ಜಿಎಸ್‌ಟಿ 2.0 | ವಸ್ತುಗಳ ಬೆಲೆಯೇ 50% ಕಡಿತ; ತಪ್ಪು ಲೆಕ್ಕ ಹೇಳಿ ಪೇಚಿಗೆ ಸಿಲುಕಿದ ಬಿಜೆಪಿ ಸಂಸದ

Date:

‘ಮಗುವನ್ನು ಚಿವುಟಿ ತೊಟ್ಟಿಲನ್ನೂ ತೂಗುವುದು’ ಈ ಬಿಜೆಪಿಗರಿಗೆ ಹೊಸದೇನಲ್ಲ. ಯಾಕೆಂದ್ರೆ, ತಾನೇ ಮಾಡಿದ ತಪ್ಪುಗಳಿಗೆ, ತಾನೇ ಪರಿಹಾರ ರೂಪದಲ್ಲಿ ಒಂದಷ್ಟು ಬದಲಾವಣೆ ಮಾಡಿ, ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುವುದು ಮೋದಿ ಸರ್ಕಾರದ ಪರಿಪಾಠ. ಇದೀಗ, ಅದು ಜಿಎಸ್‌ಟಿಗೆ ವಿಸ್ತರಣೆಯಾಗಿದೆ. ತಾವೇ ಜಾರಿಗೆ ತಂದ ಜಿಎಸ್‌ಟಿ ವ್ಯವಸ್ಥೆಯಲ್ಲಿ ಇದೀಗ ಕೆಲವು ಬದಲಾವಣೆಗಳನ್ನು ಮಾಡಿ, ತಾನೇ ಸಂಭ್ರಮಿಸುತ್ತಿದೆ. ಮೋದಿ ಭಕ್ತರು ಉಡುಗೊರೆ ಎಂದೆಲ್ಲ ಬೊಬ್ಬೆಹೊಡೆಯುತ್ತಿದ್ದಾರೆ.

2017ರಲ್ಲಿ ಇದೇ ಮೋದಿ ಸರ್ಕಾರ ಜಿಎಸ್‌ಟಿ ವ್ಯವಸ್ಥೆಯನ್ನು ಜಾರಿಗೆ ತಂದಿತು. ನಾಲ್ಕು ಹಂತಗಳಲ್ಲಿ ತೆರಿಗೆಯನ್ನು ನಿಗದಿ ಮಾಡಿತು. ಜಿಎಸ್‌ಟಿ ಮೂಲಕ ಆರ್ಥಿಕತೆಯನ್ನು ಸರಳಗೊಳಿಸುತ್ತೇವೆ. ದೇಶಾದ್ಯಂತ ಒಂದೇ ತೆರಿಗೆ ಇರಲಿದೆ ಎಂದು ಹೇಳಿಕೊಂಡಿದೆ. ಆದರೆ, ಈಗಲೂ ಜಿಎಸ್‌ಟಿ, ಸೆಸ್‌ ರೀತಿಯ ತೆರಿಗೆಗಳು ಇವೆ ಎಂಬುದು ವಾಸ್ತವ. ಅದೇನೇ ಇರಲಿ, ಜನರಿಗೆ ಅನುಕೂಲ ಮಾಡಿಕೊಡುತ್ತದೆ ಎಂದಿದ್ದ ಜಿಎಸ್‌ಟಿ, ಜನರಿಗೆ ಮತ್ತಷ್ಟು ಆರ್ಥಿಕ ಹೊರೆಯನ್ನು ಹೇರಿತೇ ಹೊರತು, ಹೊರೆಯನ್ನು ತಗ್ಗಿಸಲಿಲ್ಲ. ಜಿಎಸ್‌ಟಿ ಜಾರಿಗೆ ಬಂದ ಬಳಿಕ, ಹಲವು ವಸ್ತುಗಳ ಬೆಲೆಯನ್ನು ಮತ್ತಷ್ಟು ಹೆಚ್ಚಾಗಿದ್ದು ವಾಸ್ತವ.

ಕಳೆದ 8 ವರ್ಷಗಳಲ್ಲಿ ಜನರ ಮೇಲೆ ಭಾರೀ ತೆರಿಗೆ ಹೇರಿದ್ದ ಮೋದಿ ಸರ್ಕಾರ, ಇದೀಗ ಅಗತ್ಯ ಮತ್ತು ದಿನ ಬಳಕೆಯ ವಸ್ತುಗಳ ಮೇಲಿನ ಜಿಎಸ್‌ಟಿ ಪ್ರಮಾಣವನ್ನು ಕಡಿಮೆ ಮಾಡಿದೆ. ತನ್ನ ಕೃತ್ಯವನ್ನು ತಾನೇ ಒಂದಷ್ಟು ಸರಿದೂಗಿಸಿಕೊಂಡು ಜನರಿಗೆ ಭಾರೀ ಕೊಡುಗೆ ಕೊಟ್ಟೆವೆಂದು ಸಂಭ್ರಮಿಸುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬಿಜೆಪಿಗರು ತಮ್ಮ ಸರ್ಕಾರವನ್ನು ಹೊಗಳುವ ಭರದಲ್ಲಿ ಏನು ಮಾತನಾಡುತ್ತಿದ್ದೇವೆ ಎಂಬುದರ ಅರಿವೂ ಇಲ್ಲದೆ ಮಾತನಾಡುತ್ತಿದ್ದಾರೆ. ಅವರಲ್ಇ, ಉತ್ತರ ಪ್ರದೇಶದ ಬಿಜೆಪಿ ಸಂಸದ ರವಿಕಿಶನ್ ಮೊದಲಿಗರು. ಅವರು ಯಾವುದೇ ಅಂಜಿಕೆಯಿಲ್ಲದೇ ಮಾಧ್ಯಮಗಳ ಮುಂದೆ ಸುಳ್ಳು ಹೇಳಿಕೆ ನೀಡಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ರವಿಕಿಶನ್, “ಜಿಎಸ್‌ಟಿ ಪರಿಷ್ಕರಣೆಯಿಂದ ಬಟ್ಟೆ, ಟೆಲಿವಿಷನ್ ಸೇರಿದಂತೆ ಹಲವು ಉತ್ಪನ್ನಗಳು 50%ರಷ್ಟು ರಿಯಾಯಿತಿಯಲ್ಲಿ ಲಭ್ಯವಿದೆ ದೊರೆಯಲಿವೆ. ನಿಮಗೆ ಈ ಹಿಂದೆ 100 ರೂಪಾಯಿಗೆ ಸಿಗುತ್ತಿದ್ದ ಉತ್ಪನ್ನ ಈಗ ಕೇವಲ 45 ರೂಪಾಯಿಗೆ ಸಿಗುತ್ತದೆ. 1,000 ರೂಪಾಯಿಗೆ ಸಿಗುತ್ತಿದ್ದ ಉತ್ಪನ್ನ ಕೇವಲ 450 ರೂಪಾಯಿಗೆ ಹಾಗೇಯೇ, 5,000 ರೂಪಾಯಿಗೆ ಸಿಗುತ್ತಿದ್ದ ಉತ್ಪನ್ನ ಕೇವಲ 2,450 ರೂಪಾಯಿಗೆ ಸಿಗುತ್ತದೆ” ಎಂದು ಹೇಳಿಕೆ ನೀಡಿದ್ದಾರೆ.

ಈ ಲೇಖನ ಓದಿದ್ದೀರಾ?: ಜೋಳಿಗೆ | ಬೀದರ್ ರಾಸಾಯನಿಕ ಕೈಗಾರಿಕೆಗಳ ವಿರುದ್ಧದ ಹೋರಾಟ- ಭಾಗ 6

ಅವರ ಈ ಹೇಳಿಕೆ ಅಕ್ಷರಶಃ ಸುಳ್ಳು. ಯಾಕೆಂದ್ರೆ, ಮೋದಿ ಅವರು ಜಿಎಸ್‌ಟಿ ದರವನ್ನು ಕಡಿತಗೊಳಿಸಿದ್ದಾರೆಯೇ ಹೊರತು, ವಸ್ತುಗಳ ಬೆಲೆಯನ್ನಲ್ಲ. ತೆರಿಗೆ ಕಡಿಮೆ ಆಗುವುದರಿಂದ, ವಸ್ತುಗಳ ಬೆಲೆ 50%ಗಿಂತ ಕಮ್ಮಿ ಆಗಿಬಿಡುತ್ತದೆ ಎಂಬುದು ಸಂಪೂರ್ಣ ಸುಳ್ಳು. ಜಿಎಸ್‌ಟಿ ಕಡಿತ ಆಗುವುದರಿಂದ 50% ಬೆಲೆ ಕಮ್ಮಿ ಆಗಲ್ಲ. ಜಿಎಸ್‌ಟಿ ದರ ಇಳಿಕೆಯಿಂದ 5,000 ರೂಪಾಯಿ ಮೌಲ್ಯದ ವಸ್ತು 4,500 ರೂಪಾಯಿಗೆ ಸಿಗಬಹುದು. ಆದರೆ, 2,500 ರೂ.ಗೆ ಸಿಗಲ್ಲ. ಯಾಕೆಂದರೆ, 5,000 ರೂ. ಮೌಲ್ಯದ ಒಂದು ವಸ್ತುಗೆ 18% ಜಿಎಸ್‌ಟಿ ಇದ್ದರೆ, ಆ ವಸ್ತುವಿನ ಬೆಲೆ 5,900 ರೂ. ಆಗುತ್ತದೆ. ಆ ಜಿಎಸ್‌ಟಿ ದರವನ್ನು 5%ಗೆ ಇಳಿಸಿದರೆ, ಆ ವಸ್ತುವಿನ ಎಲೆ 5,250 ರೂ. ಆಗುತ್ತದೆಯೇ ಹೊರತು, 2,500 ರೂ. ಆಗಲ್ಲ. ಈ ಸಣ್ಣ ಲೆಕ್ಕಾಚಾರವೂ ಗೊತ್ತಿಲ್ಲದೆ ಆತ ವಸ್ತುವಿನ ಬೆಲೆಯೇ 50% ಇಳಿದುಬಿಡುತ್ತದೆ ಎಂಬ ಭ್ರಮೆಯಲ್ಲಿದ್ದಾರೆ.

ಬಿಜೆಪಿ ಸಂಸದ ರವಿಕಿಶನ್ ಅವರ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಜಿಎಸ್‌ಟಿ ದರ ಸುಧಾರಣೆಗಳ ಕುರಿತು ಬಿಜೆಪಿಗರ ಹೇಳಿಕೆಗಳ ವಿರುದ್ಧ ಹರಿಹಾಯ್ದಿದ್ದಾರೆ. “ಬಿಜೆಪಿ ನಾಯಕರು ಸುಳ್ಳು ಹೇಳುವುದರಲ್ಲಿ ವಿಶ್ವ ದಾಖಲೆಯನ್ನು ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.

ಬಿಜೆಪಿ ನಾಯಕರು ಜಿಎಸ್‌ಟಿ ವಿಚಾರವಾಗಿ ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ನಾಚಿಕೆಗೇಡು ಎಂದು ಜರಿದಿವೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...