ಹನ್ನೆರೆಡು ವರ್ಷದ ಹಿಂದೆ ಇಡೀ ದೇಶವನ್ನೇ ಆಘಾತಕ್ಕೆ ತಳ್ಳಿದ್ದ ಘಟನೆಯ ಸಂಬಧಿತ ಆರೋಪಿ ವೈದ್ಯನಿಗೆ 25,000 ದಂಡ ಹಾಗೂ 2 ವರ್ಷ ಸೆರೆವಾಸ ವಿಧಿಸಿದ ಕೋರ್ಟ್.
2014ರಲ್ಲಿ, ಛತ್ತೀಸ್ಗಢದ ಬಿಸ್ಲಾಪುರದಲ್ಲಿರುವ ನೇಮಿಚಂದ್ ಜೈನ್ ಆಸ್ಪತ್ರೆಯಲ್ಲಿ ಸರ್ಕಾರ ನಡೆಸಿದ್ದ ಸಂತಾನಹರಣ ಶಸ್ತ್ರ ಚಿಕಿತ್ಸಾ ಕಾರ್ಯಗಾರದಲ್ಲಿ 15 ಜನ ಜೀವ ಕಳೆದುಕಂಡಿದ್ದರು. ಆ ದುರ್ಘಟನೆ ನಡೆದು ಬರೋಬ್ಬರಿ 12 ವರ್ಷಗಳು ಕಳೆದಿವೆ. ಇದೀಗ, ಪ್ರಕರಣದ ಆರೋಪಿ ವೈದೈ ಆರ್ಕೆ ಗುಪ್ತಾ ಅವರಿಗೆ ಶಿಕ್ಷೆ ವಿಧಿಸಿ ಜಿಸ್ಲಾಪುರ ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶ ಶೈಲೇಶ್ ಕುಮಾರ್ ತಜ್ಞ ತೀರ್ಪು ನೀಡಿದ್ದಾರೆ.
ನ್ಯಾಯಾಲಯವು ಆರೋಪಿ ವೈದ್ಯನನ್ನು ಅಪರಾಧಿ ಎಂದು ಘೋಷಿಸಿದೆ. ಎರಡು ವರ್ಷಗಳ ಸೆರೆವಾಸ ಮತ್ತು 25,000 ದಂಡ ವಿಧಿಸಿದೆ. ಗುಪ್ತಾ ಜೈಲು ಪಾಲಾದರೆ, ಪ್ರಕರಣದ ಇತರ ಆರೋಪಿಗಳು ಖುಲಾಸೆಗೊಂಡು ಬಂಧನಮುಕ್ತರಾಗಿದ್ದಾರೆ.
ನ್ಯಾಯಾಲಯದ ವರದಿಯ ಪ್ರಕಾರ, ಈ ಘಟನೆಗೆ ವೈದನ ನಿರ್ಲ್ಯಕ್ಷವೇ ಕಾರಣ ಹಾಗೂ ಕಡಿಮೆ ಅವಧಿಯಲ್ಲಿ ಸರಣಿ ಶಸ್ತ್ರ ಚಿಕಿತ್ಸೆ ನಡೆಸಿದರಿಂದ ಇಂತಹ ದುರಂತ ಸಂಭವಿಸಿದೆ ಎಂದು ಹೇಳಿಕೆ ನೀಡಿದೆ. ಈ ಆದೇಶದ ಜೊತೆಗೆ ಸೆಕ್ಷನ್ 337 ರ ಅನ್ವಯ ಜೀವಕ್ಕೆ ಕುತ್ತು ತರುವ ಅಪರಾಧದಲ್ಲಿ ಭಾಗಿಯಾದ ಕಾರಣ 500 ರೂ ದಂಡ ಹಾಗೂ 6 ತಿಂಗಳ ಸೆರೆವಾಸವನ್ನು ವಿಧಿಸಿದೆ.
2014ರ ನವೆಂಬರ್ ರಂದು ಬಿಸ್ಲಾಪುರ್ ಜಿಲ್ಲೆಯ ಪೆಂಡ್ರ, ಸರ್ಕಿ, ಪೆಂಡಾರ ಪ್ರದೇಶದಲ್ಲಿ ಸರ್ಕಾರ ಆಯೋಜಿಸಿದ್ದ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಕ್ಯಾಂಪ್ನಲ್ಲಿ ಈ ದುರ್ಘಟನೆ ಸಂಭವಿಸಿತ್ತು.
ನಿಗದಿತ ಗುರಿ ಸಾಧಿಸುವ ಉದ್ದೇಶದಿಂದ ರಾಜ್ಯದಲ್ಲಿ ಸಾಲು ಸಾಲು ಸಂತಾನ ಹರಣ ಶಸ್ತ್ರ ಚಿಕಿತ್ಸೆಗಳನ್ನು ನಡೆಸಲಾಗಿತ್ತು. ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರಿಗೆ ಕೆಲವೇ ಗಂಟೆಗಳಲ್ಲಿಆರೋಗ್ಯದಲ್ಲಿ ಏರು ಪೇರು ಕಂಡು ಬಂದಿತ್ತು. ತೀವ್ರ ಅನಾರೋಗ್ಯಕ್ಕೆ ಒಳಗಾದ ಮಹಿಳೆಯರನ್ನು ಆಸ್ಪತ್ರೆಗಳಿಗೆ ಕರೆದೊಯ್ದು ತೀವ್ರ ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿತ್ತು. ಆದರೂ, 15 ಮಂದಿ ಮಹಿಳೆಯರು ಪ್ರಾಣ ಕಳೆದುಕೊಂಡಿದ್ದರು.
ರಾಜ್ಯಗಳಿಗೆ ಇಂತಿಷ್ಟು ಟಾರ್ಗೆಟ್ ನೀಡಿ ಸಂತಾನ ಹರಣ ಶಸ್ತ್ರ ಚಿಕಿತ್ಸೆಯನ್ನು ಸಾಮೂಹಿಕಗೊಳಿಸುವ ಸರ್ಕಾರದ ಕ್ರಮದ ಕುರಿತು ಭಾರಿ ವಿರೋಧಗಳು ಭುಗಿಲೆದ್ದು ತಣ್ಣಗಾದವು. ಈ ಘಟನೆ ಸರ್ಕಾರದ ಜನಸಂಖ್ಯಾ ನಿಯಂತ್ರಣ ಯೋಜನೆಯಲ್ಲಿನ ಮಿತಿಗಳನ್ನು ಬಯಲು ಮಾಡಿತು.
ಹನ್ನೆರೆಡು ವರ್ಷಗಳ ಬಳಿಕ ಪ್ರಕರಣ ಕೈಗೆತ್ತಿಕೊಂಡ ಕೋರ್ಟ್, ಸರ್ಕಾರದ ವಿಫಲತೆಯನ್ನು ಪ್ರಶ್ನಿಸದೆ ವೈದ್ಯನಿಗೆ 2 ವರ್ಷ ಸೆರೆ, 25000 ದಂಡ ವಿಧಿಸಿ ಕೈ ತೊಳೆದುಕೊಂಡಿದೆ.





