ಜಾತಿ ಆಧಾರಿತ ತಾರತಮ್ಯ ಮತ್ತು ಲಿಂಗ ಅಸಮಾನತೆಯ ವಿರುದ್ಧ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು 1927ರ ಡಿಸೆಂಬರ್ 25ರಂದು ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಮಹಡ್ನಲ್ಲಿ ನಡೆಸಿದ ಐತಿಹಾಸಿಕ ಮನಸ್ಮೃತಿ ದಹನದ ಸ್ಮರಣಾರ್ಥವಾಗಿ ಗುರುವಾರ ಮನಸ್ಮೃತಿ ದಹನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಶಹಾಪುರ ಪಟ್ಟಣದ ಹೃದಯಭಾಗದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಯ ಮುಂಭಾಗದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಮನಸ್ಮೃತಿಯ ಪ್ರತಿಯನ್ನು ಸುಟ್ಟು, ಸಾಮಾಜಿಕ ಅನ್ಯಾಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಇದು ಭಾರತೀಯ ಸಾಮಾಜಿಕ ನ್ಯಾಯ ಹೋರಾಟದ ಮಹತ್ವದ ಘಟನೆ ಎಂದು ಪ್ರತಿಭಟನಾಕಾರರು ಹೇಳಿದರು.
‘ಸಂವಿಧಾನಾತ್ಮಕ ಮೌಲ್ಯಗಳು, ಸಾಮಾಜಿಕ ಸಮಾನತೆ ಮತ್ತು ಮಾನವ ಗೌರವವನ್ನು ಕಾಪಾಡುವ ಹೋರಾಟ ನಿರಂತರವಾಗಬೇಕೆಂದು’ ಪ್ರತಿಭಟನೆಯಲ್ಲಿ ಆಗ್ರಹಿಸಲಾಯಿತು.
ಇದನ್ನು ಓದಿದ್ದೀರಾ? ಯಾದಗಿರಿ | ದಸಂಸ ವತಿಯಿಂದ “ಮನುಸ್ಮೃತಿ ದಹನ”
ಈ ಸಂದರ್ಭದಲ್ಲಿ ಶಿವಕುಮಾರ್ ತಳವಾರ, ಮರೆಪ್ಪ ಬಿ. ಜಾಲಿ ಮಂಚಿ, ಸುಭಾಷ್ ತಳವಾರ, ಶರಣು ದೋರನಹಳ್ಳಿ, ಭೀಮರಾಯ ನಾಗನಟ್ಟಿಗಿ, ಈರಣ್ಣ ಶಹಾಪುರ, ನಾಗರಾಜ್ ಶಹಾಪುರ, ಈರಣ್ಣ ಗಂಗನಾಳ, ಬಸವರಾಜ್ ಸಾದಾಪುರ, ಮಾಳಪ್ಪ ಸಲದಪುರ, ತಿಪ್ಪಣ್ಣ ಹಾದಿಮನಿ, ಮೌನೇಶ್ ಶೆಟ್ಟಗೆರ, ವಿಜಯಕುಮಾರ್ ಗೋಗಿ, ಭೀಮು ದಿಗ್ಗಿ, ಮಾಳಪ್ಪ ಗಂಗನಾಳ, ದೇವೇಂದ್ರ ದಿಗ್ಗಿ, ಆಮ್ಲಪ್ಪ ಹಾದಿಮನಿ, ಮರೆಪ್ಪ ಮುಂಡಾಸ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.





