ಭಾರತದ ‘ಐ ಡ್ರಾಪ್’ ಅಮೆರಿಕದ ಕಣ್ಣಿನ ಸೋಂಕುಗಳಿಗೆ, ಸಮಸ್ಯೆಗಳಿಗೆ ಕಾರಣ : ಸಿಡಿಸಿ

Date:

  • ಭಾರತದ ಐ ಡ್ರಾಪ್ ಎಜ್ರಿಕೇರ್ ಆರ್ಟಿಫಿಷಿಯಲ್ ಟಿಯರ್ಸ್ ಬಳಕೆಯಿಂದ ಹಾನಿ
  • ಚೆನ್ನೈ ಮೂಲದ ಗ್ಲೋಬಲ್‌ ಫಾರ್ಮಾ ಹೆಲ್ತ್‌ಕೇರ್ ಕಂಪನಿಯಿಂದ ತಯಾರಿಕೆ

ಭಾರತದ ಐ ಡ್ರಾಪ್ ಅಮೆರಿಕದ ಕಣ್ಣಿನ ಸಮಸ್ಯೆಗಳಿಗೆ ಕಾರಣ ಎಂಬ ಆರೋಪ ಕೇಳಿ ಬಂದಿದೆ.

ಗ್ಯಾಂಬಿಯಾ ಕೆಮ್ಮಿನ ಸಿರಪ್‌ ನಂತರ ಭಾರತದಲ್ಲಿ ತಯಾರಿಸಿದ ಈ ಕಣ್ಣಿನ ಡ್ರಾಪ್ ಸದ್ದು ಮಾಡುತ್ತಿದೆ. ಏಕೆಂದರೆ ಈ ಡ್ರಾಪ್‌ ಬಳಸಿದ ಅಮೆರಿಕದ ಹಲವರು ಮೃತಪಟ್ಟಿದ್ದು 8 ಮಂದಿಗೆ ಕುರುಡುತನ ಉಂಟಾಗಿದೆ.

ಚೆನ್ನೈ ಮೂಲದ ಗ್ಲೋಬಲ್‌ ಫಾರ್ಮಾ ಹೆಲ್ತ್‌ಕೇರ್ ಕಂಪನಿ ತಯಾರಿಸಿದ ಐ ಡ್ರಾಪ್ ಎಜ್ರಿಕೇರ್‌ ಆರ್ಟಿಫಿಷಿಯಲ್‌ ಟಿಯರ್ಸ್ ಹೆಸರಿನ ಕಣ್ಣಿಗೆ ಬಿಡುವ ಹನಿಗಳು ವಿವಾದದ ಮೂಲವಾಗಿದೆ. ಇದರ ವಿರುದ್ಧ ಪ್ರಕರಣ ದಾಖಲಾಗಿದ್ದು ಅಮೆರಿಕದ 12 ರಾಜ್ಯಗಳು ತನಿಖೆ ನಡೆಸುತ್ತಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅಮೆರಿಕದ ವೈದ್ಯಕೀಯ ತನಿಖಾ ಸಂಸ್ಥೆಯಾದ ರೋಗಗಳ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು (ಸಿಡಿಸಿ) ಈ ಕುರಿತು ವರದಿ ಮಾಡಿದೆ. ಈ ಹಿನ್ನೆಲೆ ಭಾರತದ ಕಣ್ಣಿನ ಡ್ರಾಪ್‌ ಬಗ್ಗೆ ತನಿಖೆ ಮಾಡಲಾಗುತ್ತಿದೆ.

ಭಾರತದ ಐ ಡ್ರಾಪ್‌ ಅನ್ನು ದೇಶದ ಕಂಪನಿಯೊಂದು ತಯಾರಿಸಿದೆ. ಈ ಕಣ್ಣಿನ ಡ್ರಾಪ್‌ಗೆ ಸಂಬಂಧಿಸಿದ ಔಷಧ ನಿರೋಧಕ ಬ್ಯಾಕ್ಟೀರಿಯಾದ ಸಂಭವನೀಯ ಪರಿಣಾಮಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸಿಡಿಸಿ ತಿಳಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

ವಿವಾದವು ಭುಗಿಲೆದ್ದ ನಂತರ ಕಂಪನಿಯು ತನ್ನ ಅಧಿಕೃತ ಜಾಲತಾಣದಲ್ಲಿ ಹೇಳಿಕೆ ನೀಡಿತು. ಅಮೆರಿಕ ಮಾರುಕಟ್ಟೆಗೆ ರವಾನಿಸಿದ ಎಲ್ಲ ಎಜ್ರಿಕೇರ್ ಆರ್ಟಿಫಿಷಿಯಲ್ ಟಿಯರ್ಸ್ ಕಣ್ಣಿನ ಡ್ರಾಪ್‌ಗಳನ್ನು ಹಿಂಪಡೆಯುವುದಾಗಿ ಗ್ಲೋಬಲ್ ಫಾರ್ಮಾ ಹೆಲ್ತ್‌ಕೇರ್‌ ಘೋಷಿಸಿತ್ತು.

ಈ ಐಡ್ರಾಪ್ ಉತ್ಪಾದನೆಯನ್ನು ಕಂಪನಿಯು ಈಗ ನಿಲ್ಲಿಸಿದೆ. ಆಗ್ನೇಯ ಏಷ್ಯಾ, ಮಧ್ಯ ಅಮೆರಿಕ, ಆಫ್ರಿಕಾದಲ್ಲಿನ ಮಾರುಕಟ್ಟೆಗಳಲ್ಲಿ ಈ ಹೆಲ್ತ್‌ಕೇರ್ ಅನೇಕ ಚಿಕಿತ್ಸಕ ರೂಪಗಳಲ್ಲಿ ವ್ಯಾಪಕವಾದ ಔಷಧಿಯನ್ನು ತಯಾರಿಸುತ್ತಿತ್ತು ಮತ್ತು ವಿತರಣೆ ಮಾಡುತ್ತಿತ್ತು.

ಹಾಗಾಗಿ ಇಲ್ಲಿನ ಎಲ್ಲ ಸಗಟು ವ್ಯಾಪಾರಿಗಳು ಅಥವಾ ಗ್ರಾಹಕರು ಪಡೆಯಲಾದ ಉತ್ಪನ್ನವನ್ನು ತಕ್ಷಣವೇ ಬಳಸುವುದನ್ನು ನಿಲ್ಲಿಸುವಂತೆ ಕಂಪನಿಯು ಹೇಳಿದೆ.

ಏನಿದು ಐ ಡ್ರಾಪ್ ವಿವಾದ?

ಕಳೆದ ತಿಂಗಳು ಅಮೆರಿಕ ವೈದ್ಯಕೀಯ ತನಿಖಾ ಸಂಸ್ಥೆ ಸಿಡಿಸಿ ಕಣ್ಣಿನ ಡ್ರಾಪ್‌ಗಳಿಗೆ ಸಂಬಂಧಿಸಿ ತನಿಖೆ ಆರಂಭಿಸಿತು. ಇದು ವ್ಯಕ್ತಿಯಿಂದ ವ್ಯಕ್ತಿಗೆ ಹರಡಬಹುದು ಮತ್ತು ಸೋಂಕುಗಳಿಗೆ ಕಾರಣವಾಗಬಹುದು ಎಂಬ ವರದಿ ನೀಡಿತು.

ಭಾರತದ ಐ ಡ್ರಾಪ್‌ ವಿಷಯಕ್ಕೆ ಸಂಬಂಧಿಸಿ ತಿಂಗಳ ಹಿಂದೆ ಔಷಧ-ನಿರೋಧಕ ಬ್ಯಾಕ್ಟೀರಿಯಾದ ಅಪರೂಪದ ತಳಿಯನ್ನು ಅಮೆರಿಕದ 16 ರಾಜ್ಯಗಳ 68 ರೋಗಿಗಳಲ್ಲಿ ಗುರುತಿಸಲಾಗಿತ್ತು.

ಅದರಲ್ಲಿ ಮೂರು ಜನರು ಮೃತಪಟ್ಟರು. ಎಂಟು ಜನರು ಕುರುಡುತನದಿಂದ ಬಳಲುತ್ತಿದ್ದರು. ಈ ರೋಗಿಗಳಲ್ಲಿ ಹೆಚ್ಚಿನವರು ಭಾರತದಿಂದ ಆಮದು ಮಾಡಿಕೊಳ್ಳಲಾದ ಆರ್ಟಿಫಿಷಿಯಲ್ ಟಿಯರ್ಸ್ ಹೈ ಡ್ರಾಪ್‌ಗಳನ್ನು ಬಳಸುತ್ತಿದ್ದರು ಎಂಬುದು ತನಿಖೆ ವೇಳೆ ತಿಳಿದು ಬಂದಿದೆ.

ಈ ಸುದ್ದಿ ಓದಿದ್ದೀರಾ? ಮಾನನಷ್ಟ ಮೊಕದ್ದಮೆ; ದೋಷಾರೋಪಣೆಗೆ ತಡೆ ಕೋರಿ ಹೈಕೋರ್ಟ್‌ಗೆ ರಾಹುಲ್ ಗಾಂಧಿ ಅರ್ಜಿ

ಈ ಕುರಿತು ಮಾರ್ಚ್ 21 ರಂದು ಸಿಡಿಸಿ ವರದಿ ಬಿಡುಗಡೆ ಮಾಡಿತು. “ರೋಗಿಗಳು 10 ಕ್ಕೂ ಹೆಚ್ಚು ಬ್ರ್ಯಾಂಡ್‌ಗಳನ್ನು ಬಳಸಿದ್ದಾರೆ. ಬಹುಡೋಸ್ ಬಾಟಲಿಗಳಲ್ಲಿ ಪ್ಯಾಕ್ ಮಾಡಲಾದ ಸಂರಕ್ಷಕ-ಮುಕ್ತ, ಪ್ರತ್ಯಕ್ಷವಾದ ಉತ್ಪನ್ನವಾದ ಎಜ್ರಿಕೇರ್‌ ಆರ್ಟಿಫಿಷಿಯಲ್ ಟಿಯರ್ಸ್ ಹೆಸರಿನ ಕಣ್ಣಿನ ಡ್ರಾಪ್‌ ಬಳಸಿರುವುದು ವರದಿಯಾಗಿದೆ.

ಐ ಡ್ರಾಪ್‌ ಎಜ್ರಿಕೇರ್, ಬ್ಯಾಕ್ಟೀರಿಯಾದಿಂದ ಕಲುಷಿತಗೊಂಡಿರುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ. ಇದು ಕುರುಡುತನಕ್ಕೆ ಕಾರಣವಾಗಬಹುದು. ಈ ಬ್ಯಾಕ್ಟೀರಿಯಾವು ಶ್ವಾಸಕೋಶಗಳಲ್ಲಿ ಸೋಂಕನ್ನು ಉಂಟುಮಾಡುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ಕದನ ವಿರಾಮ ಸೋಗಿನಲ್ಲಿ ಅಮೆರಿಕದ ಹೈಡ್ರಾಮ: ಟ್ರಂಪ್ ದಾಳಿ ಮುಂದೂಡಿಕೆಗೆ ಇರಾನ್ ವ್ಯಂಗ್ಯ

ಯುದ್ಧೋನ್ಮಾದಲ್ಲಿ ಮೆರೆಯುತ್ತಿದ್ದ ಅಮೆರಿಕ ಕೊನೆಗೂ ಇರಾನ್‌ನ ಖಡಕ್ ಎಚ್ಚರಿಕೆಗೆ ಮಣಿದಂತೆ ಕಾಣುತ್ತಿದೆ....

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...