ಬಿಹಾರ ಚುನಾವಣೆ | ಕುಸಿದು ಬಿದ್ದ ಮತ್ತೊಂದು ಸೇತುವೆ; ಮತದಾನಕ್ಕೂ ಮುನ್ನ NDAಗೆ ಮುಖಭಂಗ

Date:

ಬಿಹಾರ ಚುನಾವಣೆಯಲ್ಲಿ ಮೊದಲ ಹಂತದ ಮತದಾನಕ್ಕೆ (ನ.6) ಮೂರು ದಿನಗಳು ಬಾಕಿ ಇರುವಾಗ, ಸೋಮವಾರ ಮತ್ತೊಂದು ಸೇತುವೆ ಕುಸಿದು ಬಿದ್ದಿದೆ. ನಿರ್ಮಾಣಗೊಂಡ ಕೇವಲ 5 ವರ್ಷಗಳಲ್ಲಿ ಸೇತುವೆ ಕುಸಿದು ಬಿದ್ದಿದೆ. ಇದು ಚುನಾವಣೆಗೂ ಮುನ್ನ ಎನ್‌ಡಿಎ ಸರ್ಕಾರದ ಭ್ರಷ್ಟಾಚಾರಕ್ಕೆ ಕನ್ನಡಿ ಹಿಡಿದಿದೆ ಎಂದು ವಿಪಕ್ಷಗಳು ಮತ್ತು ನೆಟ್ಟಿಗರು ಆರೋಪಿಸಿದ್ದಾರೆ.

ಬಿಹಾರದ ಅರಾರಿಯಾ ಜಿಲ್ಲೆಯ ಕೆಲ್ವಾಶಿ ಗ್ರಾಮದ ಬಳಿ ಪರ್ಮೈನ್ ನದಿಗೆ ಅಡ್ಡಲಾಗಿ 2019ರಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಲಾಗಿತ್ತು. ಸೇತುವೆಯು ಪಟೇಗ್ನಾ ಮತ್ತು ಫೋರ್ಬ್ಸ್‌ಗಂಜ್ ಪ್ರದೇಶಗಳ ಸಂಪರ್ಕಕೊಂಡಿಯಾಗಿತ್ತು. ಇದೀಗ, ಸೇತುವೆ ಕುಸಿದಿದ್ದು, ಸೇತುವೆಯ ಭಾಗವು ನದಿಯಲ್ಲಿ ಮುಳುಗಿದೆ. ಫೋರ್ಬ್ಸ್‌ಗಂಜ್ ಮತ್ತು ಪಟೇಗ್ನಾ ನಡುವಿನ ಪ್ರಮುಖ ಸಂಪರ್ಕವನ್ನು ಮುರಿದಿದೆ.

ಸೇತುವೆ ಕುಸಿತ ವಿಚಾರವಾಗಿ ಆಡಳಿತಾರೂಢ ಬಿಜೆಪಿ-ಜೆಡಿಯು ನೇತೃತ್ವದ ಎನ್‌ಡಿಎ ಮೈತ್ರಿಕೂಟದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸುರಭಿ ಎಂಬವವರು, “ಈ ಸೇತುವೆಯನ್ನು 2022ರಲ್ಲಿ ಬಿಹಾರದ ಅರಾರಿಯಾದಲ್ಲಿ ನಿರ್ಮಿಸಲಾಗಿತ್ತು. ಈಗ ಈ ಸೇತುವೆ ಕುಸಿದಿದೆ. ಅಂತೆಯೇ, 2024ರ ಜೂನ್ 18 ಅರಾರಿಯಾ: ಪರಾರಿಯಾ ಗ್ರಾಮದಲ್ಲಿ ಬಕ್ರಾ ನದಿಗೆ ಹೊಸದಾಗಿ ನಿರ್ಮಿಸಲಾದ ಸೇತುವೆ ಕುಸಿಯಿತು. 2024ರ ಜೂನ್ 22 – ಸಿವಾನ್: ಗಂಡಕಿ ನದಿಯ ಮೇಲೆ ದಶಕಗಳಷ್ಟು ಹಳೆಯದಾದ ಸೇತುವೆ ಕುಸಿಯಿತು. 2024ರ ಜೂನ್ 23 – ಪೂರ್ವ ಚಂಪಾರಣ್: ಘೋಡಸಹನ್ ಬ್ಲಾಕ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿಯಿತು 2024ರ ಜೂನ್ 27–30 – ಕಿಶನ್‌ಗಂಜ್: ಎರಡು ಸೇತುವೆಗಳು ಕುಸಿದವು. ಅವುಗಳಲ್ಲಿ, ಒಂದನ್ನು 2007–08 ರಲ್ಲಿ MPLAD ನಿಧಿಯಿಂದ ನಿರ್ಮಿಸಲಾಗಿತ್ತು, ಇನ್ನೊಂದು 2011 ರಲ್ಲಿ ನಿರ್ಮಾಣಗೊಂಡಿತ್ತು. ಅಲ್ಲದೆ, 2024ರ ಜೂನ್–ಜುಲೈ – ಕಿಶನ್‌ಗಂಜ್, ಅರಾರಿಯಾ, ಮಧುಬನಿ, ಸರನ್, ಸಿವಾನ್ ಜಿಲ್ಲೆಗಳಲ್ಲಿ ಹಲವು ಸೇತುವೆಗಳು ಕುಸಿದುಬಿದ್ದವು. ನೋಡಿ, ಬಿಹಾರದಲ್ಲಿನ ಭ್ರಷ್ಟಾಚಾರವನ್ನು ಊಹಿಸಿ” ಎಂದಿದ್ದಾರೆ.

ಅಮರ್ ಸಿಂಗ್ ಚೌತಾನ್ ಎಂಬವರು, “2022ರಲ್ಲಿ ಅರಾರಿಯಾದಲ್ಲಿ ನಿರ್ಮಿಸಲಾದ ಸೇತುವೆ 2025ರಲ್ಲಿ ಕುಸಿದಿದೆ. ಡಬಲ್ ಎಂಜಿನ್ ಸರ್ಕಾರದ ಡಬಲ್ ಅಭಿವೃದ್ಧಿ ಎಂದರೆ ಇದೆಯೇ? ಆಗ ಹಣವನ್ನು ಯಾರು ಜೇಬಿಗೆ ಹಾಕಿಕೊಂಡರು? ಈಗ ಯಾರು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ? ಬಿಹಾರಕ್ಕೆ ರಸ್ತೆಗಳು ಮತ್ತು ಪ್ರಾಮಾಣಿಕತೆ ಬೇಕು – ಫೋಟೋ ಶೂಟ್‌ಗಳು ಮತ್ತು ನಕಲಿ ಭರವಸೆಗಳಲ್ಲ!” ಎಂದು ಕಿಡಿಕಾರಿದ್ದಾರೆ.

ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ಜಾತಿ ರಾಜಕೀಯಕ್ಕಿಲ್ಲ ನೆಲೆ; ಉದ್ಯೋಗಕ್ಕೆ ಮಾತ್ರವೇ ಬೆಲೆ!

ಸೇತುವೆಯ ವಿಡಿಯೋವನ್ನು ಹಂಚಿಕೊಂಡು ಎನ್‌ಡಿಎ ವಿರುದ್ಧ ಬಿಆರ್‌ಎಸ್‌ ಪಕ್ಷವು ವಾಗ್ದಾಳಿ ನಡೆಸಿದೆ. “ಬಿಹಾರದ ಅರಾರಿಯಾದಲ್ಲಿ 2022ರಲ್ಲಿ ನಿರ್ಮಿಸಲಾದ ಸೇತುವೆ 2025ರ ವೇಳೆಗೆ ಕುಸಿದಿದೆ. ಎನ್‌ಡಿಎಸ್‌ಎಯಂತಹ ಯಾವುದೇ ಕೇಂದ್ರ ಸಂಸ್ಥೆ ಎನ್‌ಡಿಎ ಆಡಳಿತವಿರುವ ರಾಜ್ಯಕ್ಕೆ ಭೇಟಿ ನೀಡುತ್ತದೆಯೇ ಅಥವಾ ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ಧ್ವನಿ ಎತ್ತಿದಾಗ ಮಾತ್ರ ಅದು ಕಾರ್ಯನಿರ್ವಹಿಸುತ್ತದೆಯೇ?” ಎಂದು ಕಿಡಿಕಾರಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...