ಭತ್ತದ ತ್ಯಾಜ್ಯದಿಂದ ಪರಿಸರ ಸ್ನೇಹಿ ತಟ್ಟೆ ಸೇರಿದಂತೆ ‘ಟೇಬಲ್‌ವೇರ್‌’ಗಳನ್ನು ತಯಾರಿಸುತ್ತಿದೆ ಮಹಿಳೆಯರ ಗುಂಪು

Date:

ಪ್ಲಾಸ್ಟಿಕ್‌ ಬಳಕೆಯನ್ನು ನಿಲ್ಲಿಸುವಂತೆ ಸರ್ಕಾರಗಳು, ಸಂಘ-ಸಂಸ್ಥೆಗಳು ನಿರಂತರವಾಗಿ ಹೇಳುತ್ತಲೇ ಇವೆ. ಹಲವು ರೀತಿಯ ಅಭಿಯಾನಗಳು, ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ಆದರೆ, ಪ್ಲಾಸ್ಟಿಕ್‌ಗೆ ಪರ್ಯಾಯ ವಸ್ತುಗಳ ಬಳಕೆ ಮತ್ತು ಪ್ರಚಾರ ತೀರಾ ಕಡಿಮೆಯಿದೆ. ಇದೇ ಸಂದರ್ಭದಲ್ಲಿ ಮಹಿಳಾ ಗುಂಪೊಂದು ಪ್ಲಾಸ್ಟಿಕ್‌ ತಟ್ಟೆ, ತೋಟಗಳಿಗೆ ಪರ್ಯಾಯವನ್ನು ಕಂಡುಹಿಡಿದಿವೆ. ಭತ್ತದ ತ್ಯಾಜ್ಯಗಳನ್ನು ಬಳಸಿ ಊಟಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ತರಾಯಿಸುತ್ತಿವೆ.

ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ನರಸರಾವ್‌ಪೇಟೆ ಬಳಿಯ ಕಾಕಾನಿ ಗ್ರಾಮದಲ್ಲಿ ರಾಯುಡು ರಾಜಲಕ್ಷ್ಮಿ ಮತ್ತು ವೆಂಕಟ ರಮಣಿ ನೇತೃತ್ವದಲ್ಲಿ ಮಹಿಳೆಯರು ‘ಅಗ್ರಿವೇರ್’ ಎಂಬ ಪುಟ್ಟ ‘ಸ್ಟಾರ್ಟ್‌ಅಪ್‌’ ಆರಂಭಿಸಿದ್ದಾರೆ. ಅವರು ಭತ್ತದ ಹೊಟ್ಟು, ಅಕ್ಕಿ ಹೊಟ್ಟು ಹಾಗೂ ಭತ್ತದ ಒಣಹುಲ್ಲಿನಂತಹ ತ್ಯಾಜ್ಯಗಳನ್ನು ಬಳಸಿಕೊಂಡು ಪರಿಸರ ಸ್ನೇಹಿ-ಜೈವಿಕ ತಟ್ಟೆಗಳು, ಲೋಟಗಳು, ಬಟ್ಟಲುಗಳು, ಚಮಚಗಳು ಹಾಗೂ ನಾನಾ ಬಗೆಯ ಬಳಸಿ-ಬಿಸಾಡುವ ವಸ್ತುಗಳನ್ನು ತಯಾರಿಸುತ್ತಿದ್ದಾರೆ. ತಮ್ಮ ಉದ್ಯಮವನ್ನು ವಿಸ್ತರಿಸಲು ಬ್ಯಾಂಕ್‌ಗಳಿಂದ ಸಾಲ ಪಡೆದು ಸುಮಾರು 3 ಕೋಟಿ ರೂ. ಹೂಡಿಕೆ ಮಾಡಿದ್ದಾರೆ.ಲಕ್ಷ್ಮಿ ಮತ್ತು ರಮಣಿ ಅವರ ಕೆಲಸಕ್ಕೆ ಅವರ ಪತಿಯರಾದ ರಾಯುಡು ಭಾನು ಕಿರಣ್ ಮತ್ತು ಮುರಳಿ ಕೃಷ್ಣ ನೆರವು ನೀಡುತ್ತಿದ್ದಾರೆ.

“ನಾವು ಯಾವುದೇ ಸಮಾರಂಭ, ಸಣ್ಣ ಅಥವಾ ಬೃಹತ್ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ತಟ್ಟೆಗಳು ಮತ್ತು ಕಪ್‌ಗಳನ್ನು ಹೆಚ್ಚಾಗಿ ಬಳಸುವುದನ್ನು ನೋಡಿದ್ದೇವೆ. ಅವುಗಳನ್ನು ಬಳಕೆಯ ನಂತರ, ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಗುಂಡಿಗಳಲ್ಲಿ ಎಸೆಯಲಾಗುತ್ತದೆ. ಇದು ಪರಿಸರಕ್ಕೆ ಗಂಭೀರ ಅಪಾಯವನ್ನುಂಟುಮಾಡುತ್ತದೆ. ಆ ಅಪಾಯಗಳ ಕುರಿತಾದ ಚಿಂತನೆಯು ನಮ್ಮನ್ನು ಪ್ಲಾಸ್ಟಿಕ್ ಮುಕ್ತ, ಮಾಲಿನ್ಯ ಮುಕ್ತ ಪರ್ಯಾಯಗಳನ್ನು ಹುಡುಕಲು ಪ್ರೇರೇಪಿಸಿತು” ಎಂದು ರಾಜಲಕ್ಷ್ಮಿ ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
image 27 4

“2024ರಲ್ಲಿ ಉದ್ಯಮವನ್ನು ಆರಂಭಿಸಿದಾಗ,ಬೆಂಗಳೂರಿನಿಂದ ಮೂರು ಉನ್ನತ ದರ್ಜೆಯ ಯಂತ್ರಗಳನ್ನು 60 ಲಕ್ಷ ರೂ.ಗಳಿಗೆ ಖರೀದಿ ಮಾಡಿದೆವು. ಪ್ರತಿ ಯಂತ್ರದಿಂದ ದಿನಕ್ಕೆ ಸುಮಾರು 1,500 ವಸ್ತುಗಳನ್ನು ತಯಾರಿಸಬಹುದು. ಇದೀಗ, ಯಂತ್ರಗಳ ಸಂಖ್ಯೆಯನ್ನು ಹೆಚ್ಚಿಸಿದ್ದೇವೆ. ಉದ್ಯಮವು ಪೂರ್ಣ ಪ್ರಮಾಣದಲ್ಲಿ ಕೆಲಸ ನಡೆಸುತ್ತಿದೆ.ಉತ್ಪಾದನಾ ಪ್ರಕ್ರಿಯೆಯಲ್ಲಿ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (CSIR) ಬೆಂಬಲಿತ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಕಚ್ಚಾ ವಸ್ತುಗಳ ಮಿಶ್ರಣವನ್ನು ಸುಮಾರು 400° ಸೆಲ್ಸಿಯಸ್‌ನಲ್ಲಿ ಬಿಸಿ ಮಾಡಿ ತಟ್ಟೆಗಳು, ಕಪ್‌ಗಳು ಮತ್ತು ಬಟ್ಟಲುಗಳನ್ನು ತಯಾರಿಸಲಾಗುತ್ತದೆ” ಎಂದು ಅವರು ಹೇಳಿದ್ದಾರೆ.

“ನಾವು ತರಾಯಿಸುವ ವಸ್ತುಗಳು ಪರಿಸರ ಮತ್ತು ಆರೋಗ್ಯ ಸ್ನೇಹಿಯಾಗಿವೆ. ಉತ್ಪನ್ನಗಳು ವಿಟಮಿನ್ ಬಿ ಮತ್ತು ಕೆ ನಂತಹ ಸೂಕ್ಷ್ಮ ಪೋಷಕಾಂಶಗಳನ್ನು ಉಳಿಸಿಕೊಂಡಿರುತ್ತವೆ. ಇವುಗಳಲ್ಲಿ ಆಹಾರ ಸೇವಿಸುವುದು ಆರೋಗ್ಯಕ್ಕೆ ಪ್ರಯೋಜನ ನೀಡುತ್ತವೆ. ಸಂಪೂರ್ಣವಾಗಿ ಭತ್ತದ ತ್ಯಾಜ್ಯದಿಂದ ತಯಾರಿಸಲ್ಪಟ್ಟ ವಸ್ತುಗಳು 90 ರಿಂದ 120 ದಿನಗಳಲ್ಲಿ ನೈಸರ್ಗಿಕವಾಗಿ ಕೊಳೆಯುತ್ತವೆ. ಇವು ವಿಷಕಾರಿಯಲ್ಲದ ಕಾರಣ, ಬಳಸಿದ ತಟ್ಟೆಗಳನ್ನು ನಿಯಮಿತ ಮೇವಿನೊಂದಿಗೆ ಹಸುಗಳು ಮತ್ತು ಎಮ್ಮೆಗಳಿಗೂ ತಿನ್ನಿಸಬಹುದು” ಎಂದು ಅವರು ಹೇಳಿದ್ದಾರೆ.

ಹೆಚ್ಚಿನ ವಿದ್ಯುತ್ ಬಳಕೆ ಮತ್ತು ನಿರಂತರ ಕೌಶಲ್ಯಪೂರ್ಣ ಕಾರ್ಮಿಕರ ಅಗತ್ಯತೆಯಂತಹ ಸವಾಲುಗಳ ಹೊರತಾಗಿಯೂ, ಕಚ್ಚಾ ವಸ್ತುಗಳನ್ನು ಪಡೆಯುವುದು ಸುಲಭವಾಗಿದೆ. ಭತ್ತದ ಹೊಟ್ಟನ್ನು ಹತ್ತಿರದ ಅಕ್ಕಿ ಗಿರಣಿಗಳಿಂದ ಸಂಗ್ರಹಿಸಲಾಗುತ್ತದೆ. ಭತ್ತದ ಹುಲ್ಲನ್ನು ಸ್ಥಳೀಯ ರೈತರಿಂದ ನೇರವಾಗಿ ಪಡೆಯಲಾಗುತ್ತದೆ.

ಕೃಪೆ: ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...