ಸುದ್ದಿವಿವರ | ‘ಡಿಜಿಟಲ್ ಕೊಲೆ’ಗೆ ಹಕ್ಕು ನೀಡುವ ಏಕಪಕ್ಷೀಯ ಫ್ಯಾಕ್ಟ್‌ಚೆಕ್ ವಿಭಾಗ

Date:

ಸರ್ಕಾರಕ್ಕೆ ಸಂಬಂಧಿಸಿದ ಆನ್‌ಲೈನ್ ಕಮೆಂಟ್‌ಗಳು, ಸುದ್ದಿ ವರದಿಗಳು ಅಥವಾ ಅಭಿಪ್ರಾಯಗಳನ್ನು ಪರಿಶೀಲಿಸುವ ಫ್ಯಾಕ್ಟ್‌ಚೆಕ್ ವಿಭಾಗ, ಸೆನ್ಸಾರ್‌ಶಿಪ್‌ ಮಾಡಲು ಸಂಬಂಧಿಸಿದ ವೇದಿಕೆಗಳಿಗೆ ಸೂಚಿಸುತ್ತದೆ.

ಕೇಂದ್ರ ಸರ್ಕಾರದ ಗಜೆಟ್ ನೋಟಿಫಿಕೇಶನ್‌ನಲ್ಲಿ ಏಪ್ರಿಲ್ 6ರಂದು ಡಿಜಿಟಲ್ ಮಾಧ್ಯಮಗಳ ಮೇಲೆ ಹೊಸ ಸೆನ್ಸಾರ್‌ಶಿಪ್ ಶಕ್ತಿ ಹುಟ್ಟಿಕೊಂಡಿತು. ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಒತ್ತಾಸೆಯಲ್ಲಿ ಮಾಹಿತಿ ತಂತ್ರಜ್ಞಾನ (ಮಧ್ಯಂತರ ಮಾರ್ಗದರ್ಶಿಗಳು ಮತ್ತು ಡಿಜಿಟಲ್ ಮಾಧ್ಯಮ ನೈತಿಕ ನೀತಿ ಸಂಹಿತೆ) ತಿದ್ದುಪಡಿ ನಿಯಮಗಳು 2023 (ಅಥವಾ ಐಟಿ ನಿಯಮಗಳು 2023) ಅಡಿಯಲ್ಲಿ ಫ್ಯಾಕ್ಟ್‌ಚೆಕ್ ವಿಭಾಗ ಸೃಷ್ಟಿಯಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಫ್ಯಾಕ್ಟ್‌ಚೆಕ್ ವಿಭಾಗಕ್ಕೆ ಅತಿಯಾದ ಶಕ್ತಿಯನ್ನು ನೀಡಲಾಗಿದೆ. ಇದು ದುರುದ್ದೇಶಪೂರಿತವಾಗಿ ಬಳಕೆಯಾದಲ್ಲಿ ಸಂತ್ರಸ್ತರಿಗೆ ಕುಂದುಕೊರತೆ ಮುಂದಿಡುವ ಅವಕಾಶವೂ ಇಲ್ಲ. ಒಂದು ಸುದ್ದಿಯನ್ನು ತೆಗೆಯುವಂತೆ ತೀರ್ಮಾನಿಸಿ ಸೂಚಿಸುವ ಮೊದಲು ಸಂಬಂಧಿತರೊಂದಿಗೆ ಚರ್ಚಿಸುವ ಅಗತ್ಯವೂ ಇಲ್ಲದ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲಿದೆ ಫ್ಯಾಕ್ಟ್‌ಚೆಕ್ ವಿಭಾಗ.

ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ಯಾವುದೇ ಸುದ್ದಿಯನ್ನು ಫ್ಯಾಕ್ಟ್‌ಚೆಕ್ ವಿಭಾಗ ‘ನಕಲಿ ಅಥವಾ ಸುಳ್ಳು ಅಥವಾ ದಾರಿ ತಪ್ಪಿಸುವ’ ಎಂದು ಪರಿಗಣಿಸಿ ಅಳಿಸುವಂತೆ ಆದೇಶಿಸುವ ಅಧಿಕಾರವನ್ನು ಐಟಿ ನಿಯಮಗಳು, 2023 ನೀಡಿದೆ.

ನಿಯಮಗಳನ್ನು ಹೇಗೆ ಹೇರಬಹುದು?

ಈ ಫ್ಯಾಕ್ಟ್‌ಚೆಕ್ ವಿಭಾಗ ಸರ್ಕಾರಿ ಅಧಿಕಾರಿಗಳು ಮತ್ತು ಸಚಿವರಿಗೆ ಸಂಬಂಧಿಸಿದ ಆನ್‌ಲೈನ್ ಕಮೆಂಟ್‌ಗಳು, ಸುದ್ದಿ ವರದಿಗಳು ಅಥವಾ ಅಭಿಪ್ರಾಯಗಳನ್ನು ಪರಿಶೀಲಿಸಲಿದೆ ಮತ್ತು ನಂತರ ಆನ್‌ಲೈನ್‌ ಸಂಸ್ಥೆಗಳಿಗೆ ಅಂತಹ ವಿಷಯದ ಸೆನ್ಸಾರ್‌ಶಿಪ್‌ಗೆ ಸೂಚಿಸುತ್ತದೆ. ಅಂತಹ ಸಂಸ್ಥೆಗಳಲ್ಲಿ ಕೇವಲ ಆನ್‌ಲೈನ್ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಮಾತ್ರ ಇಲ್ಲ, ಬದಲಾಗಿ ಐಎಸ್‌ಪಿಗಳು (ಅಂತರ್ಜಾಲ ಸೇವೆ ಒದಗಿಸುವವರು) ಮತ್ತು ಫೈಲ್ ಹೋಸ್ಟಿಂಗ್ ಕಂಪನಿಗಳೂ (ಬಳಕೆದಾರರು ಫೈಲ್ ಸಂಗ್ರಹಿಸುವ ಕ್ಲೌಡ್ ಸೇವೆ ನೀಡುವವರು) ಸೇರಿವೆ ಎನ್ನುವುದು ಆಘಾತಕಾರಿ ವಿಚಾರ.

ಐಟಿ ನಿಯಮಗಳನ್ನು ರೂಪಿಸಿದ್ದು ಹೇಗೆ?

ಹೊಸ ಐಟಿ ನಿಯಮಗಳು, 2023 ರಚಿಸಲು ಮಾಹಿತಿ ತಂತ್ರಜ್ಞಾನ, ಕಾಯ್ದೆ 2000ದ ಸೆಕ್ಷನ್ 79 ಅಡಿಯಲ್ಲಿ ನಿಯಮ ರಚಿಸುವ ಅಧಿಕಾರ ಬಳಸಿಕೊಳ್ಳಲಾಗಿದೆ. ಈ ಅಧಿಕಾರವನ್ನು ಸುಪ್ರೀಂಕೋರ್ಟ್ ಆದೇಶ ಮತ್ತು ಶಾಸನಾತ್ಮಕ ಉದ್ದೇಶದಿಂದ ಐಟಿ ಕಾಯ್ದೆಗೆ ವಿವರ ನೀಡಲೆಂದು ಕೊಡಲಾಗಿತ್ತು.

ಸುಪ್ರೀಂಕೋರ್ಟ್‌ನಲ್ಲಿ ಶ್ರೇಯಾ ಸಿಂಘಾಲ್ ಪ್ರಕರಣದ ತೀರ್ಪಿನಲ್ಲಿ ವಿವರಿಸಿರುವಂತೆ- ಸಂವಿಧಾನದ 19(2)ನೇ ವಿಧಿಯಡಿ ನೀಡಲಾದ ಮಿತಿಗಳೆಂದರೆ, ಸೆಕ್ಷನ್ 79 ಮತ್ತು ಐಟಿ ನಿಯಮಗಳು ವಾಸ್ತವದಲ್ಲಿ, “ಸುಪ್ರೀಂಕೋರ್ಟ್‌ನ ಆದೇಶಗಳ ಬಗ್ಗೆ ಸೇವೆ ಒದಗಿಸುವವರಿಗೆ ತಿಳಿಸುವುದು ಮತ್ತು ಅಕ್ರಮ ಚಟುವಟಿಕೆಗಳಿಗೆ ಸಂಬಂಧಿಸಿ ಕೇಂದ್ರ ಸರ್ಕಾರದ ಶಾಸನಾತ್ಮಕ ನಿರ್ಧಾರಗಳ ಬಗ್ಗೆ ಸೇವೆ ಒದಗಿಸುವ ಸಂಸ್ಥೆಗಳಿಗೆ ಸೂಚನೆ ನೀಡಬಹುದಾಗಿದೆ”. ಆದರೆ 19(2)ನೇ ವಿಧಿಯಡಿ ’ನಕಲಿ ಅಥವಾ ಸುಳ್ಳು ಅಥವಾ ದಾರಿ ತಪ್ಪಿಸುವ’ ಎನ್ನುವ ವಿವರಗಳಿಲ್ಲ.

ಐಟಿ ನಿಯಮಗಳನ್ನು ಸಾರ್ವಜನಿಕ ವ್ಯವಸ್ಥೆ, ರಾಷ್ಟ್ರೀಯ ಭದ್ರತೆ ಮತ್ತು ನೈತಿಕತೆ ಎನ್ನುವ ವಿಸ್ತಾರ ರೂಪದಲ್ಲಿ ಬೇಕಾದರೂ ಓದಿಕೊಳ್ಳಬಹುದು. ಆದರೆ ಯಾವುದೇ ಸ್ಪಷ್ಟತೆಯಿಲ್ಲದ ಅಥವಾ ನಿಖರವಲ್ಲದ ಹೇಳಿಕೆ ಸ್ವಯಂಪ್ರೇರಿತವಾಗಿ ‘ನಕಲಿ ಅಥವಾ ಸುಳ್ಳು ಅಥವಾ ದಾರಿ ತಪ್ಪಿಸುವುದು’ ಎಂದಾಗುವುದಿಲ್ಲ. ಈಗಿನ ಐಟಿ ನಿಯಮಗಳು ಸರ್ಕಾರಿ ಸೆನ್ಸಾರ್‌ಶಿಪ್‌ಗೆ ಅಸಾಂವಿಧಾನಿಕ ಅಧಿಕಾರವನ್ನು ಸೃಷ್ಟಿಸಿದೆ.

ಈ ಸುದ್ದಿ ಓದಿದ್ದೀರಾ?: ಈ ದಿನ ಸಂಪಾದಕೀಯ | ಆರೆಸ್ಸೆಸ್ ಆಸೆ ಮತ್ತು ಬಿಜೆಪಿಯ ಭ್ರಮೆ

ನಕಲಿ ಸುದ್ದಿಗಳಿಗೆ ವ್ಯಾಖ್ಯಾನವಿಲ್ಲ

ಐಟಿ ನಿಯಮಗಳು, 2023 ‘ನಕಲಿ ಅಥವಾ ಸುಳ್ಳು ಅಥವಾ ದಾರಿ ತಪ್ಪಿಸುವ’ ವಿಷಯಗಳು ಯಾವುದು ಎನ್ನುವ ಬಗ್ಗೆ ಸ್ಪಷ್ಟವಾದ ವ್ಯಾಖ್ಯಾನವನ್ನೂ ನೀಡಿಲ್ಲ. ಫ್ಯಾಕ್ಟ್‌ಚೆಕ್ ವಿಭಾಗಕ್ಕೆ ಯಾವುದೇ ಅರ್ಹತೆಗಳು ಅಥವಾ ಕುಂದುಕೊರತೆ ಆಲಿಕೆ ಪ್ರಕ್ರಿಯೆಗಳ ಬಗ್ಗೆಯೂ ತಿಳಿಸಲಾಗಿಲ್ಲ. ಬದಲಾಗಿ, ನಿಯಮಗಳಲ್ಲಿ ಗೇಮಿಂಗ್ ವೇದಿಕೆಗಳ ಸ್ವಯಂನಿಯಂತ್ರಣಾ ಸಂಸ್ಥೆಗಳ ವಿವರವಾದ ಅರ್ಹತೆಗಳನ್ನು ನೀಡಲಾಗಿದೆ. ಅವುಗಳಿಗೂ ಕಾನೂನು ಕೊರತೆಗಳು ಇವೆ ಎನ್ನುವುದು ಸುಳ್ಳಲ್ಲ. ಆದರೆ, ಗೇಮಿಂಗ್ ವೇದಿಕೆಗಳಲ್ಲೂ ಅರ್ಹತೆ ಮತ್ತು ನಿರ್ಧಾರಕ್ಕೆ ಮೊದಲು ಕುಂದು ಕೊರತೆ ಆಲಿಕೆ ವ್ಯವಸ್ಥೆಯಿದೆ. ಆದರೆ ಫ್ಯಾಕ್ಟ್‌ಚೆಕ್ ವಿಭಾಗ ಅಂತಹ ಸೌಲಭ್ಯ ಹೊಂದಿಲ್ಲ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...