ಅಲ್ಲು ಅರ್ಜುನ್ ಕೇಸಿನಲ್ಲಿ ಭಾರೀ ಅನಿರೀಕ್ಷಿತ ತಿರುವು!

Date:

ಗಲ್ಲಾಪೆಟ್ಟಿಗೆಯಲ್ಲಿ ಹೊಸ ದಾಖಲೆ ಸೃಷ್ಟಿಸಿರುವ ಪುಷ್ಪ-2 ನಾಯಕ ನಟ ಅಲ್ಲು ಅರ್ಜುನ್ ಬಂಧನ-ಬಿಡುಗಡೆಯ ನಾಟಕೀಯ ಬೆಳವಣಿಗೆ ಶುಕ್ರವಾರ ನಡೆಯಿತು. ಇದರ ಬೆನ್ನಲ್ಲೇ ಈ ಪ್ರಕರಣ ಮತ್ತೊಂದು ಅನಿರೀಕ್ಷಿತ ತಿರುವು ಪಡೆಯಿತು ಕೂಡ.

ಪುಷ್ಪ-2 ಬಿಡುಗಡೆಯ ದಿನದಂದು ಸಿನೆಮಾ ಥಿಯೇಟರಿನ ಕಾಲ್ತುಳಿತದಲ್ಲಿ ಅಭಿಮಾನಿ ಮಹಿಳೆಯೊಬ್ಬಳ ಸಾವಿನ ಕೇಸಿಗೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ಬಂಧನಕ್ಕೆ ಒಳಗಾಗಿದ್ದರು. ಈ ಬಂಧನದಲ್ಲಿ ತನ್ನ ಪಾತ್ರವೇನೂ ಇಲ್ಲ ಎಂದು ತೆಲಂಗಾಣದ ರೇವಂತ ರೆಡ್ಡಿ ಸರ್ಕಾರ ತರಾತುರಿಯಲ್ಲಿ ಸಾರಿ ಹೇಳಿದೆ.

ಅಷ್ಟೇ ಅಲ್ಲ, ಮೃತ ಮಹಿಳೆ ರೇವತಿಯ ಪತಿ ಭಾಸ್ಕರ್, ಈ ಸಂಬಂಧದ ದೂರನ್ನು ವಾಪಸು ಪಡೆಯಲು ಸಿದ್ಧವೆಂದು ಸಾರಿದ್ದಾನೆ. ಕಾಲ್ತುಳಿತ ಮತ್ತು ತನ್ನ ಪತ್ನಿಯ ಸಾವಿಗೆ ಅಲ್ಲು ಅರ್ಜುನ್ ಜವಾಬ್ದಾರರಲ್ಲ ಎಂದೂ ಹೇಳಿದ್ದಾರೆ. ನಮ್ಮ ಮಗನ ಒತ್ತಾಯಕ್ಕಾಗಿ ಪುಷ್ಪ-2 ನೋಡಲು ಅಂದು ನಾವು ಸಂಧ್ಯಾ ಥಿಯೇಟರಿಗೆ ಹೋಗಿದ್ದೆವು. ಅಲ್ಲು ಅರ್ಜುನ್ ಅಂದೇ ಥಿಯೇಟರಿಗೆ ಬಂದದ್ದು ಅವರ ತಪ್ಪೆಂದು ಹೇಗೆ ಹೇಳೋದು? ಕೇಸು ವಾಪಸು ಪಡೆಯಲು ನಾನು ತಯಾರಿದ್ದೇನೆ. ಅಲ್ಲು ಅರ್ಜುನ್ ಬಂಧನದ ಸುದ್ದಿ ಆಸ್ಪತ್ರೆಯಲ್ಲಿ ಟೀವಿ ಚಾನೆಲ್ ನೋಡ್ತಿದ್ದಾಗ ಗೊತ್ತಾಯ್ತು ಎಂದಿದ್ದಾರೆ. ಭಾಸ್ಕರ್ ಅವರ ದೂರಿನ ಮೇರೆಗೆ ಅಲ್ಲು ಅರ್ಜುನ್ ಅವರನ್ನು ಬಂಧಿಸಿಲಾಗಿತ್ತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...