ಅಮುಲ್ ಹಾಲಿನಲ್ಲಿ 98 ಪಟ್ಟು, ಮೊಸರಿನಲ್ಲಿ 2,100 ಪಟ್ಟು ಹೆಚ್ಚು ಬ್ಯಾಕ್ಟೀರಿಯಾಗಳಿವೆ: ವರದಿ

Date:

ಕನ್ನಡಿಗರ ಮೇಲೆ ಹೇರಲು ಉದ್ದೇಶಿಸಿದ್ದ ಗುಜರಾತ್‌ ಮೂಲದ ‘ಅಮುಲ್‌’ ಸಂಸ್ಥೆ ಉತ್ಪನ್ನಗಳ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಗಂಭೀರ ಚರ್ಚೆ ನಡೆಯುತ್ತಿದೆ. ಅಮುಲ್ ಹಾಲು ಮತ್ತು ಮೊಸರು ಉತ್ಪನ್ನಗಳ ಸುರಕ್ಷತೆ ಕುರಿತು ಗಂಭೀರ ಆತಂಕ ವ್ಯಕ್ತವಾಗುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ವರದಿಯೊಂದು ಅಮುಲ್ ಹಾಲು ಮತ್ತು ಮೊಸರು ಬಳಸಲು ಜನರು ಭಯಪಡುವಂತೆ ಮಾಡಿದೆ.

‘ಲ್ಯಾಬ್ ಟೆಸ್ಟಿಂಗ್ ಪ್ಲಾಟ್‌ಫಾರ್ಮ್ ಟ್ರಸ್ಟಿಫೈಡ್’ ಎಂಬ ಸ್ವತಂತ್ರ ಸಂಸ್ಥೆಯು ಅಮುಲ್ ಹಾಲು ಮತ್ತು ಮೊಸರನ್ನು ಬ್ಲೈಂಡ್ ಟೆಸ್ಟ್‌ಗೆ ಒಳಪಡಿಸಿದೆ. ಈ ವೇಳೆ, ಅಮುಲ್ ಪೌಚ್ ಹಾಲಿನಲ್ಲಿ ‘ಕಾಲಿಫಾರ್ಮ್ ಬ್ಯಾಕ್ಟೀರಿಯಾ’ಗಳ ಸಂಖ್ಯೆ ‘ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ’ (FSSAI) ನಿಗದಿಪಡಿಸಿದ ಮಿತಿಗಿಂತ 98 ಪಟ್ಟು ಹೆಚ್ಚು ಇದೆ. ಅಂತೆಯೇ, ಅಮುಲ್ ಮಸ್ತಿ ಮೊಸರಿನಲ್ಲಿಯೂ 2,100 ಪಟ್ಟು ಹೆಚ್ಚಿವೆ ಎಂಬುದು ಕಂಡುಬಂದಿದೆ ಎಂದು ಹೇಳಲಾಗಿದೆ.

FSSAI ಮಾನದಂಡಗಳ ಪ್ರಕಾರ, ಪ್ರತಿ ಮಿಲಿ ಲೀಟರ್‌ ಹಾಲಿನಲ್ಲಿ 10 ‘ಕಾಲಿಫಾರ್ಮ್ ಬ್ಯಾಕ್ಟೀರಿಯಾ’ ಪ್ರಮಾಣವು 10 CFU (ಕಾಲೊನಿ ಫಾರ್ಮಿಂಗ್ ಯೂನಿಟ್) ಮಾತ್ರವೇ ಇರಬೇಕು. ಅದಕ್ಕಿಂತ ಹೆಚ್ಚು ಇರಬಾರದು. ಆದರೆ, ಅಮುಲ್ ತಾಜಾ ಮತ್ತು ಅಮುಲ್ ಗೋಲ್ಡ್ ಪೌಚ್ ಹಾಲಿನಲ್ಲಿ ಪ್ರತಿ ಮಿಲಿ ಲೀಟರ್‌ಗೆ ‘ಕಾಲಿಫಾರ್ಮ್ ಬ್ಯಾಕ್ಟೀರಿಯಾ’ ಪ್ರಮಾಣವು 980 CFUರಷ್ಟಿದೆ. ಇದು, ನಿಗದಿಗಿಂತ ಬರೋಬ್ಬರಿ 98 ಪಟ್ಟು ಹೆಚ್ಚಿದೆ ಎಂದು ತಿಳಿದುಬಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅಂತೆಯೇ, ಪ್ರತಿ ಗ್ರಾಂ ಮೊಸರಿನಲ್ಲಿ ‘ಕಾಲಿಫಾರ್ಮ್ ಬ್ಯಾಕ್ಟೀರಿಯಾ’ ಪ್ರಮಾಣವು 10 CFUರಷ್ಟಿರಬೇಕು. ಆದರೆ, ಅಮುಲ್ ಮಸ್ತಿ ಮೊಸರಿನಲ್ಲಿ ಪ್ರತಿ ಗ್ರಾಂಗೆ ‘ಕಾಲಿಫಾರ್ಮ್ ಬ್ಯಾಕ್ಟೀರಿಯಾ’ ಪ್ರಮಾಣ 21,000 CFUಗೆ ತಲುಪಿದೆ. ಅಂದರೆ, 2100 ಪಟ್ಟು ಹೆಚ್ಚಾಗಿದೆ. ಇದಲ್ಲದೆ ಯೀಸ್ಟ್ ಮತ್ತು ಮೋಲ್ಡ್‌ ಮೊಸರಿನಲ್ಲಿ 60 ಪಟ್ಟು ಹೆಚ್ಚು ಇದೆ ಎಂಬುದು ಪರೀಕ್ಷೆಯಲ್ಲಿ ಕಂಡುಬಂದಿರುವುದಾಗಿ ವರದಿಯಾಗಿದೆ.

ಗಮನಾರ್ಹವಾಗಿ, ಕಾಲಿಫಾರ್ಮ್ ಬ್ಯಾಕ್ಟೀರಿಯಾ ಮನುಷ್ಯರು ಮತ್ತು ಪ್ರಾಣಿಗಳ ಕರುಳಿನಲ್ಲಿ ಸಾಮಾನ್ಯವಾಗಿ ಕಂಡುಬರುವ ಬ್ಯಾಕ್ಟೀರಿಯಾಗಳ ಗುಂಪಾಗಿದೆ. ಇವು ಸ್ವತಃ ತೀವ್ರ ಕಾಯಿಲೆಗಳನ್ನು ಉಂಟುಮಾಡದಿದ್ದರೂ, ಹೆಚ್ಚಿನ ಪ್ರಮಾಣದಲ್ಲಿ ಇದ್ದರೆ ಮಲದಿಂದ ಮಾಲಿನ್ಯ (ಫೀಕಲ್ ಕಂಟ್ಯಾಮಿನೇಷನ್) ಆಗಿರುವ ಸಾಧ್ಯತೆಯನ್ನು ಸೂಚಿಸುತ್ತದೆ.

ಪ್ಯಾಕ್ ಮಾಡಲಾದ ಹಾಲಿನಲ್ಲಿ ಈ ಬ್ಯಾಕ್ಟೀರಿಯಾಗಳ ಸಂಖ್ಯೆ ಕಡಿಮೆ ಇರಬೇಕು. ಏಕೆಂದರೆ, ಪಾರ್ಶ್ವೀಕರಣದ ವೇಳೆ ಉಷ್ಣ ಚಿಕಿತ್ಸೆಯಿಂದಾಗಿ ಈ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಒಂದು ವೇಳೆ, ಈ ಬ್ಯಾಕ್ಟೀಕರಿಯಾಗಳ ಸಂಖ್ಯೆ ಹೆಚ್ಚಿದ್ದರೆ, ಪೌಚ್ ಪ್ಯಾಕೇಜಿಂಗ್, ಹ್ಯಾಂಡಲಿಂಗ್ ಅಥವಾ ಪಾಸ್ಚರೈಸೇಷನ್ ಪ್ರಕ್ರಿಯೆಯಲ್ಲಿ ಸಮಸ್ಯೆಗಳಾಗಿರುತ್ತವೆ. ಅಥವಾ, ಪ್ಯಾಕೇಜಿಂಗ್‌ ಬಳಿಕ, ಹಾಲು ಅಥವಾ ಮೊಸಲು ಮಲಿನಗೊಂಡಿರುತ್ತವೆ ಎಂದು ಸೂಚಿಸಿದೆ.

ಕಾಲಿಫಾರ್ಮ್ ಬ್ಯಾಕ್ಟೀರಿಯಾ ಸಂಖ್ಯೆ ಹೆಚ್ಚಿದ್ದಲ್ಲಿ, ಇತರ ಹಾನಿಕರ ಬ್ಯಾಕ್ಟೀರಿಯಾ ಅಥವಾ ಪ್ಯಾಥೋಜನ್‌ಗಳು (ಸಾಲ್ಮೊನೆಲ್ಲಾ, ಶಿಗೆಲ್ಲಾ ರೀತಿಯವರು) ಹೆಚ್ಚಾಗಬಹುದು ಎಂಬ ಭಯ ಉಂಟಾಗುತ್ತದೆ. ಅಲ್ಲದೆ, ಇದರಿಂದಾಗಿ, ಹೊಟ್ಟೆ ಉಬ್ಬರ, ತೀವ್ರ ಡೈರಿಯಾ, ವಾಂತಿ, ತಲೆನೋವು, ಜ್ವರ ಹಾಗೂ ಫುಡ್‌ ಪಾಯಿಸನ್‌ ಲಕ್ಷಣಗಳು ಕಂಡುಬರುತ್ತವೆ. ಮಕ್ಕಳು, ವೃದ್ಧರು ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಇರುವವರನ್ನು ತೀವ್ರವಾಗಿ ಬಾಧಿಸುತ್ತದೆ. ದೀರ್ಘಕಾಲದಲ್ಲಿ ಕಿಡ್ನಿ ಸಮಸ್ಯೆಗಳು ಅಥವಾ ಇತರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಆದರೆ ಇದು ಎಲ್ಲರಲ್ಲೂ ತೀವ್ರ ಕಾಯಿಲೆ ಉಂಟುಮಾಡುವುದಿಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಆದಾಗ್ಯು, ಅಮುಲ್‌ನ ಟೆಟ್ರಾ ಪ್ಯಾಕ್ (UHT) ಹಾಲು ಮತ್ತು ಕಪ್ ದಹಿ ಸುರಕ್ಷಿತವಾಗಿವೆ ಎಂದು ಟ್ರಸ್ಟಿಫೈಡ್ ವರದಿ ಹೇಳಿದೆ. ಹಾಲು ಮತ್ತು ಮೊಸರಿನಲ್ಲಿ ಪ್ರಯೋಗಾಲಯ ಪರೀಕ್ಷೆಗಳನ್ನು ‘ಟ್ರಸ್ಟಿಫೈಡ್’ ಸಂಸ್ಥೆಯು ಬ್ಲೈಂಡ್ ವಿಧಾನದಲ್ಲಿ ನಡೆಸಿದ್ದು, ಬ್ರ್ಯಾಂಡ್ ಹೆಸರುಗಳನ್ನು ಮರೆಮಾಚಿ ಮಾಡಲಾಗಿತ್ತು ಎಂದು ಹೇಳಿಕೊಂಡಿದೆ.

ತಮ್ಮ ಉತ್ಪನ್ನಗಳ ಮೇಲಿನ ಆರೋಪವನ್ನು ಅಮುಲ್ ಕಂಪನಿ ತಿರಸ್ಕರಿಸಿದೆ. ತಮ್ಮ ಉತ್ಪನ್ನಗಳು 50ಕ್ಕೂ ಹೆಚ್ಚು ಕಟ್ಟುನಿಟ್ಟಾದ ಗುಣಮಟ್ಟ ಟೆಸ್ಟ್‌ಗಳನ್ನು ಪಾಸ್ ಮಾಡಿವೆ. FSSAI ಮಾನದಂಡಗಳನ್ನು ಪೂರೈಸುತ್ತವೆ ಎಂದು ಹೇಳಿಕೊಂಡಿದೆ. FSSAI ಇನ್ನೂ ಅಧಿಕೃತ ತನಿಖೆ ಅಥವಾ ದೃಢೀಕರಣ ನೀಡಿಲ್ಲ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...