ಆಂಧ್ರ ಪ್ರದೇಶದ ಈಶಾನ್ಯ ಗೋದಾವರಿ ಜಿಲ್ಲೆಯಲ್ಲಿ ಕಲಬೆರಕೆಯ ಕಲುಷಿತ ಹಾಲು ಸೇವನೆಯಿಂದ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಏಳು ಮಂದಿ ಆಂಧ್ರ ಪ್ರದೇಶದ ರಾಜಮಹೇಂದ್ರವರಂ ಜಿಲ್ಲೆಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಗುರುವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೂತ್ರ ಕಟ್ಟುವಿಕೆ, ವಾಂತಿ, ಹೊಟ್ಟೆ ನೋವು ಹಾಗೂ ಡಯಾಲಿಸಿಸ್ ಅಗತ್ಯವಿರುವ ತೀವ್ರ ಮೂತ್ರಪಿಂಡ ವೈಫಲ್ಯದಂತಹ ರೋಗಲಕ್ಷಣಗಳನ್ನು ಹೊಂದಿದ್ದ ಹಲವಾರು ಸ್ಥಳೀಯ ನಿವಾಸಿಗಳು ಫೆಬ್ರವರಿ 22ರಂದು ಆಸ್ಪತ್ರೆಗಳಿಗೆ ದಾಖಲಾದಾಗ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಲಾಲಚೆರುವಿನ ಚೌಡೇಶ್ವರನಗರ ಮತ್ತು ಸ್ವರೂಪ್ ನಗರ ಪ್ರದೇಶಗಳಲ್ಲಿ ಕಲಬೆರಕೆ ಮಾಡಿ ಪೂರೈಸಲಾಗಿದ್ದ ಹಾಲನ್ನು ಸೇವಿಸಿದ ಬಳಿಕ ಈ ಪ್ರದೇಶದ ಜನರು ಅಸ್ವಸ್ಥಗೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಇದನ್ನು ಓದಿದ್ದೀರಾ? ಯುದ್ಧ ನಿಲ್ಲಲ್ಲ, ಹಾರ್ಮುಜ್ ತೆರೆಯಲ್ಲ: ಟ್ರಂಪ್ಗೆ ಇರಾನ್ ಸಡ್ಡು
“ಕಲಬೆರಕೆ ಹಾಲು ಪ್ರಕರಣ ಎಂದು ಶಂಕಿಸಲಾಗಿರುವ ಈ ಘಟನೆಯಲ್ಲಿ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಉಳಿದ ಏಳು ಮಂದಿ ರಾಜಮಹೇಂದ್ರವರಂ ಜಿಲ್ಲೆಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರೋಗಲಕ್ಷಣಗಳು ಹಾಲು ಕಲಬೆರಕೆಯಾಗಿರುವುದನ್ನು ಸೂಚಿಸುತ್ತಿದ್ದು, ಇದೇ ಈ ಸಾವುಗಳಿಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಈ ಕುರಿತು ವಿವಿಧ ಇಲಾಖೆಗಳು ಸಮನ್ವಯದ ಕ್ರಮಕ್ಕೆ ಚಾಲನೆ ನೀಡಿವೆ.
ಈ ನಡುವೆ, ಈ ಘಟನೆಯೊಂದಿಗೆ ಸಂಬಂಧ ಹೊಂದಿರುವ ಹಾಲು ಘಟಕವನ್ನು ಆಹಾರ ಸುರಕ್ಷತಾ ಇಲಾಖೆ ಪರಿಶೀಲನೆ ನಡೆಸಿದ್ದು, ಹಾಲು, ಪನೀರ್, ತುಪ್ಪ, ಕುಡಿಯುವ ನೀರು ಹಾಗೂ ವಿನೆಗರ್ ಮಾದರಿಗಳನ್ನು ನಿಗಾವಹಿಸಲು ಮತ್ತು ಕ್ರಮ ಕೈಗೊಳ್ಳಲು ಸಂಗ್ರಹಿಸಿದೆ.





