ಕೇರಳದಲ್ಲಿ ಸಿಪಿಐ(ಎಂ) ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗವು (ಎಲ್ಡಿಎಫ್) ಕಾಂಗ್ರೆಸ್ನ ಪ್ರಮುಖ ಮಿತ್ರ ಪಕ್ಷ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ನ (ಐಯುಎಂಎಲ್) ಅತೃಪ್ತ ನಾಯಕರನ್ನು ಓಲೈಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಮಲಪ್ಪುರಂ ಜಿಲ್ಲೆಯಲ್ಲಿ ಐಯುಎಂಎಲ್ನ ಇಬ್ಬರು ಅತೃಪ್ತ ನಾಯಕರಾದ ಅಬ್ದುರಹ್ಮಾನ್ ರಂದಥಾನಿ ಮತ್ತು ಶಫಿ ಚಾಲಿಯಮ್ ಅವರಿಗೆ ಸ್ಥಾನ ನೀಡಲು ಎಲ್ಡಿಎಫ್ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಕೇರಳ ಚುನಾವಣೆ | ಉಚ್ಚಾಟಿತ ಸಿಪಿಐ ನಾಯಕ ಮುಕುಂದನ್ ಬಿಜೆಪಿಗೆ ಸೇರ್ಪಡೆ
ರಂದಥಾನಿ ತಿರೂರ್ ಅಥವಾ ತನೂರಿನಲ್ಲಿ ಸ್ಪರ್ಧಿಸಿದರೆ, ವಲ್ಲಿಕುನ್ನುವಿನಲ್ಲಿ ಶಫಿ ಚಾಲಿಯಮ್ ಸ್ಪರ್ಧಿಸುವ ಸಾಧ್ಯತೆಯಿದೆ. ಇಬ್ಬರೂ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದರೆ, ಎಲ್ಡಿಎಫ್ ಈ ಅಭ್ಯರ್ಥಿಗಳನ್ನು ಬೆಂಬಲಿಸುವ ಸಾಧ್ಯತೆಯಿದೆ.
ಮಲಪ್ಪುರಂ ಜಿಲ್ಲೆಯನ್ನು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮಿತ್ರ ಪಕ್ಷ ಐಯುಎಂಎಲ್ನ ಕೋಟೆ ಎಂದು ಪರಿಗಣಿಸಲಾಗುತ್ತದೆ. ಇದೀಗ ಮೈತ್ರಿಯಲ್ಲಿ ಕೊಂಚ ಬಿರುಕು ಕಾಣಿಸಿಕೊಂಡಿದೆ. ಈ ಅಸಮಾಧಾನವನ್ನೇ ಬಳಸಿಕೊಂಡು ಈ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಲು ಎಲ್ಡಿಎಫ್ ಪ್ರಯತ್ನಿಸುತ್ತಿದೆ.





