ಬಿಸಿಗಾಳಿ – ಆಲಿಕಲ್ಲು ಮಳೆ: ಮಾರ್ಚ್‌ನಲ್ಲಿ ಹವಾಮಾನ ಅಸ್ತವ್ಯಸ್ತಕ್ಕೆ ಕಾರಣವೇನು?

Date:

ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್‌ನಲ್ಲಿ ಸುಡುವ ಬಿಸಿಲು, ಹಿಮಾಚಲ ಪ್ರದೇಶದಲ್ಲಿ ಅಸಹಜ ಬಿಸಿಗಾಳಿ, ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಒಣಹವೆ ಹಾಗೂ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಆಲಿಕಲ್ಲು ಸಹಿತ ಮಳೆಯಂತಹ ನಾನಾ ರೀತಿಯ ಹವಾಮಾನವನ್ನು ಮಾರ್ಚ್ ತಿಂಗಳು ಕಂಡಿದೆ. ಸಾಮಾನ್ಯವಾಗಿ ಚಳಿಗಾಲದಿಂದ ಬೇಸಿಗೆಗೆ ನಿಧಾನವಾಗಿ ಬದಲಾಗುವ ಈ ತಿಂಗಳಲ್ಲಿ ಈ ಬಾರಿ ಹವಾಮಾನ ವ್ಯತಿರಿಕ್ತವಾಗಿದೆ.

ಮಾರ್ಚ್ ತಿಂಗಳಿನಲ್ಲಾಗುತ್ತಿರುವ ಹವಾಮಾನ ಬಲಾವಣೆ ಅಥವಾ ವೈಪರೀತ್ಯಗೆ ‘ಪಶ್ಚಿಮದ ಮಾರುತಗಳು’ ಅಥವಾ ವೆಸ್ಟರ್ನ್ ಡಿಸ್ಟರ್ಬನ್ಸ್ ಪ್ರಮುಖ ಕಾರಣ. ಇವು ಅಫ್ಘಾನಿಸ್ತಾನ ಮತ್ತು ಇರಾನ್‌ನಲ್ಲಿ ಉದ್ಭವಿಸುವ ಮಳೆ ಹೊತ್ತ ಮಾರುತಗಳು. ಇವು ಭಾರತದ ಕಡೆಗೆ ಪೂರ್ವಕ್ಕೆ ಚಲಿಸುವಾಗ ಮೆಡಿಟರೇನಿಯನ್ ಸಮುದ್ರ, ಕಪ್ಪು ಸಮುದ್ರ, ಕ್ಯಾಸ್ಪಿಯನ್ ಸಮುದ್ರ ಹಾಗೂ ಅರೇಬಿಯನ್ ಸಮುದ್ರದಿಂದ ತೇವಾಂಶವನ್ನು ಹೀರಿಕೊಳ್ಳುತ್ತವೆ.

ಕಳೆದ ನವೆಂಬರ್‌ನಿಂದ ಭಾರತದ ಮೇಲೆ ಪ್ರಭಾವ ಬೀರುತ್ತಿರುವ ಪಶ್ಚಿಮದ ಮಾರುತಗಳ ತೀವ್ರತೆ ಕಡಿಮೆಯಾಗಿತ್ತು. ಇದು ಮಳೆ ಮತ್ತು ಹಿಮಪಾತದ ಮೇಲೆ ನೇರ ಪರಿಣಾಮ ಬೀರಿತ್ತು. ಆದರೆ, ಕಳೆದ ವಾರದಿಂದ ಈ ಪ್ರವೃತ್ತಿ ಬದಲಾಗಿದೆ. ಮಾರ್ಚ್ 13 ಮತ್ತು 18ರಂದು ಎರಡು ತೀವ್ರಗತಿಯ ಪಶ್ಚಿಮದ ಮಾರುತಗಳು ವಾಯುವ್ಯ, ಉತ್ತರ ಹಾಗೂ ಪೂರ್ವ ಭಾರತವನ್ನು ದಾಟಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದರ ಪರಿಣಾಮವಾಗಿ, ಪಶ್ಚಿಮ ಹಿಮಾಲಯ, ಪೂರ್ವ ಮತ್ತು ಈಶಾನ್ಯ ಭಾರತ ಹಾಗೂ ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಗುಡುಗು, ಮಿಂಚು, ಆಲಿಕಲ್ಲು ಮಳೆ ಹಾಗೂ ಅಲ್ಪಾವಧಿಯ ತೀವ್ರ ಮಳೆ (24 ಗಂಟೆಗಳಲ್ಲಿ 115 ಮಿಮೀಗಿಂತ ಹೆಚ್ಚು) ಸಂಭವಿಸಿದೆ. ನೆರೆಯ ಪಾಕಿಸ್ತಾನವೂ ಎರಡು ದಿನಗಳ ಹಿಂದೆ ಇಂತಹ ತೀವ್ರ ಹವಾಮಾನವನ್ನು ಅನುಭವಿಸಿದೆ.

ಭಾರತೀಯ ಹವಾಮಾನ ಇಲಾಖೆ (IMD) ಅಧಿಕಾರಿಗಳ ಪ್ರಕಾರ, ಇದು ಕೇವಲ ಪಶ್ಚಿಮದ ಮಾರುತಗಳಿಂದ ಮಾತ್ರವಲ್ಲದೆ, ವಾತಾವರಣದ ಕೆಳಮಟ್ಟದಲ್ಲಿ ದೀರ್ಘಕಾಲದವರೆಗೆ ಇದ್ದ ಚಂಡಮಾರುತದ ಸುಳಿಗಾಳಿಯಿಂದಲೂ ಸಂಭವಿಸಿದೆ. ಇದರ ಜೊತೆಗೆ, ಬಂಗಾಳ ಕೊಲ್ಲಿಯಿಂದ ಬೀಸಿದ ನೈಋತ್ಯ ಗಾಳಿಯು ಮಧ್ಯ ಮತ್ತು ವಾಯುವ್ಯ ಭಾರತದ ಪ್ರದೇಶಗಳಲ್ಲಿ ಹವಾಮಾನ ವೈಪರೀತ್ಯಕ್ಕೆ ಕಾರಣವಾಗಿದೆ.

ಮಾರ್ಚ್‌ನಲ್ಲಿ ಆಲಿಕಲ್ಲು ಮತ್ತು ಗುಡುಗು ಸಹಿತ ಮಳೆ ಹೇಗೆ ಸಾಧ್ಯ?

  1. ಪಶ್ಚಿಮದ ಮಾರುತಗಳು ಮಾನ್ಸೂನ್ ಅಲ್ಲದ ತಿಂಗಳುಗಳಲ್ಲಿ ಮಳೆಯನ್ನು ಉಂಟುಮಾಡುತ್ತವೆ. ಚಳಿಗಾಲದ ಪ್ರಭಾವವಿರುವ ಮಾರ್ಚ್ ಆರಂಭದಲ್ಲಿ ಇದು ಹೆಚ್ಚು ಕಂಡುಬರುತ್ತದೆ.
  2. ಮಾರ್ಚ್ ತಿಂಗಳು ಆಲಿಕಲ್ಲು ಮತ್ತು ಗುಡುಗು ಸಹಿತ ಮಳೆಗೆ ಅತ್ಯಂತ ಪೂರಕವಾದ ತಿಂಗಳು. ಮಾರ್ಚ್ ಮಧ್ಯದ ನಂತರ ತಾಪಮಾನ ಏರಲಾರಂಭಿಸುತ್ತದೆ. ಇದು ಸರಿಯಾದ ಹವಾಮಾನ ಪರಿಸ್ಥಿತಿಗಳಲ್ಲಿ ಗುಡುಗು ಮತ್ತು ಮಿಂಚಿನ ಮಳೆಗೆ ಕಾರಣವಾಗುತ್ತದೆ.
  3. ಪೂರ್ವ ಭಾರತದಲ್ಲಿ ‘ನಾರ್ವೆಸ್ಟರ್ಸ್’ (ಪಶ್ಚಿಮ ಬಂಗಾಳದಲ್ಲಿ ಕಾಲ್ ಬೈಸಾಖಿ) ಎಂದು ಕರೆಯಲ್ಪಡುವ ಸ್ಥಳೀಯ ಗಾಳಿಗಳು ಈ ಸಮಯದಲ್ಲಿ ಹಠಾತ್ ತೀವ್ರ ಚಂಡಮಾರುತ ಮತ್ತು ಮಳೆಗೆ ಕಾರಣವಾಗುತ್ತವೆ.

ಒಡಿಶಾ, ಅಸ್ಸಾಂ, ಮೇಘಾಲಯ, ಹಿಮಾಚಲ ಪ್ರದೇಶ, ಸಿಕ್ಕಿಂ, ಜಾರ್ಖಂಡ್, ಪಂಜಾಬ್, ಹರಿಯಾಣ, ಛತ್ತೀಸ್‌ಗಢ ಹಾಗೂ ಮಹಾರಾಷ್ಟ್ರ ಸೇರಿದಂತೆ ಭಾರತದ ವಿಶಾಲ ಪ್ರದೇಶದಲ್ಲಿ ಆಲಿಕಲ್ಲು ಮಳೆಯಾಗಿದೆ. ಗಮನಾರ್ಹವಾಗಿ, ಉತ್ತರ ಕರ್ನಾಟಕದ ರಾಯಚೂರು ಮತ್ತು ಧಾರವಾಡ ಜಿಲ್ಲೆಗಳ ಹಲವು ಪ್ರದೇಶಗಳು ಮಾರ್ಚ್ 18 ರಂದು ಆಲಿಕಲ್ಲು ಮಳೆಯಾಗಿದ್ದು, ನಾನಾ ಪ್ರದೇಶಗಳು ಬಿಳಿ ಹೊದಿಕೆಯಿಂದ ಆವೃತವಾಗಿದ್ದವು.

ಮಾರ್ಚ್‌ನ ಮುಂದಿನ ದಿನಗಳು ಹೇಗಿರಲಿವೆ?

ಮಾರ್ಚ್ ತಿಂಗಳು ಬಿಸಿಗಾಳಿಯೊಂದಿಗೆ ಆರಂಭವಾದರೂ, ಈಗಿನ ಗುಡುಗು ಸಹಿತ ಮಳೆಯು ತಾಪಮಾನವನ್ನು ತಗ್ಗಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

  • ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಹಗುರದಿಂದ ಸಾಧಾರಣ ಮಳೆ ಮುಂದುವರೆಯಲಿದೆ.
  • ಜಾರ್ಖಂಡ್, ಪಶ್ಚಿಮ ಬಂಗಾಳ, ಛತ್ತೀಸ್‌ಗಢ ಹಾಗೂ ಒಡಿಶಾದಲ್ಲಿ ಗಂಟೆಗೆ 60-80 ಕಿಮೀ ವೇಗದ ಗಾಳಿ ಬೀಸಲಿದೆ.
  • ಮಾರ್ಚ್ 22 ಮತ್ತು 26ನ ನಡುವೆ ಮತ್ತೆರಡು ಪಶ್ಚಿಮದ ಮಾರುತಗಳು ಭಾರತವನ್ನು ಪ್ರವೇಶಿಸಲಿವೆ. ಎರಡನೇ ಮಾರುತ (ಮಾರ್ಚ್ 26) ಹೆಚ್ಚು ತೀವ್ರವಾಗಿರಲಿದ್ದು, ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳದಲ್ಲಿ ಭಾರಿ ಮಳೆಯಾಗಿದೆ.

ಒಟ್ಟಾರೆಯಾಗಿ, ಮಾರ್ಚ್‌ನ ಉಳಿದ ದಿನಗಳಲ್ಲಿ ದೇಶಾದ್ಯಂತ ಗುಡುಗು ಸಹಿತ ಮಳೆಯಾಗಲಿದೆ. ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಗಣನೀಯವಾಗಿ ಕಡಿಮೆ ಇರಲಿದೆ. ತೆಲಂಗಾಣ, ಆಂಧ್ರಪ್ರದೇಶ ಹಾಗೂ ಕೇರಳದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಎಐಎಡಿಎಂಕೆ 178, ಬಿಜೆಪಿ 27 ಕ್ಷೇತ್ರಗಳಲ್ಲಿ ಸ್ಪರ್ಧೆ

ಈ ಬಾರಿಯ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರಲೇ ಬೇಕೆಂದು ಪಣ...

ಮಧ್ಯಪ್ರಾಚ್ಯ ಸಂಘರ್ಷ | ಕದನ ವಿರಾಮ ಎಂದ ಟ್ರಂಪ್; ಮಾತುಕತೆ ನಡೆದಿಲ್ಲವೆಂದ ಇರಾನ್

ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷವನ್ನು ಕೊನೆಗಾಣಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ನಾನಾ...

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...