ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡ್ ಆಗುತ್ತಿದ್ದಂತೆ ಹೆಲಿಪ್ಯಾಡ್ ಕುಸಿದ ಘಟನೆ ಕೇರಳದ ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನಡೆದಿದೆ. ಮುರ್ಮು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೇರಳದ ಪ್ರಮದಂ ಕ್ರೀಡಾಂಗಣದಲ್ಲಿ ಹೆಲಿಪ್ಯಾಡ್ನ ಒಂದು ಭಾಗವು ಬುಧವಾರ ಮುರ್ಮು ಅವರ ಹೆಲಿಕಾಪ್ಟರ್ ಲ್ಯಾಂಡ್ಗಾಗಿ ಕೊನೆಯ ಕ್ಷಣದಲ್ಲಿ ಕಾಯ್ದಿರಿಸಲಾಗಿತ್ತು. ಹೆಲಿಕಾಪ್ಟರ್ ಲ್ಯಾಂಡ್ ಆಗುತ್ತಿದ್ದಂತೆ ಹೆಲಿಕಾಪ್ಟರ್ನ ಒಂದು ಚಕ್ರ ಡಾಂಬರಿನಲ್ಲಿ ಸಿಲುಕಿಕೊಂಡಿದೆ.
ಇದನ್ನು ಓದಿದ್ದೀರಾ? ಭಾರೀ ಮಳೆ | ಪುಣೆಯಲ್ಲಿ ನಾಲ್ವರು ಪ್ರಯಾಣಿಕರಿದ್ದ ಹೆಲಿಕಾಪ್ಟರ್ ಪತನ
ಅದಾದ ಬಳಿಕ ರಾಜೀವ್ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಹಲವು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಒಳಗೊಂಡಂತೆ ಭಾರತೀಯ ವಾಯುಪಡೆ ಸಿಬ್ಬಂದಿ ಹೆಲಿಕಾಪ್ಟರ್ನ ಚಕ್ರಗಳನ್ನು ತಳ್ಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ದ್ರೌಪದಿ ಮುರ್ಮು ಅವರು ಸುರಕ್ಷಿತವಾಗಿದ್ದು ಶಬರಿಮಲೆಯ ತಪ್ಪಲಿನಲ್ಲಿರುವ ಪಂಬಾಗೆ ತೆರಳಿದ್ದಾರೆ.
Narrow escape for President #DroupadiMurmu ! 🚁
— Hyderabad DNA (@HyderabadDna) October 22, 2025
Her chopper got stuck in wet concrete during landing in Kerala after a last-minute change due to bad weather.
Crew rescued it swiftly — she then travelled by road to visit Lord Ayyappa. 🙏 pic.twitter.com/0spw73A5X5
ಈ ಹಿಂದೆ ಪಂಬಾ ಬಳಿಯ ನೀಲಕ್ಕಲ್ನಲ್ಲಿ ಮುರ್ಮು ಅವರಿದ್ದ ಹೆಲಿಕಾಪ್ಟರ್ ಲ್ಯಾಂಡ್ ಮಾಡಲು ನಿರ್ಧರಿಸಲಾಗಿತ್ತು. ಆದರೆ ಹವಾಮಾನ ಸಮಸ್ಯೆಯಿಂದಾಗಿ ಪ್ರಮದಂನಲ್ಲಿ ಲ್ಯಾಂಡ್ ಮಾಡಬೇಕಾಯಿತು. ಕೊನೆಯ ಕ್ಷಣದಲ್ಲಿ ಲ್ಯಾಂಡಿಂಗ್ ಸ್ಥಳ ಬದಲಾವಣೆಯಾಗಿದ್ದರಿಂದ ಸಮಸ್ಯೆಯಾಗಿದೆ. ಪ್ರಮದಂನ ಕಾಂಕ್ರಿಟ್ ಹೆಲಿಕಾಪ್ಟರ್ನ ಭಾರವನ್ನು ತಡೆಯುವಷ್ಟು ಗಟ್ಟಿಯಾಗಿರಲಿಲ್ಲ ಎಂದು ಹೇಳಲಾಗಿದೆ.
ರಾಷ್ಟ್ರಪತಿ ಮುರ್ಮು ಅವರು ಅಕ್ಟೋಬರ್ 21ರಂದು ಕೇರಳಕ್ಕೆ ಭೇಟಿ ನೀಡಿದ್ದು, ಅ.24ರವರೆಗೆ ಕೇರಳದಲ್ಲಿ ಇರಲಿದ್ದಾರೆ. ಮಂಗಳವಾರ ತಿರುವನಂತಪುರಂಗೆ ತೆರಳಿದ್ದಾರೆ.





