ಲೆಕ್ಕ ಪರಿಶೋಧಕರು ಮತ್ತು ಕಂಪನಿ ಕಾರ್ಯದರ್ಶಿಗಳಿಗೂ ಕಾಡಲಿದೆ ಪಿಎಂಎಲ್‌ಎ ಗುಮ್ಮ

Date:

ಲೆಕ್ಕಪರಿಶೋಧಕರು ಮತ್ತು ಕಂಪನಿ ಕಾರ್ಯದರ್ಶಿಗಳನ್ನು ಪಿಎಂಎಲ್‌ಎ ವ್ಯಾಪ್ತಿಯಡಿ ಸೇರಿಸುತ್ತಿರುವುದು ಹಣಕಾಸು ವೃತ್ತಿಪರರ ನಡುವೆ ಅಸಮಾಧಾನ ಮೂಡಿಸಿದೆ.

ಜಾಗತಿಕ ಹಣ ದುರುಪಯೋಗ ಮತ್ತು ಉಗ್ರವಾದಕ್ಕೆ ಹಣ ವರ್ಗಾವಣೆಯ ಕಾವಲುಗಾರ ಸಂಸ್ಥೆ ಹಣಕಾಸು ಕ್ರಿಯಾ ಕಾರ್ಯಪಡೆ ಅಥವಾ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್‌ಫೋರ್ಸ್‌ (ಎಫ್‌ಎಟಿಎಫ್‌) ಒಳಗೆ ಭಾರತ ಸದಸ್ಯನಾಗುವ ಬಗ್ಗೆಇದೇ ವರ್ಷ ನಿರ್ಧಾರ ಕೈಗೊಳ್ಳುವುದು ಬಾಕಿ ಇರುವಾಗ ಕೇಂದ್ರ ಸರ್ಕಾರ ಹಣ ದುರುಪಯೋಗ ತಡೆ ಕಾಯ್ದೆಯಲ್ಲಿ (ಪಿಎಂಎಲ್‌ಎ) ಕೆಲವು ಮಹತ್ವದ ಬದಲಾವಣೆಗಳನ್ನು ತರುತ್ತಿದೆ.

ಕಳೆದ ಕೆಲವು ತಿಂಗಳಿಂದ ಕೇಂದ್ರ ಸರ್ಕಾರ ಪಿಎಂಎಲ್‌ಎಗೆ ತಿದ್ದುಪಡಿ ತರುವ ಪ್ರಯತ್ನದಲ್ಲಿದೆ. ಪ್ರಮುಖ ತಿದ್ದುಪಡಿಯಾಗಿ ಲೆಕ್ಕ ಪರಿಶೋಧಕರು, ಕಂಪನಿ ಕಾರ್ಯದರ್ಶಿಗಳು, ತಮ್ಮ ಗ್ರಾಹಕರಿಗೆ ಲೆಕ್ಕಿಗರು ಮಾಡುವ ಕೆಲಸ ಮತ್ತು ವೆಚ್ಚ ಪಿಎಂಎಲ್‌ಎ ಕಾಯ್ದೆಯಡಿಗೆ ತರುವ ಪ್ರಯತ್ನವಾಗುತ್ತಿದೆ. ಜೊತೆಗೆ, ಅಮೆಜಾನ್ ಪೇ (ಇಂಡಿಯಾ) ಪ್ರೈವೇಟ್ ಲಿಮಿಟೆಡ್‌, ಆದಿತ್ಯ ಬಿರ್ಲಾ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಹಾಗೂ ಐಐಎಫ್‌ಎಲ್ ಫೈನಾನ್ಸ್ ಲಿಮಿಟೆಡ್‌ನಂತಹ 22 ಹಣಕಾಸು ಸಂಸ್ಥೆಗಳಿಗೆ ಆಧಾರ್ ಮೂಲಕ ತಮ್ಮ ಗ್ರಾಹಕರನ್ನು ಪರಿಶೀಲಿಸಲು ಮತ್ತು ಗುರುತಿಸಲು ಅವಕಾಶ ಕೊಡಲಾಗುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪಿಎಂಎಲ್‌ಎ ಅಡಿಯಲ್ಲಿ ಮಾಡಲಾಗುವ ಬದಲಾವಣೆಗಳೇನು?

ಮಾರ್ಚ್‌ನಲ್ಲಿ ಹಣಕಾಸು ಸಚಿವಾಲಯ ಹಣ ದುರುಪಯೋಗ ನಿಯಮಗಳನ್ನು ಬದಲಿಸಿ ಸರ್ಕಾರೇತರ ಸಂಘಟನೆಗಳು ತಮ್ಮ ಅನುದಾನದ ಬಗ್ಗೆ ಹೆಚ್ಚು ವಿವರ ಬಹಿರಂಗಪಡಿಸಬೇಕಾಗುವಂತೆ ಬದಲಾವಣೆ ಮಾಡಿದೆ. ಅಂದರೆ, ಹಣಕಾಸು ಸಂಸ್ಥೆಗಳು, ಬ್ಯಾಂಕಿಂಗ್ ಕಂಪನಿಗಳು ಅಥವಾ ಮಧ್ಯವರ್ತಿ ಹಣಕಾಸು ಸಂಸ್ಥೆಗಳಿಗೆ ವರದಿ ಮಾಡುವ ಮೂಲಕ ವಿವರ ನೀಡುವುದು. ಹೆಚ್ಚುವರಿಯಾಗಿ, “ರಾಜಕೀಯವಾಗಿ ಬಹಿರಂಗಗೊಂಡ ವ್ಯಕ್ತಿಗಳು” (ಪಿಇಪಿಗಳು)  ಎನ್ನುವ ವ್ಯಾಖ್ಯಾನವನ್ನು ಮುಂದಿಟ್ಟಿದೆ.

ಪಿಎಂಎಲ್‌ಎ ಅಡಿಯಲ್ಲಿ ವಿದೇಶಗಳಿಂದ ದೇಶದಲ್ಲಿ ಪ್ರಮುಖ ಸಾರ್ವಜನಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ನಿಯೋಜಿತರಾದ ವಿದೇಶಿ ಪ್ರಜೆಗಳ ಮೇಲೂ ಕಣ್ಣಿಡಲಾಗುವುದು. ರಾಜ್ಯಗಳು ಅಥವಾ ಸರ್ಕಾರಗಳ ಮುಖ್ಯಸ್ಥರು, ಹಿರಿಯ ರಾಜಕಾರಣಿಗಳು, ಹಿರಿಯ ಸರ್ಕಾರಿ ಅಥವಾ ನ್ಯಾಯಾಂಗ ಅಥವಾ ಸೇನಾಧಿಕಾರಿಗಳು, ರಾಜ್ಯದ ಅಡಿಯಲ್ಲಿ ಬರುವ ಪಾಲಿಕೆಗಳ ಹಿರಿಯ ಕಾರ್ಯಕಾರಿ ಸಿಬ್ಬಂದಿಗಳು ಮತ್ತು ಪ್ರಮುಖ ರಾಜಕೀಯ ಪಕ್ಷದ ಅಧಿಕಾರಿಗಳು ಈ ‘ಪಿಇಪಿಗಳು’ ವ್ಯಾಖ್ಯಾನದಡಿ ಬರುತ್ತಾರೆ. ಈ ತಿದ್ದುಪಡಿ ವಿದೇಶಿ ಪಿಇಪಿಗಳಿಗೆ ಅನ್ವಯವಾಗುತ್ತದೆಯೇ ವಿನಾ ಭಾರತೀಯ ಪ್ರಜೆಗಳಿಗಲ್ಲ.

ಮೇ 3ರಂದು ಹಣಕಾಸು ಸಚಿವಾಲಯ ವೃತ್ತಿನಿರತ ಲೆಕ್ಕ ಪರಿಶೋಧಕರು, ಕಂಪನಿ ಕಾರ್ಯದರ್ಶಿಗಳು ಹಾಗೂ ಲೆಕ್ಕಿಗರು ತಮ್ಮ ಗ್ರಾಹಕರ ಪರವಾಗಿ ಮಾಡುವ ಹಣಕಾಸು ವ್ಯವಹಾರಗಳ ಕಾರ್ಯ ಮತ್ತು ವೆಚ್ಚವನ್ನೂ ಪಿಎಂಎಲ್‌ಎ ಅಡಿಗೆ ತರಲಾಗಿದೆ. ಇವುಗಳಳಲ್ಲಿ ಸ್ಥಿರಾಸ್ತಿಗಳ ಖರೀದಿ ಮತ್ತು ಮಾರಾಟ, ಗ್ರಾಹಕರ ಹಣ ನಿಭಾಯಿಸುವುದು, ಸೆಕ್ಯುರಿಟೀಸ್ ಅಥವಾ ಇತರ ಆಸ್ತಿಗಳು, ಬ್ಯಾಂಕ್ ನಿರ್ವಹಣೆ, ಉಳಿತಾಯ ಅಥವಾ ಭದ್ರತಾ ಠೇವಣಿಗಳು, ಕಂಪನಿಗಳ ವ್ಯವಹಾರಕ್ಕೆ ಹಣಕಾಸು ನಿಯೋಜನೆ, ಸಹಭಾಗಿತ್ವದ ಎಲ್‌ಎಲ್‌ಪಿಗಳು ಅಥವಾ ಟ್ರಸ್ಟ್‌ಗಳ ವ್ಯವಹಾರ ಹಾಗೂ ಉದ್ಯಮ ಸಂಸ್ಥೆಗಳ ಖರೀದಿ ಮತ್ತು ಮಾರಾಟವೂ ಪಿಎಂಎಲ್‌ಎ ಅಡಿಯಲ್ಲಿ ಬರಲಿದೆ.

ಮೇ 4ರಂದು ವರದಿ ಸಲ್ಲಿಸಬೇಕಾದ ಬ್ಯಾಂಕಿಂಗೇತರ ಸಂಸ್ಥೆಗಳ ಪಟ್ಟಿಯಲ್ಲಿ 22 ಹಣಕಾಸು ಸಂಸ್ಥೆಗಳನ್ನು ಸೇರಿಸಿದೆ. ಅಂದರೆ, ತಮ್ಮ ಗ್ರಾಹಕರು ಪಿಎಂಎಲ್‌ಎ ಅಡಿಯಲ್ಲಿ ಬರುವ ಅವ್ಯವಹಾರಗಳಲ್ಲಿ ನಿರತರಾಗಿದ್ದಾರೆಯೇ ಎಂದು ಆಧಾರ್ ಮೂಲಕ ಪರಿಶೀಲಿಸುವ ಮತ್ತು ಗುರುತಿಸುವ ಅಧಿಕಾರವನ್ನು ಈ ಬ್ಯಾಂಕಿಂಗೇತರ ಸಂಸ್ಥೆಗಳಿಗೆ ನೀಡಿದೆ. ಕಳೆದ ತಿಂಗಳು ಐಟಿ ಸಚಿವಾಲಯ ಈ ಖಾಸಗಿ ಸಂಸ್ಥೆಗಳಿಗೆ ಅನೇಕ ಸೇವೆಗಳಿಗೆ ಆಧಾರ್ ಅಧಿಕೃತಗೊಳಿಸಿದೆ. ಹಾಗೆ ಆಧಾರ್‌ ಬಳಕೆಯನ್ನು ಸಚಿವಾಲಯ ಮತ್ತು ಇಲಾಖೆ ಮೀರಿ ವಿಸ್ತೃತಗೊಳಿಸಿದೆ.

ಈ ಸುದ್ದಿ ಓದಿದ್ದೀರಾ?: ಈದಿನ.ಕಾಮ್‌ ಸಮೀಕ್ಷೆ-8: ಕಾಂಗ್ರೆಸ್‌ಗೆ ಸಿಗಲಿದೆ ಸ್ಪಷ್ಟ ಬಹುಮತ; 132-140 ಸೀಟುಗಳ ನಿರೀಕ್ಷೆ

ಬದಲಾವಣೆಗಳಿಗೆ ಪ್ರತಿಕ್ರಿಯೆ ಹೇಗಿದೆ?

ಹಣಕಾಸು ವೃತ್ತಿಪರರು ಹೊಸ ಬದಲಾವಣೆಯ ಬಗ್ಗೆ ಬಹಿರಂಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆಡಿಟರ್‌ಗಳು ಮತ್ತು ಹಣಕಾಸು ಸಂಬಂಧಿ ಕಾನೂನು ವೃತ್ತಿಪರರನ್ನು ಇಂತಹ ತನಿಖಾ ವ್ಯಾಪ್ತಿಯಿಂದ ಹೊರಗಿಟ್ಟಿರುವುದನ್ನು ಪ್ರಶ್ನಿಸುತ್ತಿದ್ದಾರೆ. ಅಲ್ಲದೆ, ಲೆಕ್ಕ ಪರಿಶೋಧಕರು ತನಿಖಾ ಸಂಸ್ಥೆಗಳಿಂದ ಕಿರುಕುಳ ಎದುರಿಸಬೇಕಾಗುವ ಸಂದರ್ಭಗಳು ಬರಬಹುದೆನ್ನುವ ಆತಂಕ ವ್ಯಕ್ತಪಡಿಸಿದ್ದಾರೆ.

ಲೆಕ್ಕಪರಿಶೋಧಕರು ಮತ್ತು ಇತರ ಹಣಕಾಸು ವೃತ್ತಿಪರರನ್ನು ನಿಯಂತ್ರಿಸಲು ಈಗಾಗಲೇ ಸಂಸತ್ತಿನ ಅಡಿಯಲ್ಲಿ ವಿವಿಧ ಕಾಯ್ದೆಗಳು ಇರುವಾಗ ಪಿಎಂಎಲ್‌ಎ ಅಡಿಯಲ್ಲಿ ಅವರನ್ನು ತರುವುದು ಅನಗತ್ಯ ಎನ್ನುವ ಅಭಿಪ್ರಾಯವೂ ಕೇಳಿ ಬಂದಿದೆ.

ಹಣಕಾಸು ವೃತ್ತಿಪರರನ್ನು ಪಿಎಂಎಲ್‌ಎ ಅಡಿ ತರಲು ಕಾರಣವೇನು?

ಎಫ್‌ಎಟಿಎಫ್‌ನ ಭಾಗವಾಗಬೇಕೆಂದಿದ್ದರೆ ಭಾರತ ಪಿಎಂಎಲ್‌ಎ ಕಾಯ್ದೆಯಡಿ ವೃತ್ತಿಪರರನ್ನು ತರುವ ಅನಿವಾರ್ಯತೆ ಎದುರಿಸುತ್ತಿದೆ. ಎಫ್‌ಎಟಿಎಫ್‌ನ ಭಾಗವಾಗುವ ಮುನ್ನ ಈ ಕ್ರಮವನ್ನು ಭಾರತ ತೆಗೆದುಕೊಳ್ಳಲೇಬೇಕಿದೆ. ಆದರೆ ಪಿಎಂಎಲ್‌ಎ ಕೇವಲ ತೀರ್ಪು ನೀಡುವ ಪ್ರಾಧಿಕಾರ ಹೊಂದಿದೆ. ಈ ಮೇಲ್ಮನವಿ ನ್ಯಾಯಮಂಡಳಿ ಕ್ರಿಮಿನಲ್ ಕ್ರಮ ಕೈಗೊಳ್ಳುವ ಅಧಿಕಾರ ಹೊಂದಿಲ್ಲದೆ ಇರುವುದು ವೃತ್ತಿಪರರಿಗೆ ಸಮಾಧಾನ ತರಲಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...