ಅಸ್ಸಾಂನ ದಿಬ್ರುಗರ್ಹ ವಿಶ್ವವಿದ್ಯಾಲಯಕ್ಕೆ ಶೈಕ್ಷಣಿಕ ಅನುಭವವಿಲ್ಲದ ವ್ಯಕ್ತಿಯೊಬ್ಬರನ್ನು ಅಭ್ಯಾಸದ ಪ್ರಾಧ್ಯಾಪಕ ಹುದ್ದೆಗೆ ನೇಮಕ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.
ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅವರ ಸಹೋದರ ದಿಗಂತ ಬಿಸ್ವ ಶರ್ಮ ಅವರನ್ನು ಯಾವುದೇ ಸಂದರ್ಶನ ಅಥವಾ ಶೈಕ್ಷಣಿಕ ಹಿನ್ನೆಲೆ ಗಮನಿಸದೆ ನೇರವಾಗಿ ಅಭ್ಯಾಸದ ಪ್ರಾಧ್ಯಾಪಕರು ಎಂದು ದಿಬ್ರುಗರ್ಹ ವಿವಿಗೆ ನೇಮಕಾತಿ ಮಾಡಲಾಗಿದೆ. ಇದು ಒಂದು ವರ್ಷದವರೆಗೆ ಅಥವಾ ಮುಂದಿನ ಸೂಚನೆಯವರೆಗೆ ಜಾರಿಯಲ್ಲಿರುತ್ತದೆ ಎಂದು ವಿವಿಯ ರಿಜಿಸ್ಟ್ರಾರ್ ಆಗಸ್ಟ್ 21ರಂದು ಆದೇಶ ಹೊರಡಿಸಿದ್ದಾರೆ.
ಭಾರತೀಯ ಜ್ಞಾನ ವ್ಯವಸ್ಥೆಗಳು (ಐಕೆಎಸ್) ಶಿಕ್ಷಣ ಮತ್ತು ಪರಿಚಯವನ್ನು ನೀಡಿಕೆ ಮತ್ತು ಶ್ರೀಮಂತ ಸಾಂಸ್ಕೃತಿಕ ಮೌಲ್ಯಗಳು ಮತ್ತು ಪರಂಪರೆಯನ್ನು ಬೆಳೆಸಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ಜ್ಞಾನ ಭಂಡಾರ ನೀಡುತ್ತಾರೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಗಂಡಾಳಿಕೆಯ ಒಳಾರ್ಥಗಳನ್ನು ತಿರಸ್ಕರಿಸುವ ಈ ಕೈಪಿಡಿ ಕ್ರಾಂತಿಕಾರಿ
ಇದು ಎನ್ಇಪಿಯ ಶಿಫಾರಸ್ಸಾಗಿದೆ. ಅಂದರೆ ಕೇಂದ್ರ ಸರ್ಕಾರದ ಹೊಸ ಎನ್ಇಪಿ ನೀತಿ ಅನ್ವಯ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡಿ ಅನುಭವ ಇರುವವರಿಗೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಿಲ್ಲದೆ ಹಾಗೂ ಶೈಕ್ಷಣಿಕ ಅನುಭವ ಇಲ್ಲದಿರುವ ವ್ಯಕ್ತಿಯನ್ನು ನೇರವಾಗಿ ಅಭ್ಯಾಸದ ಪ್ರಾಧ್ಯಾಪಕ ಎಂದು ನೇಮಕ ಮಾಡಬಹುದಾಗಿದೆ.

ಪ್ರಾಧ್ಯಾಪಕರಾಗಿ ನೇಮಕಗೊಳ್ಳುವ ಇವರು ತಮ್ಮ ವೃತ್ತಿಪರ ಅನುಭವವನ್ನು ಬೋಧನೆಯಲ್ಲಿ ಧಾರೆ ಎರೆಯುತ್ತಾರೆ ಎನ್ನುವುದು ಬಿಜೆಪಿಯ ಪೋಷಕರಾದ ಕಸ್ತೂರಿ ರಂಗನ್ ಸಮಿತಿಯ ಅಭಿಪ್ರಾಯ.
ವಿವಿಯ ಪ್ರಾಧ್ಯಾಪಕರಾಗಿ ನೇಮಕಗೊಂಡವರು ಭಾರತದ ಸಂವಿಧಾನಕ್ಕೆ ಬದ್ಧರಾಗಿ ವಿವಿಯ ಪಠ್ಯಾನುಸಾರವಾಗಿ ವಿದ್ಯಾರ್ಥಿಗಳಿಗೆ ಜಾತ್ಯತೀತ ಮೌಲ್ಯಗಳನ್ನು ಬೆಳೆಸಬೇಕು. ಆದರೆ ಎನ್ಇಪಿಯ ನೀತಿ ಅನ್ವಯ ನೇಮಕವಾದವರು ಒಂದು ಸಿದ್ದಾಂತದ ಹಿನ್ನೆಲೆಯಿಂದ ಬಂದವರಾಗಿದ್ದು ಕೇವಲ ಕೋಮು ಭಾವನೆಗಳನ್ನೇ ವಿದ್ಯಾರ್ಥಿಗಳಲ್ಲಿ ತುಂಬುತ್ತಾರೆ. ಇದರಿಂದ ಸಮಾಜದಲ್ಲಿ ಸಾಮಾಜಿಕ ನ್ಯಾಯ ಕೊನೆಗೊಂಡು ಸಾಮಾಜದಲ್ಲಿ ಅಶಾಂತಿ ಸೃಷ್ಟಿಯಾಗುತ್ತದೆ. ಬ್ರಾಹ್ಮಣರು ಬ್ರಾಹ್ಮಣೇತರ ಮೇಲ್ಜಾತಿಗಳು, ವಿಜೃಂಬಿಸುತ್ತಾರೆ. ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯಗಳು ಮತ್ತೆ ತುಳಿತಕ್ಕೆ ಒಳಗಾಗುವ ಸಂಭವವಿದೆ. ಈ ಹಿನ್ನೆಲೆಯಲ್ಲಿ ಎನ್ಇಪಿ ದೇಶದ ಶೈಕ್ಷಣಿಕ ವ್ಯವಸ್ಥೆಗೆ ಮಾರಕವಾಗಿದೆ.





