ಕಳೆದ 10 ವರ್ಷಗಳಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣಗಳು

Date:

ಕಳೆದ 10 ವರ್ಷಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ನಡೆದ ಪ್ರಮುಖ ಬಾಂಬ್ ಸ್ಫೋಟ ಪ್ರಕರಣಗಳು

  1. ಗುರುದಾಸ್ ಪುರ (ಜುಲೈ 27, 2015 – ಪಂಜಾಬ್):
    ಪಂಜಾಬ್‌ನ ಗುರುದಾಸ್ ಪುರದ ದಿನಾನಗರದಲ್ಲಿ ಸೇನೆಯ ವೇಷ ಧರಿಸಿದ ಮೂವರು ಉಗ್ರರು ಬಸ್‌ ಮೇಲೆ ಗುಂಡಿನ ದಾಳಿ ನಡೆಸಿ, ಪೊಲೀಸ್ ಠಾಣೆಯನ್ನು ಆಕ್ರಮಿಸಿದರು. 12 ಗಂಟೆಗಳ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ನಾಗರಿಕರು ಸೇರಿ 10 ಮಂದಿ ಸಾವು.
  2. ಪಠಾಣ್‌ಕೋಟ್ ವಾಯುನೆಲೆ (ಜನವರಿ 2,2016 – ಪಂಜಾಬ್):
    ಪಂಜಾಬ್‌ನ ಪಠಾಣ್‌ಕೋಟ್‌ ವಾಯುನಲೆಗೆ ನುಗ್ಗಿದ 6 ಉಗ್ರರು ಬಾಂಬ್ ಮತ್ತು ಗುಂಡಿನ ದಾಳಿ ನಡೆಸಿದ ಪರಿಣಾಮ 7 ಸೈನಿಕರು, 6 ಉಗ್ರರ ಸಾವು.
  3. ಉರಿ ಸೇನಾ ನೆಲೆ (ಸೆಪ್ಟೆಂಬರ್ 18, 2016 – ಜಮ್ಮು ಮತ್ತು ಕಾಶ್ಮೀರ):
    ಜಮ್ಮು-ಕಾಶ್ಮೀರದ ಉರಿ ಪ್ರದೇಶದಲ್ಲಿರುವ ಸೇನಾ ಶಿಬಿರದ ಮೇಲೆ ನಾಲ್ವರು ಉಗ್ರರ ದಾಳಿ. ಸೈನಿಕರ ಟೆಂಟ್‌ಗಳಿಗೆ ಬೆಂಕಿ ಹಚ್ಚಿ ಭಾರೀ ಹಾನಿ ಉಂಟುಮಾಡಲಾಯಿತು. ಈ ದಾಳಿಯಲ್ಲಿ 19 ಸೈನಿಕರು ಹಾಗೂ ನಾಲ್ವರು ಉಗ್ರರ ಸಾವು.
  4. ಅಮರನಾಥ್ ಯಾತ್ರೆ (ಜುಲೈ 10, 2017 – ಜಮ್ಮು ಮತ್ತು ಕಾಶ್ಮೀರ):
    ಅನಂತನಾಗ್ ಜಿಲ್ಲೆಯಲ್ಲಿ ಅಮರನಾಥ್ ಯಾತ್ರೆಯಿಂದ ಮರಳುತ್ತಿದ್ದ ಬಸ್‌ ಮೇಲೆ ಉಗ್ರರು ದಾಳಿ ನಡೆಸಿದರು. ಈ ಘಟನೆಯಲ್ಲಿ 8 ಯಾತ್ರಿಕರು ಮೃತಪಟ್ಟು, ಅನೇಕರು ಗಾಯಗೊಂಡರು
  5. ಸುಂಜ್ವಾನ್‌ ಸೇನಾ ಶಿಬಿರ (ಫೆಬ್ರವರಿ 10, 2018 – ಜಮ್ಮು):
    ಜಮ್ಮುವಿನ ಸುಂಜ್ವಾನ್‌ ಸೇನಾ ಶಿಬಿರದ ವಸತಿ ಪ್ರದೇಶದಲ್ಲಿ ಉಗ್ರರು ಬೆಳಗಿನ ಜಾವ ದಾಳಿ ನಡೆಸಿದ ಪರಿಣಾಮ 6 ಸೈನಿಕರು, ಓರ್ವ ನಾಗರಿಕ ಸಾವನ್ನಪ್ಪಿದರು. 12 ಕ್ಕೂ ಹೆಚ್ಚು ಮಂದಿ ಗಾಯಗೊಂಡರು.
  6. ಪುಲ್ವಾಮಾ (ಫೆಬ್ರವರಿ 14, 2019 – ಜಮ್ಮು & ಕಾಶ್ಮೀರ):
    ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸಿಆರ್‌ಪಿಎಫ್ ಬೆಂಗಾವಲು ವಾಹನದ ಮೇಲೆ ಆತ್ಮಾಹುತಿ ದಾಳಿ ನಡೆಯಿತು. ಸ್ಫೋಟಕಗಳಿಂದ ತುಂಬಿದ ಕಾರು ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾದರು.
  7. ಸುಕ್ಮಾ (ಮಾರ್ಚ್ 21, 2020 – ಛತ್ತೀಸ್‌ಗಢ):
    ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ಭದ್ರತಾ ಪಡೆಗಳ ಮೇಲೆ ನಡೆಸಿದ ದಾಳಿಯಲ್ಲಿ 17 ಸೈನಿಕರ ಸಾವು.
  8. ಬಿಜಾಪುರ (ಏಪ್ರಿಲ್ 3, 2021 – ಛತ್ತೀಸ್‌ಗಢ):
    ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಸುಮಾರು 400ಕ್ಕೂ ಹೆಚ್ಚು ಮಾವೋವಾದಿಗಳು ಸೇನಾಪಡೆಗಳ ಮೇಲೆ ದಾಳಿ ನಡೆಸಿದ ಪರಿಣಾಮ 22 ಸೈನಿಕರು ಮೃತಪಟ್ಟು, 31 ಮಂದಿ ಗಾಯಗೊಂಡರು.
  9. ಪೂಂಚ್ (ಏಪ್ರಿಲ್ 20, 2023 – ಜಮ್ಮು ಮತ್ತು ಕಾಶ್ಮೀರ):
    ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಸೇನೆಯ ಟ್ರಕ್ ಮೇಲೆ ಉಗ್ರರು ದಾಳಿ ನಡೆಸಿದ ಪರಿಣಾಮ 5 ಸೈನಿಕರು ಮೃತಪಟ್ಟರು.
eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...