ಗುಜರಾತ್ನ ಪ್ರಸಿದ್ಧ ಯಾತ್ರಾ ಸ್ಥಳವಾದ ಡಾಕೋರ್ನ ರಾಂಚೋದ್ರೈಜಿ ದೇವಾಲಯದಲ್ಲಿ ಅನ್ನಕೂಟ ಉತ್ಸವ ಆಚರಿಸಲಾಗಿದೆ. ರಾಶಿ ಹಾಕಲಾಗಿದ್ದ ಪ್ರಸಾದವನ್ನು ತೆಗೆದುಕೊಳ್ಳಲು ಜನರು ಮುಗಿಬಿದ್ದಿದ್ದು, ನೂಕುನುಗ್ಗಲು ಉಂಟಾಗಿದೆ.
ದೀಪಾವಳಿಯ ಮರುದಿನ ರಾಂಚೋದ್ರೈಜಿ ದೇವಾಲಯದಲ್ಲಿ ಗೋವರ್ಧನ ಮೂರ್ತಿಗೆ ‘ಅನ್ನಕೂಟ’ ಹೆಸರಿನಲ್ಲಿ ಸುಮಾರು 3,000 ಕೆ.ಜಿಯಷ್ಟು ನಾನಾ ತಿನಿಸುಗಳನ್ನು ರಾಶಿ ಹಾಕಿ, ‘ಆಹಾರ ಪರ್ತವ’ ನಿರ್ಮಿಸಿ ಅದನ್ನು ದೇವರಿಗೆ ನೈವೇದ್ಯ ಸಲ್ಲಿಸಲಾಗುತ್ತದೆ. ಬಳಿಕ, ರಾಶಿ ಹಾಕಿದ್ದ ಆಹಾರವನ್ನು ಭಕ್ತರಿಗೆ ಕೊಂಡೊಯ್ಯಲು ಬಿಡಲಾಗುತ್ತದೆ.
ಮಂಗಳವಾರವೂ ಇದೇ ರೀತಿಯ ಆಚರಣೆ ನಡೆದಿದೆ. ಈ ವೇಳೆ, ಭಕ್ತರು ಮತ್ತು ಸುತ್ತಮುತ್ತಲಿನ ಸುಮಾರು 80 ಹಳ್ಳಿಗಳ ಜನರು ಆ ಪ್ರಸಾದವನ್ನು ತೆಗೆದುಕೊಳ್ಳಲು ಜಿದ್ದಾಜಿದ್ದಿನಲ್ಲಿ ಮುಗಿಬಿದಿದ್ದಾರೆ. ಒಬ್ಬರ ಮೇಲೆಒಬ್ಬರು ಬಿದ್ದು, ಪ್ರಸಾದವನ್ನು ತಮ್ಮ ಚೀಲಗಳಿಗೆ ತುಂಬಿಕೊಳ್ಳಲು ಯತ್ನಿಸಿದ್ದಾರೆ. ಆ ಆಹಾರವನ್ನು ತುಳಿದು, ಅದೇ ಆಹಾರವನ್ನು ತುಂಬಿಕೊಂಡು ಹೋಗಿದ್ದಾರೆ.
ಆ ಪ್ರಸಾದವನ್ನು ಸೇವಿಸುವುದರಿಂದ ತಾವು ವರ್ಷವಿಡೀ ಆರೋಗ್ಯವಾಗಿ ಇರುತ್ತೇವೆ ಎಂಬುದು ಅಲ್ಲಿನ ಸ್ಥಳೀಯರ ಮೂಢನಂಬಿಕೆ.




