲಕ್ಷ ಸುಪಾರಿಗೆ ತಂದೆಯ ಕೊಲೆ; ಮಗ ಸೇರಿ ಐವರ ಬಂಧನ
ಈ ಸಂದರ್ಭದಲ್ಲಿ ರೈತ ಸಂಘಟನೆಯ ಸದಸ್ಯರಾದ ಮರೆಪ್ಪ, ತಾಯಪ್ಪ, ರವಿ (ಇಬ್ರಾಹಿಂಪುರ), ರಾಮಚಂದ್ರ (ಬಿದರಾಣಿ), ಸಕ್ರಪ್ಪ (ಮೇಲಾಗಿರಿ), ವೆಂಕಟೇಶ್, ಭಾಗರೆಡ್ಡಿ (ರಸ್ತಾಪುರ), ದೇವು, ತುಕ್ಕನರ ಸಾಬಣ್ಣ, ವಿಶ್ವ (ಮೇಲಾಗಿರಿ), ಶಿವು, ಸಿದ್ದು (ಅಲ್ಲೂರು), ಶೇಖರ, ವಿಶ್ವಪಂಡಿತ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.





