ಕೇರಳದ ಕಾಸರಗೋಡಿನಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ದೇವಾಲಯಕ್ಕೆ ವಿಶೇಷ ಗೌರವ ನೀಡಲಾಗಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ವಿಡಿಯೋ ಹಂಚಿಕೊಂಡಿರುವ ಹಲವು ನೆಟ್ಟಿಗರು “ಇದು ನಿಜವಾದ ಕೇರಳ ಸ್ಟೋರಿ” ಎಂದು ಹೇಳಿದ್ದಾರೆ.
ಕಾಸರಗೋಡಿನ ಪಾಲಕುನ್ನುವಿನಲ್ಲಿರುವ ಕೊಟ್ಟಿಕುಲಂ ನೂರುಲ್ ಹುದಾ ಮದರಸಾ ಆಯೋಜಿಸಿದ್ದ ಈ ರ್ಯಾಲಿಯು ಪಾಲಕುನ್ನು ಕಜಕಂ ಭಗವತಿ ದೇವಸ್ಥಾನಕ್ಕೆ ವಿಶೇಷ ಗೌರವವನ್ನು ಸಲ್ಲಿಸಿದೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶನಿವಾರ ಪೋಸ್ಟ್ ಮಾಡಲಾಗಿದ್ದು, ಸದ್ಯ ಭಾರೀ ವೈರಲ್ ಆಗಿದ್ದು, ಒಂದು ದಿನದಲ್ಲೇ ಸುಮಾರು 20 ಲಕ್ಷಕ್ಕೂ ಅಧಿಕ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ’ಈ ದಿನ’ ಎಕ್ಸ್ಕ್ಲೂಸಿವ್: ಬಜರಂಗದಳದ ರೋಹನ್ ಕಲ್ಲೆಸೆತವೇ ಶಿವಮೊಗ್ಗ ಗಲಭೆಯ ಆರಂಭ ಬಿಂದುವೇ?
ದೇವಾಲಯದ ಬಳಿಯ ತನ್ನ ತಂದೆಯ ಅಂಗಡಿಯಲ್ಲಿದ್ದ ಪಾಲಕುನ್ನುವಿನ ಆರಟ್ಟುಕಡವಿನ ಅನಿಶಿತ್ ಕೆ ಎಂಬವರು ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, “ಇದು ಕೇರಳ. ಕೇರಳದ ವೈವಿಧ್ಯತೆಯಲ್ಲಿ ಏಕತೆ. ಮುಸ್ಲಿಮರು ನಬಿ ದಿನದಲ್ಲಿ ಹಿಂದೂ ದೇವಾಲಯಕ್ಕೆ ವಂದನೆ ಸಲ್ಲಿಸುವುದು, ಧರ್ಮಗಳ ನಡುವೆ ಗೌರವ ಮತ್ತು ಸಾಮರಸ್ಯವನ್ನು ತೋರಿಸುತ್ತದೆ” ಎಂದು ಹೇಳಿದ್ದಾರೆ.
A heartwarming scene from Palakkunnu Sri Bhagavathi Temple, Kasaragod, Kerala as Meelad-Un-Nabi Muslim Jamath Rally passes by with respect and love. ❤️
— Shamsi (@shamseerHashim) September 7, 2025
This is the true spirit of Kerala’s unity, a bond no one can break.
They are showing the respect of other Religion ❤️
✨🌸… pic.twitter.com/0MWULzNNPA
ಓಣಂ ಹಬ್ಬ ಮತ್ತು ಪ್ರವಾದಿ ಮೊಹಮ್ಮದ್ ಅವರ ಜನ್ಮ ದಿನಾಚರಣೆಯಾದ ಈದ್-ಎ-ಮಿಲಾದ್ ಜೊತೆಜೊತೆಯಲ್ಲೇ ಬಂದಿದ್ದು, ಕೇರಳದ ಹಲವಾರು ಭಾಗಗಳು ಕೋಮು ಸೌಹಾರ್ದತೆಯ ಇಂತಹ ನಿದರ್ಶನಗಳಿಗೆ ಸಾಕ್ಷಿಯಾದವು. ಓಣಂ ಮತ್ತು ಈದ್-ಎ-ಮಿಲಾದ್ನ ಭಾಗವಾಗಿ ನಡೆದ ಮೆರವಣಿಗೆಗಳಲ್ಲಿ ಭಾಗವಹಿಸುವವರು ಅನೇಕ ಸ್ಥಳಗಳಲ್ಲಿ ಪರಸ್ಪರ ಶುಭಾಶಯ ಕೋರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ನಿಜವಾದ ಭಾರತ ಎಂದು ನೆಟ್ಟಿಗರು ಹೇಳಿದ್ದಾರೆ.
ಮತ್ತೋರ್ವ ನೆಟ್ಟಿಗರು, “ಒಂದು ಕಾಲದಲ್ಲಿ ಇವೆಲ್ಲವೂ ಕೂಡಾ ಸಾಮಾನ್ಯವಾಗಿತ್ತು. ಆದರೆ ಇಂದು ಅದನ್ನು ವೈಭವೀಕರಿಸಲಾಗುತ್ತಿದೆ. ಅದಕ್ಕೆ ಕಾರಣವೂ ಇದೆ. ಆರ್ಎಸ್ಎಸ್ ಮತ್ತು ಬಿಪಿ ನಮ್ಮ ಭಾರತವನ್ನು ಹಿಂದೂಗಳ ಪಾಕಿಸ್ತಾನವನ್ನಾಗಿ ಪರಿವರ್ತಿಸುತ್ತಿರುವ ನಡುವೆ ಈ ಅಪರೂಪದ ದೃಶ್ಯ ಎಲ್ಲರ ಗಮನ ಸೆಳೆಯುತ್ತದೆ” ಎಂದು ಅಭಿಪ್ರಾಯಿಸಿದ್ದಾರೆ.
The Real Kerala story ❤️
— Gabbar (@Gabbar0099) September 6, 2025
The heartwarming scenes from the Eid e Milad processions in Kerala, A Hindu teacher waits in the rain to greet and gift a Madrasa student during Eid Milad-un-Nabi parade.
This is Kerala without BJP-RSS. pic.twitter.com/vfkuTlhS9t
ಇದರ ಜತೆಗೆ ಹಿಂದೂ ಶಿಕ್ಷಕಿಯೊಬ್ಬರು ಈದ್ ಮಿಲಾದ್ ಮೆರವಣಿಗೆಗೆ ಮಳೆಯಲ್ಲಿ ಕಾದು ನಿಂತು ತನ್ನ ವಿದ್ಯಾರ್ಥಿಗೆ ನೋಟುಗಳ ಮಾಲೆಯನ್ನು ಉಡುಗೊರೆಯಾಗಿ ಹಾಕಿ ಮುತ್ತಿಟ್ಟು ಸಂತೋಷಪಟ್ಟ ಘಟನೆಯೂ ಕೇರಳದಲ್ಲಿ ನಡೆದಿದೆ. ಈ ವಿಡಿಯೋ ಕೂಡಾ ವೈರಲ್ ಆಗಿದ್ದು, ಇದು ನಿಜವಾದ ಕೇರಳ ಸ್ಟೋರಿ ಎಂದು ನೆಟ್ಟಿಗರು ಹೇಳಿದ್ದಾರೆ.





