ಗೋವಾ | ಡಚ್‌ ಪ್ರಜೆ, ವ್ಯಕ್ತಿಗೆ ಕಿರುಕುಳ, ಹಲ್ಲೆ ; ರೆಸಾರ್ಟ್‌ ಸಿಬ್ಬಂದಿ ಬಂಧನ

Date:

  • ಯೋಗ ಕಾರ್ಯಕ್ರಮಕ್ಕಾಗಿ ಗೋವಾಗೆ ಆಗಮಿಸಿದ್ದ ಡಚ್‌ ಪ್ರಜೆ
  • 2 ವರ್ಷದಿಂದ ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ

ಡಚ್‌ ಪ್ರಜೆ ಒಬ್ಬರಿಗೆ ಚೂರಿಯಿಂದ ಇರಿದು, ಕಿರುಕುಳ ನೀಡಿ ಅವರಿಗೆ ಸಹಾಯ ಮಾಡಲು ತೆರಳಿದ ಇನ್ನೊಬ್ಬ ವ್ಯಕ್ತಿಗೂ ಚೂರಿಯಿಂದ ಇರಿದಿರುವ ಆರೋಪದಲ್ಲಿ ಉತ್ತರ ಗೋವಾದ ಪರ್ನೆಮ್‌ನಲ್ಲಿರುವ ರೆಸಾರ್ಟ್‌ನ ಸಿಬ್ಬಂದಿ ಅಭಿಷೇಕ್ ವರ್ಮಾನನ್ನು ಪೊಲೀಸರು ಶುಕ್ರವಾರ (ಮಾರ್ಚ್‌ 31) ಬಂಧಿಸಿದ್ದಾರೆ.

ಗಾಯಗೊಂಡ ಡಚ್‌ ಮಹಿಳೆ ಯುರಿಕೊ (29) ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

“ಗುರುವಾರ (ಮಾರ್ಚ್‌ 30) ರಾತ್ರಿ ನಡೆದ ಘಟನೆ ಸಂಬಂಧ ಉತ್ತರಾಖಂಡ್‌ ಮೂಲದ 27 ವರ್ಷದ ಅಭಿಷೇಕ್‌ ವರ್ಮಾನನ್ನು ಬಂಧಿಸಲಾಗಿದೆ. ಈತ ಎರಡು ವರ್ಷಗಳಿಂದ ರೆಸಾರ್ಟ್ ಪರಿಚಾರಕನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ” ಎಂದು ಗೋವಾ ಪೊಲೀಸರು ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ನಾನು ಈ ತಿಂಗಳ ಆರಂಭದಿಂದ ಪ್ರವಾಸ ಕೈಗೊಂಡಿದ್ದೇನೆ. ಈಗಾಗಲೇ ರಾಜಸ್ಥಾನ ಹಾಗೂ ಮುಂಬೈಗೆ ಭೇಟಿ ನೀಡಿದ್ದೇನೆ. ನಾಲ್ಕು ದಿನದ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಲು ಗೋವಾಗೆ ಪ್ರವಾಸ ಮಾಡಿದೆ. ಕಾರ್ಯಕ್ರಮಕ್ಕೂ ಮೊದಲು ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದೆ. ಊಟದ ಬಳಿಕ ಟೆಂಟ್‌ನಲ್ಲಿ ವಿರಾಮಕ್ಕೆ ತೆರಳಿದೆ. ನಡುರಾತ್ರಿ 2 ಗಂಟೆಗೆ ಟೆಂಟ್‌ಗೆ ಒಬ್ಬ ಅಪರಿಚಿತ ವ್ಯಕ್ತಿ ಆಗಮಿಸಿದ. ಆತ ನನ್ನ ಮೇಲೆ ಎರಗಿದ” ಎಂದು ಡಚ್‌ ಪ್ರಜೆ ಯುರಿಕೊ ಪೊಲೀಸರಿಗೆ ತಿಳಿಸಿದ್ದಾರೆ.

“ಆರೋಪಿಯು ನನ್ನನ್ನು ಹಿಡಿಯಲು ಪ್ರಯತ್ನಿಸಿದ. ನಾನು ಅವನನ್ನು ತಳ್ಳಲು ಪ್ರಯತ್ನಿಸಿದೆ. ನಂತರ ಜೋರಾಗಿ ಕೂಗಿದೆ. ಆಗ ಇನ್ನೊಬ್ಬ ವ್ಯಕ್ತಿ ಟೆಂಟ್‌ನೊಳಗೆ ಧಾವಿಸಿ ಸಹಾಯಕ್ಕೆ ಮುಂದಾದ. ಅಲ್ಲಿಂದ ಓಡಿಹೋದ ಆರೋಪಿ ಬಳಿಕ ಚಾಕುವಿನೊಡನೆ ಬಂದು ನನಗೆ ಹಾಗೂ ಸಹಾಯಕ್ಕೆ ಬಂದಿದ್ದ ವ್ಯಕ್ತಿ ಮೇಲೆ ಹಲ್ಲೆ ಮಾಡಿದ” ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಶ್ರೀರಾಮನವಮಿ | ಬಂಗಾಳ, ಗುಜರಾತ್‌, ಮಹಾರಾಷ್ಟ್ರದಲ್ಲಿ ಗಲಭೆ

“ಸಂತ್ರಸ್ತೆಯಾದ ಡಚ್‌ ಪ್ರಜೆ ಯುರಿಕೊ ಅವರ ರೆಸಾರ್ಟ್‌ನ ಬಾಡಿಗೆ ಟೆಂಟ್‌ಗೆ ರೆಸಾರ್ಟ್‌ ಸಿಬ್ಬಂದಿಯೊಬ್ಬ ಅತಿಕ್ರಮ ಪ್ರವೇಶ ಮಾಡಿದ್ದ. ಡಚ್‌ ಮಹಿಳೆ ಸಹಾಯಕ್ಕಾಗಿ ಚೀರಿದರು. ಆಗ ಮಹಿಳೆ ರಕ್ಷಣೆಗೆ ಸ್ಥಳೀಯ ಪ್ರವಾಸಿಯೊಬ್ಬರು ಅಲ್ಲಿಗೆ ಧಾವಿಸಿದರು. ನಂತರ ಆರೋಪಿ ಅಲ್ಲಿಂದ ಓಡಿ ಹೋದ. ಸ್ವಲ್ಪ ಸಮಯದ ನಂತರ ಅಲ್ಲಿಗೆ ಬಂದ ಆರೋಪಿ ಚಾಕುವಿನಿಂದ ಡಚ್ ಪ್ರಜೆ ಹಾಗೂ ಸ್ಥಳೀಯ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಪರಾರಿಯಾದ. ಇಬ್ಬರನ್ನೂ ಚಿಕಿತ್ಸೆಗೆ ಆಸ್ಪತ್ರೆಗೆ ರವಾನಿಸಲಾಗಿದೆ” ಎಂದು ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌ಪಿ) ನಿಧಿನ್‌ ವಲ್ಸನ್‌ ಹೇಳಿದ್ದಾರೆ.

ಆರೋಪಿಯ ವಿರುದ್ಧ ಸೆಕ್ಷನ್ 307 (ಕೊಲೆಗೆ ಯತ್ನ), 354 (ಹೆಣ್ಣಿನ ಮೇಲೆ ದೌರ್ಜನ್ಯ), 452 (ಗಾಯ, ಹಲ್ಲೆ ಅಥವಾ ಅತಿಕ್ರಮಣ) ಮತ್ತು 506 (||) (ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...