ಜಾರ್ಖಂಡ್ನ ರಾಂಚಿಯಿಂದ ದೆಹಲಿಗೆ ತೆರಳುತ್ತಿದ್ದ ಏರ್ ಆ್ಯಂಬುಲೆನ್ಸ್ ಚಾತ್ರಾ ಜಿಲ್ಲೆಯ ಕಸಾರಿಯಾ ಪಂಚಾಯತ್ ಪ್ರದೇಶದಲ್ಲಿ ಪತನಗೊಂಡಿದೆ. ದುರ್ಘಟನೆಯಲ್ಲಿ ಏಳು ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
ಘಟನೆಯನ್ನು ಚಾತ್ರಾ ಪೊಲೀಸ್ ಅಧೀಕ್ಷಕ ಸುಮಿತ್ ಅಗರವಾಲ್ ದೃಢಪಡಿಸಿದ್ದಾರೆ. ಏರ್ ಆ್ಯಂಬುಲೆನ್ಸ್ ವಿಮಾನದಲ್ಲಿ 7 ಮಂದಿ ಪ್ರಯಾಣಿಸುತ್ತಿದ್ದರು. ಘಟನೆಯಲ್ಲಿ ಎಲ್ಲರೂ ಮೃತಪಟ್ಟಿದ್ದಾರೆಎಂದು ಹೇಳಿದ್ದಾರೆ.
ಮೃತರನ್ನು ರೋಗಿಯಾಗಿದ್ದ ಸಂಜಯ್ ಕುಮಾರ್, ಇಬ್ಬರು ಪೈಲಟ್ಗಳಾದ ವಿವೇಕ್ ವಿಕಾಶ್ ಭಗತ್ ಮತ್ತು ಸವರಾಜ್ದೀಪ್ ಸಿಂಗ್, ವೈದ್ಯ ವಿಕಾಶ್ ಕುಮಾರ್ ಗುಪ್ತಾ, ಪ್ಯಾರಾಮೆಡಿಕ್ ಸಚಿನ್ ಕುಮಾರ್ ಮಿಶ್ರಾ ಹಾಗೂ ಸಹಾಯಕರು ಅರ್ಚನಾ ದೇವಿ ಮತ್ತು ಧುರು ಕುಮಾರ್ ಎಂದು ಗುರುತಿಸಲಾಗಿದೆ.
ಪತನಗೊಂಡ ವಿಮಟನವು ರೆಡ್ಬರ್ಡ್ ಏರ್ವೇಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ವಹಣೆಯಲ್ಲೊತ್ತು. ರಾಂಚಿ ಮತ್ತು ದೆಹಲಿ ಮಾರ್ಗದಲ್ಲಿ ವೈದ್ಯಕೀಯ ತುರ್ತು ಸ್ಥಳಾಂತರ ಸೇವೆಗೆ ಬಳಸಲಾಗುತ್ತಿತ್ತು ಎಂದು ತಿಳಿದುಬಂದಿದೆ.
ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಮಾಹಿತಿ ಪ್ರಕಾರ, “ವಿಮಾನದಲ್ಲಿ 41 ವರ್ಷದ ರೋಗಿ ಸಂಜಯ್ ಕುಮಾರ್ ಅವರನ್ನು ಕರೆದೊಯ್ಯಲಾಗುತ್ತಿತ್ತು. ಈ ವೇಳೆ, ಹವಾಮಾನ ಕಾರಣದಿಂದ ಮಾರ್ಗ ಬದಲಾವಣೆ ಮಾಡಲು ಕೋಲ್ಕತ್ತಾ ನಿಯಂತ್ರಣಕ್ಕೆ ಪೈಲಟ್ ಮನವಿ ಮಾಡಿಕೊಂಡಿದ್ದರು. ಆದರೆ, ಕೆಲವೇ ನಿಮಿಷಗಳಲ್ಲಿ ಸಂವಹನ ಮತ್ತು ರಾಡಾರ್ ಸಂಪರ್ಕ ಕಳೆದುಕೊಂಡಿತು. ಬಳಿಕ ಪತನಗೊಂಡಿದೆ. ಘಟನೆಯ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.”




