ಯಾದಗಿರಿ | ಕೋಲಿ ಸಮಾಜ ಎಸ್‌ಟಿಗೆ ಸೇರ್ಪಡೆಯಾಗದೇ ಇರಲು ರಾಜ್ಯ ಕೇಂದ್ರ ಸರ್ಕಾರಗಳೇ ಕಾರಣ; ಉಮೇಶ ಮುದ್ನಾಳ್‌ ಆರೋಪ

Date:

ಸಮಾಜದ ಅಭಿವೃದ್ಧಿಗೆ ತಮ್ಮ ಜೀವಮಾನವನ್ನೇ ಅರ್ಪಣೆ ಮಾಡಿದ ವಿಠಲ್ ಹೇರೂರು ಅವರ ಹೆಸರನ್ನು ಉಳಿಸಬೇಕಾಗಿದೆ. ಹಿಂದುಳಿದ ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡ(ಎಸ್‌ಟಿ)ಗಳಿಗೆ ಸೇರ್ಪಡೆ ಪ್ರಮುಖ ಬೇಡಿಕೆಯಾಗಿದ್ದು, ಇದಕ್ಕಾಗಿ ಹಗಲಿರುಳು ಶ್ರಮಿಸಿ ತಮ್ಮ ಜೀವನವನ್ನೇ ಸವೆಸಿದ ಧೀಮಂತ ನಾಯಕರು ವಿಠಲ್ ಹೇರೂರು ಎಂದು ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ್ ಹೇಳಿದರು.

ಯಾದಗಿರಿ ನಗರದ ಟೋಕ್ರೆ ಕೋಲಿ ಸಮಾಜದ ಜಿಲ್ಲಾ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಾಜಿ ಮುಖ್ಯ ಸಚೇತಕ್ ದಿ. ವಿಠಲ್ ಹೇರೂರು‌ ಅವರ 10ನೇ ಪುಣ್ಯ ಸ್ಮರಣೆ ವೇಳೆ ಮಾತನಾಡಿದರು.

“ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೋಲಿ ಸಮಾಜ ಸ್ಪಂದನೆ ನೀಡದೇ ಇರುವುದರಿಂದ ಈವರೆಗೆ ಹೇರೂರು ಅವರ ಆಸೆ ಈಡೇರದಂತಾಗಿದೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಕೆಲವು ರಾಜಕಾರಣಿಗಳು ಕುತಂತ್ರದಿಂದ ನಮ್ಮ ಸಮುದಾಯ ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಮುಂದೆ ಬಾರದಂತಾಗಿದೆ. ಆದರೆ ಸ್ವಾತಂತ್ರ್ಯ ನಂತರ ಇಂದಿಗೂ ವೋಟ್ ಬ್ಯಾಂಕ್ ಆಗಿ ನಮ್ಮನ್ನು ಬಳಸಿಕೊಂಡಿದ್ದಾರೆ. ಸೌಲಭ್ಯ ನೀಡಲು, ಸಮಾಜಿಕ ನ್ಯಾಯ ಕೊಡುವಲ್ಲಿ ವಿಫಲರಾಗಿದ್ದಾರೆ” ಎಂದು ಆರೋಪಿಸಿದರು.

“ಅಂಬಿಗರ ಚೌಡಯ್ಯನವರನ್ನು ರಾಜ್ಯದ ಎಲ್ಲ ಕಡೆ ಪರಿಚಯಿಸಿದ ಮಹಾನ್ ಧೀಮಂತ  ಪುರುಷರಾಗಿದ್ದು, ಪ್ರತಿಯೊಬ್ಬರೂ ಇವರ ಸ್ಮರಣೆ ಮಾಡಬೇಕು. ಇವರಿಂದಾಗಿ ಜಯಂತ್ಯೋತ್ಸವ ಆಯಿತು. ಚೌಡಯ್ಯ ನಿಗಮ ಆಗಲು ಇವರು ಕಾರಣಕರ್ತರಾಗಿದ್ದಾರೆ. ಹಾವೇರಿಯಲ್ಲಿ ಅಂಬಿಗರ ಚೌಡಯ್ಯ ಪೀಠ ಆಗಲು ಇವರು ಕಾರಣಕರ್ತರಾಗಿದ್ದಾರೆ” ಎಂದು ವಿವರಿಸಿದರು.

ಈ ಸುದ್ದಿ ಓದಿದ್ದೀರಾ? ಯಾದಗಿರಿ | ಮೋದಿ ಸೆಲ್ಫಿ ಪಾಯಿಂಟ್ ಸ್ಥಾಪನೆಗೆ ಯುಜಿಸಿ ಸೂಚನೆ; ಎಐಡಿಎಸ್ಒ ಆಕ್ಷೇಪ

ಈ ಸಂದರ್ಭದಲ್ಲಿ ಬಸವರಾಜ ಇಟಗಿ ವಡಗೇರಿ, ಯಲ್ಲಪ್ಪ ವಂಟೂರ, ಬನ್ನಯ್ಯ ಸ್ವಾಮಿ ಯರಗೋಳ, ಶಹಾಪೂರ ಎಪಿಎಂಸಿ ಅದ್ಯಕ್ಷ ಅಯ್ಯಣ್ಣ ಹಾಲಗೇರಿ, ಆಂಜಿನೇಯ ಬೆಳಗೇರಿ, ಬಾಬುಖಾನ್ ಹೊಸಳ್ಳಿ, ರಫೀಕ್ ಪಟೇಲ್, ಬನ್ನಪ್ಪ, ಸುನಿಲ್ ಕುಮಾರ, ಶರಣಪ್ಪ ಉಳ್ಳೆಸುಗೂರ, ಮಲ್ಲಿಕಾರ್ಜುನ ಅರಿಕೇರಿ, ಯಲ್ಲಾಲಿಂಗ ಚಾಮನಳ್ಳಿ, ಕಾಶಿನಾಥ ಕೆ ಎಸ್. ಲಕ್ಷಣ, ಭೀಮರಾಯ, ಲಿಂಗಪ್ಪ ಸಣ್ಣ ಶಿವಪ್ಪ, ಗುಂಜಲಪ್ಪ, ಶಿವರಾಜ, ನಿಂಗಪ್ಪ, ತಿಮಮಣ್ಣ ನಾಗಪ್ಪ, ಮಾದೇವಪ್ಪ, ಗುರುನಾಥ, ತಿಮ್ಮಣ್ಣ ದಳಪತಿ, ದೇವಿಂದ್ರಪ್ಪ, ಬಸವರಾಜ ಹೋರುಂಚಿ, ಕೋಟೇಶ, ಶರಣು, ಭೀಮರಾಯ, ವಿಶ್ವನಾಥ, ದೇವಿಂದ್ರ, ಶರಣಪ್ಪ, ಅಶೋಕ, ರಡ್ಡಿ ಜಮಾಲ್, ರಫೀ, ಮಿಸ್ಕಿನ್, ಬನಶಂಕರ, ಅಜೀಜ್, ಅರುಣ, ಅಂಬ್ರೆಸ್ ತಿಮ್ಮಣ್ಣ ಖಾನಾಪೂರ ಸೇರಿದಂತೆ ಸಮಾಜದ ಹಿರಿಯುರು, ಯುವಕರು ವಿಠಲ್ ಹೇರೂರ ಅವರ ಅಭಿಮಾನಿಗಳು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...