ಈಶಾನ್ಯ ರಾಜ್ಯಗಳಲ್ಲಿ ಪ್ರವಾಹ ಮತ್ತು ಭೂಕುಸಿತ ಉಂಟಾಗಿದ್ದು ಸಾವಿನ ಸಂಖ್ಯೆ ಏರಿಕೆಯಾಗುತ್ತಾ ಸಾಗುತ್ತಿದೆ. ಅಸ್ಸಾಂ ಪ್ರವಾಹದಲ್ಲಿ ಶನಿವಾರ ಇನ್ನೂ ಮೂವರು ಸಾವನ್ನಪ್ಪಿದ್ದು ಈಶಾನ್ಯದಲ್ಲಿ ಒಟ್ಟು ಸಾವನ್ನಪ್ಪಿದವರ ಸಂಖ್ಯೆಯನ್ನು 56ಕ್ಕೆ ತಲುಪಿದೆ.
ಕ್ಯಾಚಾರ್, ಕರೀಂಗಂಜ್ ಜಿಲ್ಲೆ ಮತ್ತು ಹೈಲಕಂಡಿ ಜಿಲ್ಲೆಗಳಲ್ಲಿ ಅಧಿಕ ಸಾವು ಸಂಭವಿಸಿದೆ. ಅಸ್ಸಾಂ ಮತ್ತು ಮಣಿಪುರ ಎರಡರಲ್ಲೂ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಕೇಂದ್ರ ಜಲ ಆಯೋಗವು ಹಲವು ಪ್ರದೇಶಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ.
ಇದನ್ನು ಓದಿದ್ದೀರಾ? ಅಸ್ಸಾಂ ಪ್ರವಾಹ: ಒಂದು ಸಾವು, 9 ಜಿಲ್ಲೆಯ 1.98 ಲಕ್ಷ ಜನಕ್ಕೆ ತೊಂದರೆ
ಶುಕ್ರವಾರ ಪ್ರವಾಹ ಪೀಡಿತ ಜನರ ಸಂಖ್ಯೆ 3.49 ಲಕ್ಷವಾಗಿತ್ತು. ಈ ಸಂಖ್ಯೆಯು ಶನಿವಾರದ ವೇಳೆ ಆರು ಲಕ್ಷಕ್ಕೆ ಏರಿದೆ. ನಾಗಾಂವ್ ಜಿಲ್ಲೆಯಲ್ಲಿ 2.79 ಲಕ್ಷ ಜನರು ಹಾನಿಗೊಳಗಾಗಿದ್ದಾರೆ. ಒಟ್ಟಾರೆಯಾಗಿ 10 ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿದ್ದು, ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 187 ಪರಿಹಾರ ಶಿಬಿರಗಳಲ್ಲಿ 41,000ಕ್ಕೂ ಹೆಚ್ಚು ಜನರು ಆಶ್ರಯ ಪಡೆದಿದ್ದಾರೆ.
The flood situation in Assam remains grim as the death toll has increased to 11 as of June 1, with 6,01,642 population affected in ten districts of the state. According to the Assam State Disaster Management Authority data, ten districts, including Hailakandi, Hojai, Morigaon,… pic.twitter.com/lX49rRC58Y
— The Assam Tribune (@assamtribuneoff) June 2, 2024
ನೂರಾರು ಜನರು ಪ್ರವಾಹದಲ್ಲಿ ಸಿಲುಕಿರುವ ಕಾರಣ, ಎನ್ಡಿಆರ್ಎಫ್ ಹೆಚ್ಚುವರಿ ತಂಡವನ್ನು ಶನಿವಾರ ದಕ್ಷಿಣ ಅಸ್ಸಾಂನ ಬರಾಕ್ ಕಣಿವೆಗೆ ವಿಮಾನದಲ್ಲಿ ರವಾನಿಸಿದೆ. ಈ ತಂಡವನ್ನು ಗುವಾಹಟಿಯ ಬೋರ್ಜಾರ್ನ ಲೋಕಪ್ರಿಯಾ ಗೋಪಿನಾಥ್ ಬೊರ್ಡೊಲೊಯ್ ಇಂಟರ್ನ್ಯಾಶನಲ್ (ಎಲ್ಜಿಬಿಐ) ವಿಮಾನ ನಿಲ್ದಾಣದಿಂದ ಕ್ಯಾಚಾರ್ನಲ್ಲಿರುವ ಸಿಲ್ಚಾರ್ ವಿಮಾನ ನಿಲ್ದಾಣಕ್ಕೆ ರವಾನಿಸಲಾಗಿದೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಎನ್ಡಿಆರ್ಎಫ್ನ 1ನೇ ಬೆಟಾಲಿಯನ್ ಜಿಲ್ಲಾಡಳಿತ ಮತ್ತು ರಾಜ್ಯ ಆಡಳಿತಕ್ಕೆ ಸಹಾಯ ಮಾಡುತ್ತಿದೆ. ಎನ್ಡಿಆರ್ಎಫ್ ನಿಯಮಿತವಾಗಿ ಪ್ರವಾಹ ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳುತ್ತಿದೆ. ದೋಬೋಕಾ ಮತ್ತು ಹೊಜೈನಲ್ಲಿರುವ ಕಂದುಲಿಮರಿ ಮತ್ತು ಬಲಿರಾಮ್ ಪಥರ್ ಗ್ರಾಮಗಳಲ್ಲಿ 47 ಮಕ್ಕಳು ಮತ್ತು ಒಬ್ಬ ಗರ್ಭಿಣಿ ಮಹಿಳೆ ಸೇರಿದಂತೆ ಒಟ್ಟು 149 ಜನರನ್ನು ರಕ್ಷಿಸಲಾಗಿದೆ.





