ಪ್ರೊ. ಅರ್ನಾಲ್ಡ್ ಡಿಕ್ಸ್ : ಉತ್ತರಾಖಂಡ ಸುರಂಗ ರಕ್ಷಣಾ ಕಾರ್ಯಾಚರಣೆಯ ಹಿಂದಿನ ಶಕ್ತಿ

Date:

ಉತ್ತರಾಖಂಡನ ಸಿಲ್ಕ್ಯಾರಾ ಸುರಂಗದಲ್ಲಿ 17 ದಿನಗಳ ಕಾಲ ಸಿಲುಕಿಕೊಂಡಿದ್ದ 41 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಗೆ ಕರೆದುಕೊಂಡು ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವರಲ್ಲಿ ಆಸ್ಟ್ರೇಲಿಯಾದ ಅಂತಾರಾಷ್ಟ್ರೀಯ ಮಟ್ಟದ ನೆಲದಡಿಯ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ಪ್ರಮುಖ ಪಾತ್ರ ವಹಿಸಿದ್ದಾರೆ.

ಸುರಂಗ ಕೊರೆಯುವ ಯತ್ನದಲ್ಲಿ ಭಾರತೀಯ ತಂತ್ರಜ್ಞರು ಆರಂಭದಲ್ಲಿ ವಿಫಲರಾದ ಕಾರಣ ಆಸ್ಟ್ರೇಲಿಯಾದ ಸುರಂಗ ತಜ್ಞ ಪ್ರೊ. ಅರ್ನಾಲ್ಡ್ ಡಿಕ್ಸ್ ಅವರನ್ನು ಕರೆಸಲಾಗಿತ್ತು. ಅವರು, ‘ಸುರಂಗದಲ್ಲಿ ಸಿಲುಕಿರುವವರನ್ನು ಯಾವುದೇ ಪ್ರಾಣಾಪಾಯವಿಲ್ಲದೆ ಕ್ರಿಸ್‌ಮಸ್‌ಗೂ ಮುನ್ನ ರಕ್ಷಿಸಿ ಕರೆತರುತ್ತೇನೆ’ ಎಂದು 41 ಕಾರ್ಮಿಕರ ಕುಟುಂಬಕ್ಕೆ ಮಾತು ನೀಡಿದ್ದರು. 17 ದಿನಗಳ ನಂತರ ಇವರ ಕೊಟ್ಟ ಮಾತು ಈಡೇರಿತ್ತು. ಕಾರ್ಮಿಕರೆಲ್ಲರೂ ಸುರಕ್ಷಿತವಾಗಿ ಹೊರಬಂದರು.

ಅರ್ನಾಲ್ಡ್ ಡಿಕ್ಸ್ ಯಾರು?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

55 ವರ್ಷದ ಅರ್ನಾಲ್ಡ್ ಅವರು ಜಿನಿವಾ ಮೂಲದ ಅಂತಾರಾಷ್ಟ್ರೀಯ ಸುರಂಗ ಮತ್ತು ಅಂಡರ್‌ಗ್ರೌಂಡ್ ಸ್ಪೇಸ್‌ ಅಸೋಷಿಯೇಷನ್‌ನ ಮುಖ್ಯಸ್ಥರು. ಅಂಡರ್‌ಗ್ರೌಂಡ್ ಸ್ಪೇಸ್‌ ಅಸೋಷಿಯೇಷನ್‌ ನೆಲದಡಿಯ ನಿರ್ಮಾಣಕ್ಕೆ ಸಂಬಂಧಿಸಿದ ನೈತಿಕ, ಕಾನೂನು, ಪರಿಸರ ಮತ್ತು ರಾಜಕೀಯ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುತ್ತದೆ. ಡಿಕ್ಸ್ ಅವರು ಇಷ್ಟು ಮಾತ್ರವಲ್ಲದೆ ಆಸ್ಟ್ರೇಲಿಯಾದ ಮೊನಾಶ್ ವಿವಿಯಿಂದ ಭೂಗರ್ಭ, ಇಂಜಿನಿಯರಿಂಗ್ ಹಾಗೂ ಕಾನೂನು ಪದವಿಗಳನ್ನು ಪಡೆದು ಆ ವಿಷಯಗಳಲ್ಲಿಯೂ ಪರಿಣಿತಿ ಹೊಂದಿದ್ದಾರೆ.

ಡಿಕ್ಸ್ ಅವರ ತಂಡ ತನ್ನ ಗ್ರಾಹಕರಿಗೆ ಸುರಂಗದ ಮಾನದಂಡಗಳು ಮತ್ತು ಅನುಸರಣೆ ಸಲಹೆಯ ಜೊತೆ ಅಪಾಯದ ಮೌಲ್ಯಮಾಪನಗಳು/ ವಿಪತ್ತಿನ ಸಂದರ್ಭದ ತನಿಖೆಗಳು, ಅಗ್ನಿ ಸಮಸ್ಯೆಗಳಲ್ಲಿ ಜೀವ ಸುರಕ್ಷತೆ, ಟೆಂಡರ್‌ ಮೌಲ್ಯಮಾಪನಗಳ ಬಗ್ಗೆ ಸ್ಪಷ್ಟ, ಉಪಯುಕ್ತ ಫಲಿತಾಂಶಗಳನ್ನು ನಿಖರವಾಗಿ ಒದಗಿಸುತ್ತದೆ.

ಇವರ ಅದ್ಭುತ ಸೇವೆಗಳಿಗಾಗಿ ಹಲವು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಬಂದಿವೆ. ಕಳೆದ 20 ವರ್ಷಗಳಿಂದ ಡಿಕ್ಸ್ ತಂಡ ನಿರಂತರವಾಗಿ ಅಂತಾರಾಷ್ಟ್ರೀಯ ಸುರಂಗ ಮತ್ತು ಅಂಡರ್‌ಗ್ರೌಂಡ್ ಸ್ಪೇಸ್‌ ಅಸೋಷಿಯೇಷನ್‌ಗೆ ಸಂಬಂಧಿಸಿದ ಕಾರ್ಯಗಳನ್ನು ನೆರವೇರಿಸುತ್ತಿದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮುಖ್ಯಮಂತ್ರಿ ಜನಸ್ಪಂದನ; ಆಡಳಿತ ವೈಫಲ್ಯದ ವಿರಾಟ್ ದರ್ಶನ

2016- 2019ರ ನಡುವೆ ಕತಾರ್ ರೆಡ್ ಕ್ರಾಸ್ ಕ್ರೆಸೆಂಟ್ ಸೊಸೈಟಿಯಲ್ಲಿ (ಕ್ಯೂಆರ್‌ಸಿಎಸ್) ಸ್ವಯಂ ಕಾರ್ಯಕರ್ತರಾಗಿ ಕೆಲಸ ಮಾಡಿದ್ದ ಡಿಕ್ಸ್, 2020ರಲ್ಲಿ ಅಂಡರ್‌ಗ್ರೌಂಡ್ ವರ್ಕ್ಸ್ ಚೇಂಬರ್ಸ್ ರಚಿಸಲು ಲಾರ್ಡ್ ರಾಬರ್ಟ್ ಮೈರ್ ಪೀಟರ್ ವಿಕ್ಕೆರಿ ಕ್ಯೂಸಿ ಸೇರಿಕೊಂಡರು. ಅಲ್ಲಿ ಅವರು ಭೂಗತ ಪ್ರದೇಶಗಳಲ್ಲಿನ ಸಂಕೀರ್ಣ ಯೋಜನೆಗಳು, ನಿರ್ಣಾಯಕ ಸವಾಲುಗಳಿಗೆ ತಾಂತ್ರಿಕ ಮತ್ತು ನಿಯಂತ್ರಣ ಪರಿಹಾರಗಳನ್ನು ಒದಗಿಸಿದ್ದರು.

ಇಷ್ಟಲ್ಲದೆ ಆಸ್ಟ್ರೇಲಿಯಾದ ಕಾನೂನು ಸಂಬಂಧಿತ ವಿಕ್ಟೋರಿಯನ್ ಬಾರ್‌ನ ಸದಸ್ಯರಾಗಿದ್ದಾರೆ ಮತ್ತು ಟೋಕಿಯೊ ಸಿಟಿ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ (ಸುರಂಗಗಳು) ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆ. ಅವರ ಮೂರು ದಶಕದ ವೃತ್ತಿಜೀವನದಲ್ಲಿನ ಸಾಧನೆಗಳಿಗಾಗಿ ಆಸ್ಟ್ರೇಲಿಯನ್ ಟನೆಲಿಂಗ್ ಸೊಸೈಟಿ, ಇಂಟರ್‌ ನ್ಯಾಷನಲ್‌ ಅಸೋಸಿಯೇಷನ್ ​​ಫಾರ್ ಫೈರ್ ಸೇಫ್ಟಿ ಸೈನ್ಸ್ ಮತ್ತು ಅಮೆರಿಕದ ನ್ಯಾಷನಲ್ ಫೈರ್ ಪ್ರೊಟೆಕ್ಷನ್ ಅಸೋಸಿಯೇಷನ್‌ನಿಂದ ಗೌರವಿಸಲ್ಪಟ್ಟಿದ್ದಾರೆ.

ನವೆಂಬರ್‌ 20ರಂದು ಆಗಮನ

ನ.12 ರಂದು ಸಿಲ್ಕ್ಯಾರಾದಲ್ಲಿ ಭೂಕುಸಿತ ಉಂಟಾಗಿ ಸ್ಥಳೀಯ ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ನವೆಂಬರ್ 20 ರಂದು ಅವರ ಅನುಭವ ಮತ್ತು ಪರಿಣತಿಯನ್ನು ಗಮನದಲ್ಲಿಟ್ಟುಕೊಂಡು, ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ಕೇಂದ್ರದಿಂದ ಅವರನ್ನು ಸಂಪರ್ಕಿಸಲಾಯಿತು. ಸ್ಥಳಕ್ಕೆ ಆಗಮಿಸಿದ ಡಿಕ್ಸ್ ಅವರ ತಂಡ ಸಿಲ್ಕ್ಯಾರಾ ಸುರಂಗವನ್ನು ಪರಿಶೀಲಿಸಿದರು, ಕಾರ್ಯನಿರತ ಇಲಿ-ರಂಧ್ರ ಗಣಿಗಾರಿಕೆ ತಂಡ, ಭಾರತೀಯ ಸೇನೆ, ವಿಪತ್ತು ನಿರ್ವಹಣಾ ಸಂಸ್ಥೆಗಳೊಂದಿಗೆ ಸಮನ್ವಯಗೊಳಿಸಿದರು ಮತ್ತು ಅವಶೇಷಗಳಿಂದ ರಕ್ಷಿಸುವ ತಾಂತ್ರಿಕ ಪರಿಹಾರಗಳನ್ನು ಸೂಚಿಸಿದರು. ದಿನದ 24 ಗಂಟೆ ಕೆಲಸ ಮಾಡಿ ರಕ್ಷಣಾ ತಂಡದ ಜೊತೆ ಸಿಲುಕಿಕೊಂಡಿದ್ದ 41 ಕಾರ್ಮಿಕರಿಗೂ ಧೈರ್ಯ ತುಂಬಿದರು. ಅಂತಿಮವಾಗಿ ಯಶಸ್ವಿಯೂ ಆದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...