ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿರುವ ಕ್ಷೌರದಂಗಡಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕ್ಷೌರ ಮಾಡಿಸಿಕೊಂಡ ಬಳಿಕ ಈಗ ರಾಹುಲ್ ಗಾಂಧಿ ಕುಳಿತ ಕುರ್ಚಿಗೆ ಬೇಡಿಕೆ ಭಾರೀ ಹೆಚ್ಚಾಗಿದೆ. ರಾಹುಲ್ ಗಾಂಧಿ ಭೇಟಿ ಬಳಿಕ ಈ ಕ್ಷೌರದಂಗಡಿಗೆ ಜನರ ದೌಡು ಕೂಡಾ ಹೆಚ್ಚಾಗಿದೆ.
ರಾಯ್ಬರೇಲಿಯ ಲಾಲ್ಗಂಜ್ನಲ್ಲಿರುವ ನ್ಯೂ ಮುಂಬಾ ದೇವಿ ಹೇರ್ ಕಟಿಂಗ್ ಸಲೂನ್ಗೆ ಸೋಮವಾರ ರಾಹುಲ್ ಗಾಂಧಿ ಅವರು ಆಕಸ್ಮಿಕವಾಗಿ ಭೇಟಿ ನೀಡಿ ಗಡ್ಡ ಟ್ರಿಮ್ ಮಾಡುವಂತೆ ತಿಳಿಸಿದ್ದಾರೆ. ಜನಪ್ರಿಯ ರಾಜಕಾರಣಿಯೊಬ್ಬರು ತನ್ನ ಕ್ಷೌರದಂಗಡಿಗೆ ಬಂದಿರುವುದು ನೋಡಿ ಮಾಲೀಕ ಮಿಥುನ್ ಕುಮಾರ್ ದಂಗಾಗಿದ್ದರು.
रायबरेली जैसे देश के गांव, कस्बों और शहरों के लाखों हुनरमंद युवाओं के सामने अपार अवसर हैं।
जरूरत है, इनका साथ निभाने की। इनको ये यकीन दिलाने की तुम आगे बढ़ो, हम हर कदम पर तुम्हारे साथ हैं। pic.twitter.com/zsNSVI7feZ
— Congress (@INCIndia) May 15, 2024
ರಾಹುಲ್ ಗಾಂಧಿ ಭೇಟಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಮಿಥುನ್ ಕುಮಾರ್ ಅವರು, “ಇಂತಹ ದೊಡ್ಡ ನಾಯಕ ನನ್ನ ಅಂಗಡಿಗೆ ಬರುತ್ತಾರೆ ಎಂದು ನಾನು ಊಹಿಸಿರಲಿಲ್ಲ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಲೋಕಸಭೆ ಚುನಾವಣೆ | ರಾಯ್ಬರೇಲಿಯಲ್ಲಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ
ಇನ್ನು ಕ್ಷೌರದಂಗಡಿಯಲ್ಲಿ ಕೆಲಸ ಮಾಡುವ ಅಮನ್ಕುಮಾರ್ ಮಾತನಾಡಿ, “ರಾಹುಲ್ ಗಾಂಧಿ ಅವರು ನಮ್ಮ ಕ್ಷೌರದಂಗಡಿಗೆ ಬಂದು ಕ್ಷೌರ ಮಾಡಿಸಿಕೊಂಡ ಬಳಿಕ ನಮ್ಮ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ. ಮೊದಲು 10 ಜನರು ಬರುತ್ತಿದ್ದರೆ ಈಗ 15 ಜನರು ಬರುತ್ತಿದ್ದಾರೆ. ನಮಗೆ ಸಾಕಷ್ಟು ಕರೆಗಳು ಕೂಡಾ ಬರುತ್ತಿದೆ” ಎಂದು ತಿಳಿಸಿದ್ದಾರೆ.
ಪ್ರಸ್ತುತ ಲೋಕಸಭೆ ಚುನಾವಣೆ ಕುರಿತು ಕಾಂಗ್ರೆಸ್ ನಾಯಕ ಮಾತನಾಡಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅಮನ್ಕುಮಾರ್, “ನಮಗೆ ಇಷ್ಟವಾದ ಪಕ್ಷಕ್ಕೆ ಮತ ಹಾಕುವಂತೆ ಹೇಳಿದ್ದಾರೆ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ಕಿಕ್ಕಿರಿದು ತುಂಬಿದ ಬಸ್ನಲ್ಲಿ ರಾಹುಲ್ ಗಾಂಧಿ ಪ್ರಯಾಣ | Rahul Gandhi | Telangana
ರಕ್ಷಣಾ ಪಡೆಗಳಿಗೆ ಅಗ್ನಿವೀರ್ ನೇಮಕಾತಿ ಯೋಜನೆಯ ಬಗ್ಗೆ ಮಾತನಾಡಿದ್ದೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಈ ಯೋಜನೆಯನ್ನು ತೆಗೆದುಹಾಕಲಾಗುವುದು ಎಂದು ಭರವಸೆ ನೀಡಿರುವುದು ವಿಡಿಯೋದಲ್ಲಿ ನಾವು ನೋಡಬಹುದು.
ಹಾಗೆಯೇ ರಾಹುಲ್ ಗಾಂಧಿ ಅವರು ಹೊಸ ಹೇರ್ ಸ್ಟೈಲ್ಗಳ ಬಗ್ಗೆ ಅಂಗಡಿ ಮಾಲೀಕ ಮಿಥುನ್ ಕುಮಾರ್ ಬಳಿ ಕೇಳಿದ್ದಾರೆ. ಅವರ ಜೀವನದ ಬಗ್ಗೆ, ವ್ಯಾಪಾರದ ಬಗ್ಗೆ ಪ್ರಶ್ನಿಸಿದ್ದಾರೆ. ಜೊತೆಗೆ ಪ್ರತಿ ಬಡ ಕುಟುಂಬಕ್ಕೆ ವಾರ್ಷಿಕವಾಗಿ ಒಂದು ಲಕ್ಷ ರೂಪಾಯಿ ನೀಡುವ ಮಹಾಲಕ್ಷ್ಮೀ ಯೋಜನೆ ಬಗ್ಗೆಯೂ ಪ್ರಸ್ತಾಪ ಮಾಡಿದ್ದಾರೆ.





