ಚೀತಾ ಪ್ರಾಜೆಕ್ಟ್‌ | ಕುನೋ ಅಭಯಾರಣ್ಯದಲ್ಲಿ ಮತ್ತೊಂದು ಚೀತಾ ಮರಿ ಸಾವು

Date:

  • ಕುನೋ ಅಭಯಾರಣ್ಯದಲ್ಲಿ ಎರಡು ತಿಂಗಳಲ್ಲಿ ನಾಲ್ಕು ಚೀತಾಗಳ ಸಾವು
  • ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರದ ಯೋಜನೆ ಪ್ರಾಜೆಕ್ಟ್ ಚೀತಾ

ಪ್ರಧಾನಿ ನರೇಂದ್ರ ಮೋದಿ ಬಹಳ ಅಬ್ಬರದಿಂದ ಆರಂಭಿಸಿದ ಯೋಜನೆ ಪ್ರಾಜೆಕ್ಟ್ ಚೀತಾ ಕೇವಲ ಪ್ರಚಾರವಾಗಿ ಉಳಿಯುವಂತೆ ಕಾಣಿಸುತ್ತದೆ. ಭಾರತದಲ್ಲಿ ಚೀತಾಗಳ ಸಂಖ್ಯೆ ಹೆಚ್ಚಿಸುವ ಯೋಜನೆ ಕುಂಟುತ್ತಾ ಸಾಗಿದೆ. ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 2023 ಮಾರ್ಚ್ 29ರಂದು ಹುಟ್ಟಿದ ನಾಲ್ಕು ಚೀತಾ ಮರಿಗಳಲ್ಲಿ ಒಂದು ಮೇ 23ರಂದು ಸಾವನ್ನಪ್ಪಿದೆ.

ಚೀತಾ ಮರಿ ಜ್ವಾಲಾ ಸೇರಿದಂತೆ ಈವರೆಗೆ ಕಳೆದ ಎರಡು ತಿಂಗಳಲ್ಲಿ ನಾಲ್ಕು ಚೀತಾಗಳು ಇಲ್ಲಿ ಸಾವನ್ನಪ್ಪಿವೆ. ಪ್ರಸ್ತುತ ಕುನೋ ಅಭಯಾರಣ್ಯದಲ್ಲಿ 17 ವಯಸ್ಕ ಮತ್ತು ಮೂರು ಮರಿ ಚೀತಾಗಳಷ್ಟೇ ಉಳಿದಿವೆ.

ಅಭಯಾರಣ್ಯದ ವಾರ್ಡನ್ ಜೆ ಎಸ್ ಚೌಹಾನ್ ಪ್ರಕಾರ, ಮೇ 23ರಂದು ಬೆಳಗ್ಗೆ 7 ಗಂಟೆಗೆ ಚೀತಾ ಮರಿ ಜ್ವಾಲಾ ಮೃತಪಟ್ಟಿದೆ. “ಮೂರು ಚೀತಾ ಮರಿಗಳು ಅತ್ತಿತ್ತ ಓಡಾಡುತ್ತಿದ್ದರೆ, ಜ್ವಾಲಾ ನೆಲದಲ್ಲಿ ಬಿದ್ದಿರುವುದು ಕಂಡು ಪರಿಶೀಲಿಸಿದಾಗ ಪ್ರಜ್ಞೆತಪ್ಪಿರುವುದು ತಿಳಿದಿದೆ“ ಎಂದು ಚೌಹಾನ್ ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ನೆಲದಲ್ಲಿ ಬಿದ್ದಿದ್ದ ಮರಿಯನ್ನು ಪರಿಶೀಲಿಸಿದ ಪಶುತಜ್ಞರಿಗೆ ತಕ್ಷಣಕ್ಕೆ ಸಾವಿಗೆ ಕಾರಣ ತಿಳಿದುಬಂದಿಲ್ಲ. “ಪ್ರಜ್ಞೆ ತಪ್ಪಿದ್ದ ಮರಿಗೆ ಚಿಕಿತ್ಸೆ ನೀಡುತ್ತಿದ್ದಾಗ ಸಾವನ್ನಪ್ಪಿದೆ. ಮರಿಯ ಆರೋಗ್ಯ ಕ್ಷೀಣಿಸಿತ್ತು. ನಾಲ್ಕು ಮರಿಗಳಲ್ಲಿ ಇದು ಚಿಕ್ಕದಾಗಿದ್ದು, ಕಡಿಮೆ ಚಟುವಟಿಕೆ ತೋರಿಸಿತ್ತು. ಇತರ ಮೂರು ಮರಿಗಳಂತಲ್ಲದೆ, ಜಡವಾಗಿ ಬಿದ್ದುಕೊಂಡಿರುತ್ತಿತ್ತು. ಇತರ ಮರಿಗಳಿಗೆ ಹೋಲಿಸಿದಲ್ಲಿ ಕಡಿಮೆ ಹಾಲು ಸೇವಿಸುತ್ತಿತ್ತು” ಎಂದು ಚೌಹಾನ್ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಈ ದಿನ ಸಂಪಾದಕೀಯ | ಕೇಜ್ರೀವಾಲ್ ಸರ್ಕಾರದ ವಿರುದ್ಧ ಮೋದಿ ಸೇಡಿನ ಕ್ರಮ

“ಮರಿಯ ಸಾವನ್ನು ಅಸ್ತಿತ್ವಕ್ಕಾಗಿ ನಡೆದ ಹೋರಾಟ ಎಂದು ಪರಿಗಣಿಸಬೇಕಾಗುತ್ತದೆ. ಸಹಜ ಪರಿಸರವಾಗಿರುವ ಆಫ್ರಿಕಾದಲ್ಲಿಯೇ ಚೀತಾ ಮರಿಗಳು ಧೀರ್ಘ ಕಾಲ ಬದುಕುವ ಪ್ರಮಾಣ ಕಡಿಮೆ. ಚೀತಾಗಳಲ್ಲಿ ಶೇ 10ರಷ್ಟು ಮರಿಗಳು ಮಾತ್ರ ಉಳಿದು ಬೆಳೆಯುತ್ತವೆ. ಇತರ ಬೆಕ್ಕು ಪ್ರಬೇಧದ ಪ್ರಾಣಿಗಳಿಗೆ ಹೋಲಿಸಿದಲ್ಲಿ ಚೀತಾಗಳಲ್ಲಿ ಅತ್ಯಧಿಕ ಜನನ ದರ ಇದೆ, ಉಳಿವಿನ ದರ ಕಡಿಮೆ” ಎಂದು ಅಭಯಾರಣ್ಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಮಾರ್ಚ್‌ನಲ್ಲಿ ನಮೀಬಿಯದಿಂದ ತಂದ ಚೀತಾ ಸಾಷಾ ಮೂತ್ರಪಿಂಡ ವೈಫಲ್ಯದಿಂದ ಮೃತಪಟ್ಟಿತ್ತು. ಏಪ್ರಿಲ್ 24ರಂದು ಮತ್ತೊಂದು ಚೀತಾ ಉದಯ್ ಹೃದಯಾಘಾತದಿಂದ ಸಾವನ್ನಪ್ಪಿತ್ತು. ಮೇ 9ರಂದು ಚೀತಾ ದಕ್ಷ ಗಂಡು ಹುಲಿಗಳ ಜೊತೆಗಿರುವಾಗ ಸಾವನ್ನಪ್ಪಿತ್ತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...