ಹಲಾಲ್ ಪ್ರಮಾಣೀಕೃತ ಉತ್ಪನ್ನಗಳನ್ನು ಖರೀದಿಸಬೇಡಿ. ಉತ್ತರ ಪ್ರದೇಶವು ಈ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಿದೆ. ಯಾಕೆಂದರೆ, ಅವುಗಳ ಮಾರಾಟದಿಂದ ಬರುವ ಲಾಭವನ್ನು ಬಲವಂತದ ಮತಾಂತರ, ಭಯೋತ್ಪಾದನೆ ಹಾಗೂ ಲವ್ ಜಿಹಾದ್ಗೆ ಬಳಸಲಾಗುತ್ತದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದ್ವೇಷ ಭಾಷಣ ಮಾಡಿದ್ದಾರೆ. ತಮ್ಮೊಳಗಿನ ವಿಕೃತಿಯನ್ನು ಮತ್ತೊಮ್ಮೆ ಹೊರಹಾಕಿದ್ದಾರೆ.
ಆರ್ಎಸ್ಎಸ್ನ ಶತಮಾನೋತ್ಸವ ಆಚರಣೆಗಾಗಿ ಗೋರಖ್ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ್ದಾರೆ. “ನೀವು ಏನನ್ನಾದರೂ ಖರೀದಿಸುವಾಗ, ಅದಕ್ಕೆ ಹಲಾಲ್ ಪ್ರಮಾಣೀಕರಣ ಟ್ಯಾಗ್ ಇಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ನಂತರ ಖರೀದಿಸಿ” ಎಂದು ಹೇಳಿದ್ದಾರೆ.
“ಉತ್ತರ ಪ್ರದೇಶದಲ್ಲಿ ಹಲಾಲ್ ಪ್ರಮಾಣೀಕೃತ ಉತ್ಪನ್ನಗಳನ್ನು ಮಾರಾಟ ಮಾಡಲು ಯಾರೂ ಧೈರ್ಯ ಮಾಡುವುದಿಲ್ಲ. ಸೋಪುಗಳು, ಬಟ್ಟೆಗಳು, ಬೆಂಕಿಕಡ್ಡಿಗಳು ಇತ್ಯಾದಿ ಹಲವಾರು ಉತ್ಪನ್ನಗಳು ಈಗ ಹಲಾಲ್ ಪ್ರಮಾಣೀಕರಣ ಟ್ಯಾಗ್ನೊಂದಿಗೆ ಬರುತ್ತವೆ. ಹಲಾಲ್ ಪ್ರಮಾಣೀಕರಣವನ್ನು ಬಳಸಿಕೊಂಡು 25,000 ಕೋಟಿ ರೂ. ಗಳಿಸಲಾಗುತ್ತದೆ” ಎಂದು ಯೋಗಿ ಹೇಳಿದ್ದಾರೆ.
#WATCH | Gorakhpur: Uttar Pradesh CM Yogi Adityanath attends the RSS centenary program.
— ANI (@ANI) October 21, 2025
He says, "When purchasing any item, check if it has a Halal certification label. We have banned it in UP. Today, no one in Uttar Pradesh will dare to buy or sell it… When we initiated the… pic.twitter.com/qmw6uiqxpu
“ಭಾರತದಲ್ಲಿ ಹಲಾಲ್ ಪ್ರಮಾಣಿಕೃತ ಉತ್ಪನ್ನಗಳ ಮಾರಾಟದಿಂದ ಬರುವ ಎಲ್ಲ ಲಾಭದ ಹಣವನ್ನು ಭಯೋತ್ಪಾದನೆ, ಲವ್ ಜಿಹಾದ್ ಹಾಗೂ ಮತಾಂತರಕ್ಕೆ ದುರುಪಯೋಗ ಮಾಡಿಕೊಳ್ಳಲಾಗುತ್ತದೆ” ಎಂದು ಆದಿತ್ಯನಾಥ್ ದ್ವೇಷದ ಆರೋಪ ಮಾಡಿದ್ದಾರೆ.
“ನಮ್ಮ ಪೂರ್ವಜರು ಬ್ರಿಟಿಷರು ಮತ್ತು ಫ್ರೆಂಚ್ ವಿರುದ್ಧ ಮಾತ್ರವಲ್ಲದೆ ರಾಜಕೀಯ ಇಸ್ಲಾಂ ವಿರುದ್ಧವೂ ಹೋರಾಡಿದರು. ವೀರ ಶಿವಾಜಿ ಮತ್ತು ಮಹಾರಾಣಾ ಪ್ರತಾಪ್ರಂತಹ ವೀರರು ಇದಕ್ಕೆ ಸಾಕ್ಷಿಯಾಗಿದ್ದಾರೆ. ಬ್ರಿಟಿಷ್ ಮತ್ತು ಫ್ರೆಂಚ್ ವಸಾಹತುಶಾಹಿಯ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಆದರೆ ನಂಬಿಕೆಯನ್ನು ದುರ್ಬಲಗೊಳಿಸಿದ ರಾಜಕೀಯ ಇಸ್ಲಾಂ ಬಗ್ಗೆ ಚರ್ಚೆ ನಡೆಯುವುದು ಅಪರೂಪ” ಎಂದು ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ.




