ತಮಿಳುನಾಡಿನಲ್ಲಿ ಹಿಂದಿಗೆ ಹಿಂದೆಯೂ ಅವಕಾಶ ಇರಲಿಲ್ಲ. ಇಂದು ಕೂಡ ಅವಕಾಶವಿಲ್ಲ. ಮುಂದೆಯೂ ಅವಕಾಶ ಇರುವುದಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಘೋಷಿಸಿದ್ದಾರೆ.
ಭಾನುವಾರ, ಭಾಷಾ ಹುತಾತ್ಮರ ದಿನಾಚರಣೆಯಲ್ಲಿ ಅವರು ಮಾತನಾಡಿದರು. “ತಮಿಳುನಾಡು ತಮಿಳು ಭಾಷೆಯನ್ನು ತನ್ನ ಜೀವದಂತೆ ಪ್ರೀತಿಸುವ ರಾಜ್ಯ. ನಮ್ಮ ರಾಜ್ಯವು ಒಗ್ಗಟ್ಟಾಗಿ ಹಿಂದಿ ಹೇರಿಕೆಗೆ ವಿರುದ್ಧ ಹೋರಾಡಿತ್ತು. ತಮಿಳು ಭಾಷೆಗಾಗಿ ತಮ್ಮ ಅಮೂಲ್ಯ ಜೀವಗಳನ್ನು ತ್ಯಾಗ ಮಾಡಿದ ಹುತಾತ್ಮರಿಗೆ ನಾನು ನನ್ನ ಗೌರವ ಸಲ್ಲಿಸುತ್ತೇನೆ” ಎಂದಿದ್ದಾರೆ.
“1965ರಲ್ಲಿ ನಡೆದ ಹಿಂದಿ ವಿರೋಧಿ ಚಳವಳಿಯಲ್ಲಿ ಡಿಎಂಕೆ ಮುಖಂಡರ ಸಿ.ಎನ್ ಅಣ್ಣಾದುರೈ ಮತ್ತು ಎಂ ಕರುಣಾನಿಧಿ ಮುಂದಾಳತ್ವ ವಹಿಸಿದ್ದರು. ಭಾಷಾ ಹೋರಾಟದಲ್ಲಿ ಅವರ ಕೊಡುಗೆ ಅಪಾಯ. “ಭಾಷಾ ಹೋರಾಟದಲ್ಲಿ ಇನ್ನಾವುದೇ ಜೀವ ನಷ್ಟವಾಗುವುದಿಲ್ಲ. ತಮಿಳಿಗಾಗಿನ ನಮ್ಮ ಪ್ರೀತಿ ಎಂದಿಗೂ ಸಾಯುವುದಿಲ್ಲ” ಎಂದು ಹೇಳಿದ್ದಾರೆ.
“ಪ್ರಸ್ತುತ, ಹಿಂದಿ ವಿರೋಧಿ ಚಳುವಳಿಗೆ ತಮಿಳುನಾಡು ಮುಂದಾಳತ್ವ ವಹಿಸಿದೆ. ಭಾರತದಲ್ಲಿ ವಿವಿಧ ಭಾಷೆ ಮತ್ತು ಜನಾಂಗಗಳ ಹಕ್ಕು ಮತ್ತು ಅಸ್ಮಿತೆಗೆ ಸಮಾನ ರಕ್ಷಣೆ ಇದೆ” ಎಂದು ಹೇಳಿದ್ದಾರೆ.




