ಬಿಹಾರ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇವೆ. ಪಕ್ಷಗಳು ಚುನಾವಣಾ ಪ್ರಚಾರ ನಡೆಸುತ್ತಿವೆ. ಈ ನಡುವೆ, ಒಂದೇ ಗ್ರಾಮದ ಐವರು ಮತದಾರರು ತಮ್ಮನ್ನು ‘ಸತ್ತವರು’ ಎಂದು ಮತಪಟ್ಟಿಯಿಂದ ಕಿತ್ತುಹಾಕಿರುವುದನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ. ಕಳೆದ 2-3 ತಿಂಗಳಲ್ಲಿ ನಡೆದ ಮತದಾರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (ಎಸ್ಐಆರ್) ಪ್ರಕ್ರಿಯೆಯಲ್ಲಿ ಬದುಕಿದ್ದವರನ್ನೂ ಸತ್ತಿದ್ದಾರೆಂದು ಚುನಾವಣಾ ಆಯೋಗ ಮತಪಟ್ಟಿಯಿಂದ ಕಿತ್ತುಹಾಕಿದೆ ಎಂಬುದಕ್ಕೆ ಮತ್ತೊಂದು ಪ್ರಕರಣ ಸೇರಿಕೊಂಡಿದೆ.
ಧೋರೈಯಾ ಪ್ರದೇಶದ ಬಟ್ಸರ್ ಗ್ರಾಮದ ಐವರು ಮತದಾರರನ್ನು ಚುನಾವಣಾ ಆಯೋಗ ಮತಪಟ್ಟಿಯಿಂದ ಕಿತ್ತುಹಾಕಿದೆ. ಅವರನ್ನು ಸತ್ತಿದ್ದಾರೆಂದು ಉಲ್ಲೇಖಿಸಿದೆ.
ಮೋಹನ್ ಸಾ (ಸೀರಿಯಲ್ ಸಂಖ್ಯೆ 2), ಸಂಜಯ್ ಯಾದವ್ (ಸೀರಿಯಲ್ ಸಂಖ್ಯೆ 175), ರಾಮರೂಪ್ ಯಾದವ್ (ಸೀರಿಯಲ್ ಸಂಖ್ಯೆ 211), ನರೇಂದ್ರ ಕುಮಾರ್ ದಾಸ್ (ಸೀರಿಯಲ್ ಸಂಖ್ಯೆ 364) ಹಾಗೂ ವಿಶ್ವವರ್ ಪ್ರಸಾದ್ (ಸೀರಿಯಲ್ ಸಂಖ್ಯೆ 380) ಮತಪಟ್ಟಿಯಿಂದ ಹೊರಗುಳಿದಿರುವ ಮತದಾರರು.
ಈ ಐವರೂ ತಮ್ಮ ಗ್ರಾಮದ ಬೂತ್ ಸಂಖ್ಯೆ 216ರ ನಿವಾಸಿಗಳು ಬಿಡಿಒ ಅರವಿಂದ್ ಕುಮಾರ್ ಅವರನ್ನು ಸಂಪರ್ಕಿಸಿ ‘ಸರ್, ನಾವು ಜೀವಂತವಾಗಿದ್ದೇವೆ’ ಎಂದು ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ಈ ಲೇಖನ ಓದಿದ್ದೀರಾ?: Bihar SIR | ಬಿಜೆಪಿ-ಚುನಾವಣಾ ಆಯೋಗದ ಕುತಂತ್ರಕ್ಕೆ 47 ಲಕ್ಷ ಮತದಾರರು ಬಲಿ
ಬಿಡಿಒ ಕುಮಾರ್ ತಕ್ಷಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಫಾರ್ಮ್ -6 ಅನ್ನು ಭರ್ತಿ ಮಾಡಲು ಮತ್ತು ಹೆಸರುಗಳನ್ನು ಮರುಸ್ಥಾಪಿಸಲು ಬಿಎಲ್ಒಗೆ ಸೂಚಿಸಿದ್ದಾರೆ. ಯಾವುದೇ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗುವುದಿಲ್ಲ ಎಂದು ಹೇಳಿದ್ದಾರೆ.




