1% ಕುಬೇರರ ಬಳಿಯಿದೆ ಭಾರತದ 60% ಸಂಪತ್ತು: ಬರ್ನ್‌ಸ್ಟೈನ್ ವರದಿ

Date:

ಭಾರತದ ಒಟ್ಟು ಸಂಪತ್ತಿನಲ್ಲಿ 60% ಮತ್ತು ದೇಶದ ಒಟ್ಟು ಹಣಕಾಸು ಆಸ್ತಿಗಳಲ್ಲಿ 70% ಸಂಪತ್ತನ್ನು ಭಾರತದ ಕೇವಲ 1% ಕುಟುಂಬಗಳು ನಿಯಂತ್ರಿಸುತ್ತಿವೆ. ಭಾರತದ ಬಹುತೇಕ ಆರ್ಥಿಕ ಆಸ್ತಿಯು 1% ಕುಟುಂಬಗಳ ಬಳಿ ಇದೆ ಎಂದು ಬರ್ನ್‌ಸ್ಟೈನ್‌ ವರದಿ ಹೇಳಿದೆ.

ಖಾಸಗಿ ಹಣಕಾಸು ನಿರ್ವಹಣೆ ಸಂಸ್ಥೆಯಾಗಿರುವ ‘ಬರ್ನ್‌ಸ್ಟೈನ್‌’ ತನ್ನ ಹೊಸ ವರದಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಅದರಲ್ಲಿ; ಭಾರತದ ಅತ್ಯಂತ ಶ್ರೀಮಂತ ಕುಟುಂಬಗಳನ್ನು ‘ಉಬರ್ ರಿಚ್’ (ಕುಬೇರರು) ಎಂದು ಕರೆದಿದೆ. ಈ 1% ಇರುವ ಕುಬೇರರು ಭಾರತದ ಒಟ್ಟು ಸಂಪತ್ತಿನಲ್ಲಿ 60% ಪಾಲು ಹೊಂದಿದ್ದಾರೆ. ಇವರ ಬಹುತೇಕ ಹೂಡಿಕೆಗಳು ರಿಯಲ್‌ ಎಸ್ಟೇಟ್‌ ಮತ್ತು ಚಿನ್ನದಲ್ಲಿವೆ ಎಂದು ವಿವರಿಸಿದೆ.

ಭಾರತದ ಒಟ್ಟು ಸಂಪತ್ತು 19.6 ಲಕ್ಷ ಕೋಟಿ ಡಾಲರ್‌ ಎಂದು ಅಂದಾಜಿಸಲಾಗಿದೆ. ಇದರಲ್ಲಿ, 59% (11.6 ಲಕ್ಷ ಕೋಟಿ ಡಾಲರ್‌) ಸಂಪತ್ತು ಕೇವಲ 1% ಶ್ರೀಮಂತರ ಬಳಿ ಕೇಂದ್ರೀಕರಣಗೊಂಡಿದೆ ಎಂದು ವರದಿ ಹೇಳಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಕುಬೇರರು ತಮ್ಮ ಒಟ್ಟು ಆಸ್ತಿಗಳ ಪೈಕಿ ಸುಮಾರು 55%ಗೂ (8.9 ಲಕ್ಷ ಕೋಟಿ ಡಾಲರ್‌) ಸಂಪತ್ತನ್ನು ರಿಯಲ್‌ ಎಸ್ಟೇಟ್‌, ಚಿನ್ನ ಹಾಗೂ ಪ್ರವರ್ತಕರ ಶೇರು ಬಂಡವಾಳ ಅಥವಾ ನಗದು ಹಿಡುವಳಿಗಳಂತಹ ಬಂಡವಾಳಗಳಲ್ಲಿವೆ ಹೂಡಿಕೆ ಮಾಡಿವೆ ಎಂದು ವರದಿ ತಿಳಿಸಿದೆ.

ಈ ಲೇಖನ ಓದಿದ್ದೀರಾ?: ಭಯೋತ್ಪಾದನಾ ಆರೋಪಿಯನ್ನು ಹಿಂದುತ್ವದ ನಾಯಕಿ ಮಾಡಿದ ಬಿಜೆಪಿ

ಶ್ರೀಮಂತ ಕುಟುಂಬಗಳು ಹೂಡಿಕೆ ಮಾಡಿರುವ ಒಟ್ಟು ಬಂಡವಾಳ 8.9 ಲಕ್ಷ ಕೋಟಿ ಡಾಲರ್‌ಗಳ ಪೈಕಿ, ಕೇವಲ 2.7 ಲಕ್ಷ ಕೋಟಿ ಡಾಲರ್‌ಗಳು ಮಾತ್ರವೇ ಮ್ಯೂಚ್ಯುವಲ್‌ ಫಂಡ್‌ಗಳು, ಶೇರುಗಳು, ವಿಮೆ, ಬ್ಯಾಂಕ್‌ ಹಾಗೂ ಸರ್ಕಾರಿ ಠೇವಣಿ ರೀತಿಯ ನಿರ್ವಹಿಸಬಹುದಾದ ಅಥವಾ ಮರುಹಂಚಿಕೆ ಮಾಡಬಹುದಾದ ಹಣಕಾಸು ಸ್ವತ್ತುಗಳಲ್ಲಿ ಹೂಡಿಕೆಯಾಗಿದೆ ಎಂಬುದನ್ನು ವರದಿ ಬಹಿರಂಗಪಡಿಸಿದೆ.

ಸಂಪತ್ತಿನ ಕ್ರೋಢೀಕರಣದಿಂದಾಗಿ ಅಸಮಾನತೆ ಹೆಚ್ಚಾಗಿದ್ದು, ಭಾರತದಲ್ಲಿನ ವ್ಯಾಪಕ ರಚನಾ ಪ್ರವೃತ್ತಿಯನ್ನು ಈ ವರದಿಯು ಎತ್ತಿ ತೋರಿಸಿದೆ. ದೇಶದ 99% ಕುಟುಂಬಗಳು ಆದಾಯ ಮತ್ತು ಆಸ್ತಿಯಲ್ಲಿ ಸಣ್ಣ ಪಾಲನ್ನು ಮಾತ್ರವೇ ಹೊಂದಿವೆ ಎಂದು ಈ ವರದಿಯು ಒತ್ತಿ ಹೇಳಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...