ಕೋಲ್ಕತ್ತಾ (ಬಂಗಾಳ) ಮತ್ತು ಕಾಮಾಖ್ಯ (ಅಸ್ಸಾಂ) ನಡುವೆ ಹೊಸದಾಗಿ ಪ್ರಾರಂಭಿಸಲಾದ ವಂದೇ ಭಾರತ್ ಸ್ಲೀಪರ್ ರೈಲಿನ ಆಹಾರ ಮೆನುವಿನಲ್ಲಿ ಕೇವಲ ಸಸ್ಯಾಹಾರ ಮಾತ್ರವೇ ಇದ್ದು, ಮಾಂಸಾಹಾರವನ್ನು ನಿರ್ಬಂಧಿಸಲಾಗಿದೆ. ಕೇಂದ್ರ ಸರ್ಕಾರದ ಈ ಧೋರಣೆಯನ್ನು ಬಂಗಾಳದ ಆಡಳಿತಾರೂಢ ಟಿಎಂಸಿ ಖಂಡಿಸಿದೆ. ‘ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜನರ ತಟ್ಟೆಗಳ ಮೇಲೆ ಅನೈತಿಕ ದಾಳಿ ನಡೆಸಿದೆ. ಬಂಗಾಳದ ಆಹಾರ ಸಂಸ್ಕೃತಿಗೆ ವಿರುದ್ಧವಾಗಿ ತಮ್ಮ ಧೋರಣೆಯನ್ನು ಹೇರುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದೆ.
“ಬಂಗಾಳ ಮತ್ತು ಅಸ್ಸಾಂನಲ್ಲಿ ಮೀನು ಮತ್ತು ಮಾಂಸವು ಪ್ರಧಾನ ಆಹಾರವಾಗಿದೆ. ಆದರೂ, ಬಂಗಾಳದಲ್ಲಿ ಕಾರ್ಯನಿರ್ವಹಿಸುವ ರೈಲಿನಲ್ಲಿ ಮಾಂಸಾಹಾರಿ ಆಯ್ಕೆಗಳನ್ನು ನಿರ್ಬಂಧಿಸಿ, ಏಕರೂಪದ ಆಹಾರ ಪದ್ಧತಿಗಳನ್ನು ಹೇರುತ್ತಿದೆ. ಮೊದಲು ಅವರು ನಮ್ಮ ಮತಗಳ ಮೇಲೆ ದಾಳಿ ನಡೆಸಿದರು. ಈಗ, ಅವರು ನಮ್ಮ ತಟ್ಟೆಗಳ ಮೇಲೆ ಅನೈತಿಕ ಪೊಲೀಸ್ಗಿರಿ (ದಾಳಿ) ನಡೆಸುತ್ತಿದ್ದಾರೆ” ಎಂದು ಟಿಎಂಸಿ ಕಿಡಿಕಾರಿದೆ.
“ಕೆಲವೇ ದಿನಗಳ ಹಿಂದೆ, ಪ್ರಧಾನಿ ಮೋದಿ ಬಂಗಾಳಕ್ಕೆ ಹೊಸ ವಂದೇ ಭಾರತ್ ಸ್ಲೀಪರ್ ರೈಲು ಒದಗಿಸುತ್ತಿರುವ ಬಗ್ಗೆ ಹೆಮ್ಮೆಪಡುತ್ತಿದ್ದರು. ಆದರೆ, ಬಂಗಾಳದಿಂದ ಅಸ್ಸಾಂಗೆ ಚಲಿಸುವ ವಂದೇ ಭಾರತ್ ರೈಲಿನಲ್ಲಿ ಮೀನು ಮತ್ತು ಮಾಂಸವನ್ನು ಮೆನುವಿನಿಂದ ತೆಗೆದುಹಾಕಲಾಗಿದೆ ಎಂಬುದನ್ನು ಅವರು ಬಹಿರಂಗಪಡಿಸಲಿಲ್ಲ” ಎಂದು ಹೇಳಿದೆ.
First they policed our votes. Now they’re policing our plates.
— All India Trinamool Congress (@AITCofficial) January 22, 2026
Just days ago, @narendramodi was busy boasting about giving Bengal a new Vande Bharat sleeper train. What he didn’t mention however is that on the Vande Bharat train running from Bengal to Assam, fish and meat have… pic.twitter.com/46z8zRs39O
“ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಎರಡರಲ್ಲೂ ಮಾಂಸಾಹಾರಿ ಆಹಾರವು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ಜನರು ಮಾಂಸಾಹಾರಿ ಆಹಾರವನ್ನು ಪ್ರೀತಿಸುವ ಈ ಎರಡು ಪ್ರದೇಶಗಳನ್ನು ಸಂಪರ್ಕಿಸುವ ರೈಲು ಈಗ ಸಸ್ಯಾಹಾರಿ ಆಯ್ಕೆಗಳನ್ನು ಮಾತ್ರ ನೀಡುತ್ತಿದೆ. ಇದು ಸೈದ್ಧಾಂತಿಕ ಮತ್ತು ಏಕರೂಪತೆಯ ಹೇರಿಕೆಯಾಗಿದೆ” ಎಂದು ದೂರಿದೆ.
“ಪ್ರಧಾನಿಯವರು ಮೀನು ತಿನ್ನುವ ಬಂಗಾಳಿಗಳನ್ನು ‘ಮೊಘಲರು’ ಎಂದು ಅಪಹಾಸ್ಯ ಮಾಡುತ್ತಾರೆ. ದೆಹಲಿಯಲ್ಲಿ ಮೀನು ನಿಷೇಧಿಸುವ ಆದೇಶಗಳನ್ನು ಹೊರಡಿಸಲಾಗಿದೆ. ಚಿಕನ್ ಮಾರಾಟ ಮಾಡಿದ್ದಕ್ಕಾಗಿ ಬಡ ಬೀದಿ ವ್ಯಾಪಾರಿಯ ಮೇಲೆ ಕ್ರೂರವಾಗಿ ಹಲ್ಲೆ ಮಾಡಲಾಗಿದೆ. ನಾವು ಅದನ್ನೇ ತಿನ್ನುತ್ತಿದ್ದೇವೆ, ನಾವು ಅದನ್ನೇ ಧರಿಸುತ್ತೇವೆ. ನಾವು ಯಾರನ್ನು ಪ್ರೀತಿಸುತ್ತೇವೆ. ನಾವು ಹೇಗೆ ಬದುಕುತ್ತೇವೆ. ಅದು ನಮ್ಮ ಆಯ್ಕೆ. ಆದರೆ, ನಮ್ಮ ಬಹುತ್ವದ ಮೇಲೆ ಕೋಮುವಾದಿಗಳು ಏಕರೂಪತೆಯನ್ನು ಹೇರುತ್ತಿದ್ದಾರೆ” ಎಂದು ಟಿಎಂಸಿ ಆಕ್ರೋಶ ವ್ಯಕ್ತಪಡಿಸಿದೆ.




