ಮುಂಗಾರು ಮೇಲೆ ಎಲ್‌ನಿನೊ ಪರಿಣಾಮ ಬೀರದು: ಐಎಂಡಿ

Date:

ಫೆಸಿಫಿಕ್ ಸಾಗರದಲ್ಲಿ ಏಳುವ ಶಾಖದ ಅಲೆಗಳು ಅಥವಾ ಎಲ್‌ನಿನೊ ಪರಿಣಾಮ ಈ ಬಾರಿ ಭಾರತದಲ್ಲಿ ಕಂಡುಬರುವುದಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ

ಎಲ್‌ನಿನೊ ಅಥವಾ ಶಾಖದ ಅಲೆಗಳು ಹೊರತಾಗಿಯೂ ದೇಶದಲ್ಲಿ ಸಾಮಾನ್ಯ ಮುಂಗಾರು ಇರಲಿದ್ದು, ಸರಾಸರಿ 87 ಸೆಂಮೀನಂತೆ ಶೇ 96ರಷ್ಟು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ. ಇಲಾಖೆ ಪ್ರಕಾರ, ಜೂನ್ ಮತ್ತು ಸೆಪ್ಟೆಂಬರ್ ನಡುವೆ ಈ ವರ್ಷ 83.5 ಸೆಂಮೀನಷ್ಟು ಮಳೆಯಾಗಲಿದೆ.

2023ರ ನೈರುತ್ಯ ಮಾರುತದಿಂದ ಉತ್ತಮ ಮಳೆಯಾಗಲಿದೆ ಎಂದು ಐಎಂಡಿ ಹೇಳಿದ್ದರೂ, ಪ್ರಾಥಮಿಕ ಮಳೆ ಋತುವಿನ ಎರಡನೇ ಅವಧಿಯಲ್ಲಿ ಎಲ್‌ನಿನೊದ ಪರಿಣಾಮ ಭಾರತದಲ್ಲಿ ಕಾಣುವ ಸಾಧ್ಯತೆಯಿದೆ. ಫೆಸಿಫಿಕ್ ಸಾಗರದ ಸಮಭಾಜಕದಲ್ಲಿ ಎಲ್‌ನಿನೊ ಪರಿಣಾಮ ಭಾರತದಲ್ಲಿ ಕಂಡುಬರುವ ಕಾರಣ ನಿಧಾನವಾಗಿ ಮುಂಗಾರು ಮಳೆಯ ತೀವ್ರತೆ ಮಂದವಾಗಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

1971ರಿಂದ 2020ರ ನಡುವೆ ಭಾರತದಲ್ಲಿ ಧೀರ್ಘಾವಧಿಯ ಸಾಮಾನ್ಯ ಮಳೆ ಪ್ರಮಾಣ 87 ಸೆಂಮೀ ಇತ್ತು. ಹೀಗಾಗಿ ಈ ವರ್ಷದ 83.5 ಸೆಂಮೀ ಮಳೆ ಹೆಚ್ಚು ವ್ಯತ್ಯಾಸ ತರದು ಎಂದು ಹವಾಮಾನ ಇಲಾಖೆ ಅಭಿಪ್ರಾಯಪಟ್ಟಿದೆ.

ಆದರೆ ಉತ್ತರಪ್ರದೇಶದ ನೋಯ್ಡಾದ ಖಾಸಗಿ ಹವಾಮಾನ ವಿಭಾಗವಾಗಿರುವ ಸ್ಕೈಮೆಟ್ ಏಪ್ರಿಲ್ 10ರ ನಂತರದ ಮುಂಗಾರು ಋತು ಸಾಮಾನ್ಯಕ್ಕಿಂತ ಕಡಿಮೆ ಇರಲಿದೆ.

ಏನಿದು ಎಲ್‌ನಿನೊ ಪರಿಣಾಮ?

ಎಲ್‌ನಿನೊ ಪರಿಣಾಮದ ವ್ಯಾಪ್ತಿಯಲ್ಲಿರುವ ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಬೆಚ್ಚಗಿನ ವಾತಾವರಣವಿರುತ್ತದೆ. ಈ ಸಮಯದಲ್ಲಿ ಭಾರತ ಸೇರಿದಂತೆ ವಿಶ್ವಾದ್ಯಂತ ಸಾಮಾನ್ಯವಾಗಿ ಬೆಚ್ಚಗಿನ ತಾಪಮಾನವಿದ್ದು, ವಾಡಿಕೆಯಿಂದ ಕಡಿಮೆ ಮಳೆಯಾಗಲಿದೆ.

ಶಾಖದ ವಾತಾವರಣವಿರುವ ಸಮಯದಲ್ಲಿ ದಕ್ಷಿಣ ಅಮೆರಿಕದ ಉತ್ತರ ಕರಾವಳಿ ಸಮಭಾಜಕ ಫೆಸಿಫಿಕ್‌ ಸಾಗರಲ್ಲಿ ಸಮುದ್ರ ಮೇಲ್ಮೈ ತಾಪಮಾನದ (ಎಸ್‌ಎಸ್‌ಟಿ) ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಆ ಪ್ರದೇಶದಲ್ಲಿ ಸರಾಸರಿಗಿಂತ ಹೆಚ್ಚು ಶಾಖದ ವಾತಾವರಣವಿರುತ್ತದೆ.

ಈ ಹವಾಮಾನ ಬದಲಾವಣೆಗಳು 2023ರ ಮೇನಲ್ಲಿಯೇ ಶಾಖದ ಅಲೆಗಳ ಸಂಭವ ಸಾಧ್ಯತೆಗಳನ್ನು ಸೂಚಿಸುತ್ತಿವೆ. ಈ ಬೆಳವಣಿಗೆಯು ಮೇ ಅಥವಾ ಜೂನ್‌ನಲ್ಲಿ ನೈಋತ್ಯ ಮುಂಗಾರು ದುರ್ಬಲಗೊಳ್ಳಲು ಕಾರಣವಾಗಬಹುದು. ನೈರುತ್ಯ ಮುಂಗಾರಿನಿಂದಲೇ ಶೇ.70ರಷ್ಟು ಮಳೆಯನ್ನು ಪಡೆಯುವ ಭಾರತದ ಮೇಲೆ ಇದರಿಂದ ಪರಿಣಾಮವಾಗಲಿದೆ.

ಈ ಬಾರಿ ಪೆಸಿಫಿಕ್ ಮಹಾಸಾಗರದಲ್ಲಿ ಎಲ್‌ನಿನೊ (ಶಾಖದ ಹೆಚ್ಚಳ) ಪರಿಣಾಮ ನಿರೀಕ್ಷೆಗಿಂತ ಮೊದಲೇ ಉಂಟಾಗುವ ಸಾಧ್ಯತೆ ಇದೆ ಎಂದು ಅನುಮಾನ ಪಡಲಾಗಿದೆ.

ಅವಧಿಗೂ ಮುನ್ನವೇ ಎದುರಾಗುವ ಎಲ್‌ನಿನೊದಿಂದಾಗಿ ಭಾರತ, ದಕ್ಷಿಣ ಆಫ್ರಿಕ, ಆಸ್ಟ್ರೇಲಿಯ, ಇಂಡೋನೇಷ್ಯಾ ಮತ್ತು ಫೆಸಿಫಿಕ್‌ ಸಾಗರದ ಹಲವಾರು ಪ್ರದೇಶಗಳಲ್ಲಿ ಶಾಖವನ್ನು ಹೆಚ್ಚಿಸುತ್ತದೆ ಮತ್ತು ಆ ಪ್ರದೇಶಗಳು ತೀವ್ರ ಬರದ ಸ್ಥಿತಿ ಎದುರಿಸಬೇಕಾಗುತ್ತದೆ.

ಇದೇ ವೇಳೆ, ಎಲ್‌ನಿನೊ ಕಾರಣದಿಂದಲೇ ಅಮೆರಿಕದ ಕ್ಯಾಲಿಫೋರ್ನಿಯಾ ಮತ್ತು ಇತರ ಪ್ರದೇಶಗಳಲ್ಲಿ ಭಾರೀ ಮಳೆಯಾಗಬಹುದು ಮತ್ತು ಪ್ರವಾಹದಿಂದಾಗಿ ಅಪಾರ ಸಾವುಗಳೂ ಸಂಭವಿಸಬಹುದು ಎಂದು ಪರಿಸರ ತಜ್ಞರು ಎಚ್ಚರಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಈ ದಿನ ಸಂಪಾದಕೀಯ | ಬಿಜೆಪಿ ಸರ್ಕಾರ ಕೆಎಂಎಫ್ ಅನ್ನು ಮುಗಿಸುತ್ತಿದೆಯೇ? ವಾಸ್ತವವೇನು?

ಎಲ್‌ನಿನೊ ಇದ್ದರೂ ಉತ್ತಮ ಮುಂಗಾರು

ಎಲ್‌ನಿನೊ ಇದ್ದ ವರ್ಷಗಳಲ್ಲೂ ಮುಂಗಾರು ಅತ್ಯುತ್ತಮವಾಗಿರುವ ಉದಾಹರಣೆಗಳೂ ಇವೆ. 1951ರಿಂದ 2022ರ ನಡುವೆ ಶೇ 40ರಷ್ಟು ವರ್ಷಗಳಲ್ಲಿ ಶಾಖದ ಹೊರತಾಗಿಯೂ ಭಾರತ ಸಾಮಾನ್ಯ ಮುಂಗಾರು ಕಂಡಿದೆ ಎಂದು ಐಎಂಡಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದೆ.

ಪಾಶ್ಚಾತ್ಯ ಭಾಗ ಶಾಖದಿಂದ ಬೆಚ್ಚಗಿರುವಾಗ ಅದರ ಧನಾತ್ಮಕ ಪ್ರಭಾವದಿಂದ ಭಾರತದಾದ್ಯಂತ ಮುಂಗಾರು ಸಮೃದ್ಧವಾಗಿದ್ದೂ ಇದೆ. ಪೂರ್ವ ಭಾಗ ಬೆಚ್ಚಗಿದ್ದಾಗ ಅದರ ಋಣಾತ್ಮಕ ಪ್ರಮಾಣವಾಗಿ ಭಾರತದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿತ್ತು.

ಈಗ ತಟಸ್ಥ ಶಾಖದ ಅಲೆಗಳು ಇರುವುದರಿಂದ ಈ ಮಳೆ ಋತುವಿನಲ್ಲಿ ಧನಾತ್ಮಕ ಪರಿಣಾಮ ಬೀರುವ ನಿರೀಕ್ಷೆಯಿದೆ. ಸಾಮಾನ್ಯವಾಗಿ ಶಾಖದ ಸಮಸ್ಯೆ ಸೆಪ್ಟೆಂಬರ್‌- ನವೆಂಬರ್‌ನಲ್ಲಿ ಭಾರತದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಮುಂಗಾರು ಮೇಲೆ ಪರಿಣಾಮ ಬೀರುವ ಸಾಧ್ಯತೆ ಕಡಿಮೆ ಎಂದು ಐಎಂಡಿ ತಿಳಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...