ಬಾಬರಿ ಮಸೀದಿ ನಿರ್ಮಿಸಲು ನೆಹರು ಬಯಸಿದ್ದರೇ? ರಾಜನಾಥ್ ಸಿಂಗ್ ಹೇಳಿಕೆಯ ಉದ್ದೇಶವೇನು?

Date:

ಈವರೆಗೂ ಯಾರೂ ಹೇಳದ ಮತ್ತು ಎಲ್ಲೂ ಚರ್ಚೆಯಾಗದ ವಿಷಯವೊಂದನ್ನು ರಾಜನಾಥ್ ಸಿಂಗ್ ಅಚಾನಕ್ಕಾಗಿ ಹೇಳುವುದಕ್ಕೆ ರಾಜಕೀಯ ಕಾರಣ ಇದೆಯೇ ಹೊರತು ಐತಿಹಾಸಿಕ ಆಧಾರಗಳು ಇರುವ ಸಾಧ್ಯತೆ ಇಲ್ಲ ಎಂದೇ ಹೇಳಲಾಗುತ್ತಿದೆ. ಇಲ್ಲಿರುವ ಇನ್ನೊಂದು ಸಂಗತಿ ಏನೆಂದರೆ ಹೀಗೆ ಹೇಳಿಕೆ ನೀಡಿದ ತಕ್ಷಣ ಬಿಜೆಪಿ ಐಟಿಸೆಲ್ ಚುರುಕಾಗುತ್ತದೆ.

ಖಜಾನೆಯ ಹಣವನ್ನು ಬಳಸಿ ಬಾಬರಿ ಮಸೀದಿಯನ್ನು ನಿರ್ಮಿಸಲು ಪ್ರಥಮ ಪ್ರಧಾನಿ ನೆಹರೂ ಬಯಸಿದ್ದರು ಮತ್ತು ಇದಕ್ಕೆ ಗೃಹ ಸಚಿವ ಸರ್ದಾರ್ ಪಟೇಲ್ ಅವರು ವಿರೋಧ ವ್ಯಕ್ತಪಡಿಸಿದ್ದರಿಂದ ನೆಹರೂ ಬಯಕೆ ಈಡೇರಲಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೀಡಿರುವ ಹೇಳಿಕೆ ಚರ್ಚೆಗೆ ಒಳಗಾಗಿದೆ. ಇದು ಸುಳ್ಳಿನ ಕಂತೆ ಎಂದು ಕಾಂಗ್ರೆಸ್ ಹೇಳಿದೆ. ವಾಟ್ಸಾಪ್ ಯೂನಿವರ್ಸಿಟಿಯಿಂದ ಹೆಕ್ಕಿಕೊಳ್ಳಲಾದ ಮಾಹಿತಿ ಇದು ಎಂದು ಕಾಂಗ್ರೆಸ್ ಕಿಡಿ ಕಾರಿದೆ. ದೇಶದ ಪ್ರಮುಖ ಸಮಸ್ಯೆಗಳನ್ನು ಚರ್ಚೆಯಾಗದಂತೆ ನೋಡಿಕೊಳ್ಳುವ ಉದ್ದೇಶದ ಭಾಗವಾಗಿ ಅವರು ಈ ಹೇಳಿಕೆಯನ್ನು ನೀಡಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನದ ಅಂಗವಾಗಿ ಗುಜರಾತ್ ನ ವಡೋದರದಲ್ಲಿ ಏರ್ಪಡಿಸಲಾಗಿದ್ದ ಸಭೆಯಲ್ಲಿ ರಾಜನಾಥ್ ಈ ಹೇಳಿಕೆ ನೀಡಿದ್ದಾರೆ. ಹಾಗಂತ ಈ ಹೇಳಿಕೆಗೆ ಅವರು ಯಾವ ಆಧಾರವನ್ನೂ ಕೊಟ್ಟಿಲ್ಲ. ಗ್ರೋಕ್ ಸಹಿತ ಯಾವುದೇ ಮೂಲಗಳಲ್ಲೂ ಇದಕ್ಕೆ ಆಧಾರವೂ ಸಿಗುತ್ತಿಲ್ಲ. ಕಾಂಗ್ರೆಸ್ಸಿನ ವಿರೋಧವನ್ನು ರಾಜಕೀಯ ವಿರೋಧ ಎಂದು ಹೇಳಿ ತಳ್ಳಿ ಹಾಕಬಹುದಾದರೂ ಅವರ ಹೇಳಿಕೆಯನ್ನು ಸಾಬೀತುಪಡಿಸುವ ಇನ್ನಾವ ಆಧಾರಗಳೂ ಸಿಗದೇ ಇರುವುದರಿಂದ ರಾಜನಾಥ್ ಸಿಂಗ್ ಅವರ ಹೇಳಿಕೆ ಪ್ರಶ್ನಾರ್ಹವಾಗುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

1950ರಲ್ಲಿ ಗೋಪಾಲ್ ಸಿಂಗ್ ವಿಶಾರದ್ ಮತ್ತು ಝಹೂರ್ ಅಹ್ಮದ್ ಅವರ ಮೊಕದ್ದಮೆಯಲ್ಲಿ ನೆಹರು ಸರ್ಕಾರದ ನಿಲುವು ಸ್ಪಷ್ಟವಾಗುತ್ತದೆ. ಬಾಬರಿ ಮಸೀದಿಯ ಕುರಿತಂತೆ ಯಥಾ ಸ್ಥಿತಿ ಕಾಯ್ದುಕೊಳ್ಳುವಂತೆ ನೆಹರೂ ಸರಕಾರ ಆಗ ಆದೇಶಿಸಿತ್ತು

1949ರಲ್ಲಿ ಬಾಬರಿ ಮಸೀದಿ ಒಳಗೆ ವಿಗ್ರಹವನ್ನು ಇರಿಸಲಾಗಿದೆ ಎಂಬ ಆರೋಪ ಮತ್ತು ವಿವಾದದ ಮಧ್ಯೆ ಯಥಾ ಸ್ಥಿತಿಯನ್ನು ಕಾಯ್ದುಕೊಳ್ಳಲು ನೆಹರು ಆದೇಶಿಸಿದ್ದರು

ಇದರಾಚೆಗೆ ನೆಹರು ಅವರು ಬಾಬರಿ ಮಸೀದಿಯನ್ನು ನಿರ್ಮಿಸಲು ಯೋಚಿಸಿದ್ದರು ಎಂಬುದಕ್ಕೆ ಐತಿಹಾಸಿಕವಾಗಿ ಯಾವುದೇ ದಾಖಲೆಗಳು ಸಿಗುತ್ತಿಲ್ಲ. ಹೀಗಿರುವಾಗ ರಾಜನಾಥ್ ಸಿಂಗ್ ಅವರು ಇಂಥದೊಂದು ಹೇಳಿಕೆಯನ್ನು ಕೊಟ್ಟಿರುವುದಕ್ಕೆ ಕಾರಣ ಏನು ಎಂಬ ಚರ್ಚೆಯು ನಡೆಯುತ್ತಿದೆ.

ಎಸ್ಐಆರ್ ಬಗ್ಗೆ ಪಾರ್ಲಿಮೆಂಟಲ್ಲಿ ಚರ್ಚಿಸಲು ವಿರೋಧ ಪಕ್ಷಗಳು ತಯಾರಿ ನಡೆಸುತ್ತಿರುವಾಗ ಮತ್ತು ದೇಶಾದ್ಯಂತ ಬಿ ಎಲ್ ಓ ಗಳ ಆತ್ಮಹತ್ಯೆಯಿಂದ ಕೇಂದ್ರ ಸರಕಾರದ ಮೇಲೆ ಒತ್ತಡ ಬೀಳುತ್ತಿರುವಾಗ ಅದರ ಮೇಲಿನ ಗಮನ ಬೇರೆಡೆಗೆ ಹರಿಸುವುದಕ್ಕಾಗಿಯೇ ಅವರು ಈ ಹೇಳಿಕೆ ನೀಡಿದ್ದಾರಾ ಎಂಬ ಚರ್ಚೆಯೂ ನಡೆಯುತ್ತಿದೆ

ಈವರೆಗೂ ಯಾರೂ ಹೇಳದ ಮತ್ತು ಎಲ್ಲೂ ಚರ್ಚೆಯಾಗದ ವಿಷಯವೊಂದನ್ನು ರಾಜನಾಥ್ ಸಿಂಗ್ ಅಚಾನಕ್ಕಾಗಿ ಹೇಳುವುದಕ್ಕೆ ರಾಜಕೀಯ ಕಾರಣ ಇದೆಯೇ ಹೊರತು ಐತಿಹಾಸಿಕ ಆಧಾರಗಳು ಇರುವ ಸಾಧ್ಯತೆ ಇಲ್ಲ ಎಂದೇ ಹೇಳಲಾಗುತ್ತಿದೆ. ಇಲ್ಲಿರುವ ಇನ್ನೊಂದು ಸಂಗತಿ ಏನೆಂದರೆ ಹೀಗೆ ಹೇಳಿಕೆ ನೀಡಿದ ತಕ್ಷಣ ಬಿಜೆಪಿ ಐಟಿಸೆಲ್ ಚುರುಕಾಗುತ್ತದೆ. ದೇಶಾದ್ಯಂತ ಈ ಹೇಳಿಕೆಯನ್ನು ಹಂಚುತ್ತದೆ. ಈ ಹೇಳಿಕೆಯ ಜೊತೆಗೆ ಇನ್ನಷ್ಟು ಕಥೆಗಳನ್ನು ಸೃಷ್ಟಿಸಿ ಹಂಚಿಕೊಳ್ಳುವ ಪ್ರಯತ್ನ ನಡೆಯುತ್ತದೆ. ಹೀಗೆ ಜನರ ಮನಸ್ಸಿನಲ್ಲಿ ನೆಹರು ಅವರನ್ನು ಹಿಂದೂ ವಿರೋಧಿಯಾಗಿ ಮತ್ತು ಮುಸ್ಲಿಂ ಓಲೈಕೆಯ ವ್ಯಕ್ತಿಯಾಗಿ ಬಿಂಬಿಸುವ ಶ್ರಮ ಯಶಸ್ವಿಯಾಗುತ್ತದೆ.

ಇದನ್ನೂ ಓದಿ TATA ಗ್ರೂಪ್ ಗೆ ಸೆಮಿಕಂಡಕ್ಟರ್ ಅನುಮೋದನೆಯ ಹಿಂದಿನ ಸತ್ಯ- ಬಿಜೆಪಿಗೆ ₹750 ಕೋಟಿ ದೇಣಿಗೆ!

ಇದರ ಬಳಿಕ ಬರುವ ಸತ್ಯ ಸುದ್ದಿಗೆ ಇಷ್ಟು ಪ್ರಚಾರ ಸಿಗುವುದಿಲ್ಲ ಅದನ್ನು ಹಂಚಿಕೊಳ್ಳುವವರೂ ಇರುವುದಿಲ್ಲ. ಇಂತಹದೊಂದು ತಂತ್ರದಿಂದಲೇ ಅವರು ಈ ಹೇಳಿಕೆಯನ್ನು ನೀಡಿದ್ದಾರಾ ಎಂಬ ಅನುಮಾನವೂ ಕಾಡುತ್ತಿದೆ

ಅಂತೂ ರಾಜನಾಥ್ ಸಿಂಗ್ ಅವರಲ್ಲಿ ಕಾಂಗ್ರೆಸ್ ಆಧಾರವನ್ನು ಕೇಳುತ್ತಿದ್ದರೆ ಅತ್ತ ರಾಜನಾಥ್ ಸಿಂಗ್ ಅವರು ಸುಮ್ಮನಿದ್ದಾರೆ. ವಾಟ್ಸಪ್ ನಲ್ಲಿ ಸುಳ್ಳು ಸುದ್ದಿಗಳಂತೂ ಧಾರಾಳ ಹರಿದಾಡುತ್ತಿದೆ. ಹೇಳಿಕೆ ನೀಡಿದವರ ಉದ್ದೇಶ ಇದುವೇ ಇರಬಹುದೇನೋ ಎಂಬ ಅನುಮಾನವೂ ಕಾಡುತ್ತಿದೆ.

kukkila
ಏ ಕೆ ಕುಕ್ಕಿಲ
+ posts

ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಏ ಕೆ ಕುಕ್ಕಿಲ
ಏ ಕೆ ಕುಕ್ಕಿಲ
ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...