ಇತ್ತೀಚೆಗೆ ಕೇಂದ್ರ ಸರ್ಕಾರವು ಜಿಎಸ್ಟಿ ದರ ಪತಿಷ್ಕರಣೆ ನಡೆಸಿದೆ. ಹಲವು ವಸ್ತುಗಳ ಮೇಲಿನ ತೆರಿಗೆ ಪ್ರಮಾಣವನ್ನು ಕಡಿತಗೊಳಿಸಿದೆ. ಆದರೆ, ಜಿಎಸ್ಟಿ ದರ ಕಡಿತದ ಹೊರೆಯನ್ನು ಕೇಂದ್ರ ಸರ್ಕಾರವು ರಾಜ್ಯಗಳ ಮೇಲೆ ಹೇರಿದೆ. ಇದರಿಂದ, ರಾಜ್ಯಗಳ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಹಲವು ರಾಜ್ಯಗಳು ಕಳವಳ ವ್ಯಕ್ಯಪಡಿಸಿವೆ. ರಾಜ್ಯಗಳ ಮೇಲಾಗುವ ಹೊರೆಯನ್ನು ತಗ್ಗಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿವೆ.
ಜಿಎಸ್ಟಿ ಕಡಿತದ ಹೊರೆಯು ರಾಜ್ಯಗಳ ಮೇಲೆ ಬೀಳಲಿದೆ. ಪರಿಣಾಮ, ಕರ್ನಾಟಕಕ್ಕೆ 18,500 ಕೋಟಿ ರೂ. ನಷ್ಟವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದೆಯೇ ಹೇಳಿದ್ದರು. ಜಿಎಸ್ಟಿ ದರ ಕಡಿತವನ್ನು ಖಂಡಿಸಿದ್ದರು. ಇದೀಗ, ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಸೆಸ್ನಿಂದ ಸಂಗ್ರಹವಾಗುವ ಆದಾಯದಲ್ಲಿ 50% ಹಣವನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.



