ಅಭಿಷೇಕ್ ಆಟದ ಬಗ್ಗೆ ನನಗೇನು ಚಿಂತೆಯಿಲ್ಲ: ನಾಯಕ ಸೂರ್ಯ

Date:

ಸತತ ಮೂರು ಪಂದ್ಯಗಳಲ್ಲಿ ಟೀಮ್ ಇಂಡಿಯಾದ ಆರಂಭಿಕ ಅಟಗಾರ ಅಭಿಷೇಕ್ ಶರ್ಮಾ ಅವರು ಕಳಪೆ ಪ್ರದರ್ಶನ ನೀಡಿದ್ದು, ಅವರ ಆಟದ ಕುರಿತು ಹಲವರು ನಾನಾ ರೀತಿಯಲ್ಲಿ ಚರ್ಚಿಸುತ್ತಿದ್ದಾರೆ. ಆದರೆ, ತಂಡದ ನಾಯಕ ಸೂರ್ಯಕುಮಾರ್ ಯಾದವ್ ಯಾವುದೇ ಆತಂಕವಿಲ್ಲದೆ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅಭಿಷೇಕ್ ಆಟದ ಕುರಿತು ನನಗೆ ಯಾವುದೇ ಚಿಂತೆಯಿಲ್ಲ. ಅವರ ಫಾರ್ಮ್‌ ಬಗ್ಗೆ ಚಿಂತಿತರಾಗಿರುವವರ ಕುರಿತೇ ನನಗೆ ಚಿಂತೆಯಾಗಿದೆ. ಯಾಕೆ ಎಲ್ಲರೂ ಇಷ್ಟೊಂದು ಚಿಂತಿಸುತ್ತಿದ್ದಾರೆ. ಅವರು ಇನ್ನೂ ರನ್ ಗಳಿಸಿಲ್ಲ. ಆದರೆ, ಅವರು ರನ್‌ ಗಳಿಸಿದ ದಿನ ಏನಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಸೂರ್ಯ ಹೇಳಿದ್ದಾರೆ.

ಇಂದು (ಭಾನುವಾರ), ಅಹಮದಾಬಾದ್‌ನ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಭಾರತ ತಂಡಗಳ ನಡುವೆ ಸೂಪರ್ 8 ಪಂದ್ಯ ನಡೆಯಲಿದೆ. ಅದಕ್ಕೂ ಮುನ್ನ ಸೂರ್ಯ ತಮ್ಮ ಆಟಗಾರರ ಕುರಿತು ವಿಶ್ವಾಸದಿಂದ ಮಾತನಾಡಿದ್ದಾರೆ. “ಆಟದಲ್ಲಿ ಶೂನ್ಯಕ್ಕೆ ಔಟಾಗುವುದು ನಡೆಯುತ್ತಲೇ ಇರುತ್ತದೆ. ಆದರೆ, ಇದು ತಂಡದ ಆಟ. ತಂಡವು ಈಗ ಅಭಿಷೇಕ್ ಉತ್ತಮ ಆಟ ಆಡಬೇಕೆಂದು ಬಯಸುತ್ತಿದೆ. ಅವರು ಅದನ್ನೇ ಮಾಡಲು ಪ್ರಯತ್ನಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.

ಅಭಿಷೇಕ್ ಬದಲಿಗೆ ಸಂಜು ಸ್ಯಾಮ್ಸನ್ ಅವರನ್ನು ಆಡಿಸಬಹುದೇ ಎಂಬ ಪ್ರಶ್ನೆಗೆ ಹಾಸ್ಯವಾಗಿ ಉತ್ತರಿಸಿದ ಸೂರ್ಯ, “ಸ್ಯಾಮ್ಸನ್ 3ನೇ ಸ್ಥಾನದಲ್ಲಿ ಆಡಬೇಕೇ? ಹಾಗಾದರೆ, ನಾನು ತಿಲಕ್ ಅವರನ್ನು ಸಂಜು ಜೊತೆ ಬದಲಾಯಿಸಬೇಕೇ? ನೋಡಿ, ಪವರ್‌ಪ್ಲೇನಲ್ಲಿ ನಮ್ಮ ಬ್ಯಾಟಿಂಗ್ ಚೆನ್ನಾಗಿ ನಡೆಯುತ್ತಿದೆ. ನಾವು ಅಲ್ಲಿ 40-50 ರನ್‌ಗಳನ್ನು ಗಣಿಸುತ್ತಿದ್ದೇವೆ. ನೀವು ನಮ್ಮಿಂದ 220-250 ರನ್‌ಗಳನ್ನು ನಿರೀಕ್ಷಿಸುತೀರಾ” ಎಂದಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...