ಕೇರಳ ಮತ್ತು ಪುದುಚೆರಿ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.
ತಿರುವನಂತಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಕರಮನ ಜಯನ್ ಅವರುನ್ನು ಕಣಕ್ಕಿಳಿಸಿದೆ. ಬಿಜೆಪಿ ಕೇರಳದ ವಿಧಾನಸಭಾ ಚುನಾವಣೆಗೆ 11 ಅಭ್ಯರ್ಥಿಗಳ ಹೊಸ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ಎಲ್ಡಿಎಫ್ ಬೆಂಬಲಿತ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನಟ ಸುಧೀರ್ ಕರಮನ ಮತ್ತು ಕಮ್ಯುನಿಸ್ಟ್ ಮಾರ್ಕ್ಸ್ವಾದಿ ಪಕ್ಷ (ಸಿಎಂಪಿ) ಮತ್ತು ಯುಡಿಎಫ್ ನಾಯಕ ಸಿಪಿ ಜಾನ್ ಅವರ ಪ್ರತಿಸ್ಪರ್ಧಿಯಾಗಿ ಜಯನ್ ಬಿಜೆಪಿಯಿಂದ ಚುನಾವಣೆಯನ್ನು ಎದುರಿಸಲಿದ್ದಾರೆ. ನೆಯ್ಯಟ್ಟಿಂಕರ ವಿಧಾನಸಭಾ ಕ್ಷೇತ್ರದಿಂದ ಉದ್ಯಮಿ ಎಸ್ ರಾಜಶೇಖರನ್ ನಾಯರ್ ಅವರು ಸ್ಪರ್ಧಿಸಲಿದ್ದಾರೆ.
ಇದನ್ನೂ ಓದಿ : ದಾವಣಗೆರೆ ಉಪ ಚುನಾವಣೆ | ಅಹಿಂದ ವರ್ಗಕ್ಕೆ ಟಿಕೆಟ್ ನೀಡಲು ಕಾಂಗ್ರೆಸ್ ಮೀನಮೇಷ
ಇನ್ನು, ಬಿಜೆಪಿ ಪುದುಚೆರಿ ವಿಧಾನಸಭಾ ಚುನಾವಣೆಗೆ 9 ಅಭ್ಯರ್ಥಿಗಳನ್ನು ಘೋಷಿಸಿದ್ದು, ಕಲಾಪೇಟ್ನಿಂದ ಪಿಎಂಎಲ್ ಕಲ್ಯಾಣಸುಂದರಂ ಮತ್ತು ತಿರುನಲ್ಲಾರ್ನಿಂದ ಜಿ.ಎನ್.ಎಸ್ ರಾಜಶೇಖರನ್ ಅವರನ್ನು ಚುನಾವಣಾ ಸ್ಪರ್ಧೆಗಿಳಿಸಿದೆ.
ಎ. ನಮಸ್ಥಿವಾಯಂ ಮನ್ನಾಡಿಪೇಟೆಯಿಂದ, ವಿ.ಪಿ ರಾಮಲಿಂಗಮೆ ರಾಜಭವನದಿಂದ ಮತ್ತು ಎ. ಜಾನ್ಕುಮಾರ್ ಮುದಲಿಯಾರ್ಪೇಟೆಯಿಂದ ಸ್ಪರ್ಧಿಸಲಿದ್ದಾರೆ.
ಏಪ್ರಿಲ್ 9 ರಂದು ಕೇರಳ ಮತ್ತು ಪುದುಚೆರಿಯಲ್ಲಿ ಮತದಾನ ನಡೆಯಲಿದ್ದು ಮೇ 4ರಂದು ಮತ ಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ಹೊರಬೀಳಲಿದೆ.





