ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

Date:

ಛತ್ತೀಸ್‌ಗಢದ ಯುವಕನೊಬ್ಬನಿಗೆ ತಾಂತ್ರಿಕ ದೋಷದಿಂದಾಗಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ರ ಹಳೆಯ ಸಿಮ್ ಸಂಖ್ಯೆ ದೊರೆತಿದ್ದು, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಮತ್ತು ಯಶ್ ದಯಾಳ್‌ರಂತಹ ಕ್ರಿಕೆಟ್ ದಿಗ್ಗಜರಿಂದ ಕರೆಗಳು ಬಂದ ಘಟನೆ ಬೆಳಕಿಗೆ ಬಂದಿದೆ.

ಗರಿಯಾಬಂದ್ ಜಿಲ್ಲೆಯ ಮಡಗಾಂವ್ ಗ್ರಾಮದ 21 ವರ್ಷದ ಮನೀಶ್ ಬಿಸಿ ಎಂಬ ಯುವಕನಿಗೆ ಈ ಸಿಮ್ ಸಂಖ್ಯೆ ಮಂಜೂರಾಗಿತ್ತು. ಕಳೆದ ಆರು ತಿಂಗಳಿನಿಂದ ಈ ಸಂಖ್ಯೆಯನ್ನು ಯಾರೂ ಬಳಸದ ಕಾರಣ, ಟೆಲಿಕಾಂ ಕಂಪನಿಯ ನಿಯಮಗಳ ಪ್ರಕಾರ ಇದನ್ನು ಮನೀಶ್‌ಗೆ ಮರು ಮಂಜೂರು ಮಾಡಲಾಗಿತ್ತು ಎಂದು ಗರಿಯಾಬಂದ್ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ರಖೇಚಾ ತಿಳಿಸಿದ್ದಾರೆ.

“ಈ ಸಂಖ್ಯೆಯು ರಜತ್ ಪಾಟೀದಾರ್‌ರ ವಾಟ್ಸ್‌ಆ್ಯಪ್ ಖಾತೆಗೆ ಸಂಬಂಧಿಸಿದ್ದಾಗಿದ್ದು, ಆರು ತಿಂಗಳಿಗೂ ಹೆಚ್ಚು ಕಾಲ ನಿಷ್ಕ್ರಿಯವಾಗಿತ್ತು. ಕಂಪನಿಯ ನಿಯಮದಂತೆ, ಇಂತಹ ಸಂಖ್ಯೆಗಳನ್ನು ಮತ್ತೊಬ್ಬ ಗ್ರಾಹಕನಿಗೆ ಮಂಜೂರು ಮಾಡಲಾಗುತ್ತದೆ. ಈ ಕಾರಣದಿಂದ ಮನೀಶ್ ಈ ಸಿಮ್ ಪಡೆದಿದ್ದರು. ಈಗ ಈ ಸಂಖ್ಯೆಯನ್ನು ರಜತ್ ಪಾಟೀದಾರ್‌ಗೆ ಮರಳಿಸಲಾಗಿದೆ,” ಎಂದು ರಖೇಚಾ ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮನೀಶ್ ಬಿಸಿ ಜೂನ್‌ನಲ್ಲಿ ಸ್ಥಳೀಯ ಮೊಬೈಲ್ ಅಂಗಡಿಯಿಂದ ಈ ಸಿಮ್ ಖರೀದಿಸಿದ್ದರು. ಒಂದು ವಾರದ ನಂತರ, ಆತನ ಸ್ನೇಹಿತ ಖೇಮ್ ರಾಜ್ ವಾಟ್ಸ್‌ಆ್ಯಪ್ ಅಳವಡಿಸುವಾಗ ರಜತ್ ಪಾಟೀದಾರ್‌ರ ಚಿತ್ರವು ಪ್ರೊಫೈಲ್‌ನಲ್ಲಿ ಸ್ವಯಂಚಾಲಿತವಾಗಿ ಕಾಣಿಸಿತು. ಮೊದಲಿಗೆ ಇದು ತಾಂತ್ರಿಕ ದೋಷವಿರಬಹುದು ಎಂದು ಭಾವಿಸಿದ ಮನೀಶ್, ಸಿಮ್‌ ಅಳವಡಿಸಿದ ನಂತರ ಕೊಹ್ಲಿ, ಎಬಿಡಿ ಮತ್ತು ಇತರ ಕ್ರಿಕೆಟಿಗರಿಂದ ಕರೆಗಳನ್ನು ಸ್ವೀಕರಿಸಲಾರಂಭಿಸಿದರು. ಆ ಕರೆಗಳಲ್ಲಿ ಎಲ್ಲರೂ ಆತನನ್ನು “ರಜತ್” ಎಂದೇ ಸಂಬೋಧಿಸುತ್ತಿದ್ದರು.

ಇದನ್ನು ಓದಿದ್ದೀರಾ? ಟೆಸ್ಟ್ ಕ್ರಿಕೆಟ್‌ನಲ್ಲಿರುವ ನಿಜವಾದ ಸೌಂದರ್ಯ ಹಾಗೂ ಭರವಸೆ ಮೂಡಿಸಿದ ಯಂಗ್ ಇಂಡಿಯಾ ಟೀಮ್

ಈ ಕರೆಗಳನ್ನು ಪ್ರ್ಯಾಂಕ್ ಎಂದು ಭಾವಿಸಿದ ಮನೀಶ್, ಸುಮಾರು ಎರಡು ವಾರಗಳ ಕಾಲ ಕ್ರಿಕೆಟಿಗರ ಜೊತೆ ಸಂಭಾಷಣೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಆದರೆ, ತಮ್ಮ ಸಂಖ್ಯೆಗೆ ಪ್ರವೇಶವಿಲ್ಲದ ಕಾರಣ ರಜತ್ ಪಾಟೀದಾರ್ ಮಧ್ಯಪ್ರದೇಶ ಸೈಬರ್ ಸೆಲ್‌ಗೆ ದೂರು ನೀಡಿದಾಗ, ಈ ವಿಷಯ ಗಂಭೀರವಾಯಿತು. ಸೈಬರ್ ಸೆಲ್ ತಂಡ ಗರಿಯಾಬಂದ್ ಪೊಲೀಸರ ಸಹಾಯದಿಂದ ಮನೀಶ್‌ನ ಗ್ರಾಮಕ್ಕೆ ತೆರಳಿ, ಸಿಮ್‌ ಅನ್ನು ಮರಳಿ ರಜತ್‌ಗೆ ಮರಳಿಸಿದೆ.

ಕ್ರಿಕೆಟ್‌ನ ದೊಡ್ಡ ಅಭಿಮಾನಿಯಾದ ಮನೀಶ್‌ಗೆ ಈ ಘಟನೆ ಒಂದು ಅವಿಸ್ಮರಣೀಯ ಅನುಭವವಾಗಿದೆ. “ವಿರಾಟ್ ಕೊಹ್ಲಿ ಮತ್ತು ಎಬಿಡಿಯಂತಹ ದಿಗ್ಗಜರ ಜೊತೆ ಮಾತನಾಡುವ ಅವಕಾಶ ಸಿಕ್ಕಿತು. ಒಂದು ದಿನ ರಜತ್ ಪಾಟೀದಾರ್‌ರನ್ನು ಭೇಟಿಯಾಗುವ ಆಸೆ ಇದೆ,” ಎಂದು ಮನೀಶ್ ತಿಳಿಸಿದ್ದಾರೆ. ರಜತ್ ಪಾಟೀದಾರ್ ದೇಶೀಯ ಕ್ರಿಕೆಟ್‌ನಲ್ಲಿ ಮಧ್ಯಪ್ರದೇಶವನ್ನು ಪ್ರತಿನಿಧಿಸುತ್ತಿದ್ದು, ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ನಾಯಕರಾಗಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...