ಕೇಂದ್ರ ಸಚಿವ ರಾಜೀವ್ ರಂಜನ್ ಸಿಂಗ್ ‘ಲಲ್ಲನ್’ ಅವರು ಮಂಗಳವಾರ ಹೊಸ ವಿವಾದಕ್ಕೆ ಗುರಿಯಾಗಿದ್ದಾರೆ. ಎನ್ಡಿಎ ಬೆಂಬಲಿಗರಿಗೆ ಮತದಾನ ದಿನದಂದು ವಿಪಕ್ಷದವರನ್ನು ಬೆದರಿಸುವಂತೆ ಕರೆ ನೀಡುತ್ತಿರುವಂತೆ ಕೇಳಿಬರುವ ವಿಡಿಯೋ ವೈರಲ್ ಆಗಿದೆ. ಈ ಹೇಳಿಕೆಗೆ ಸಂಬಂಧಿಸಿದಂತೆ ಸಿಂಗ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಲಲ್ಲನ್ ಅವರ ಬಿಹಾರದ ಮುಂಗೇರ ಲೋಕಸಭಾ ಕ್ಷೇತ್ರದಡಿಯಲ್ಲಿರುವ ಮೊಕಾಮಾದಲ್ಲಿ ಈ ಹೇಳಿಕೆ ನೀಡಿದ್ದಾರೆ. ಇದರಲ್ಲಿ ಮಾಗಧಿ ಭಾಷೆಯಲ್ಲಿ ಮಾತನಾಡುತ್ತಾ ಲಲ್ಲನ್ ಹೇಳಿರುವುದು: “ಇಲ್ಲಿ ಕೆಲವರು ಇದ್ದಾರೆ, ಅವರನ್ನು ಮತದಾನ ದಿನದಂದು ಹೊರಗೆ ಬಿಡಬೇಡಿ. ಮನೆಯೊಳಗೆ ಕೂಡಿಹಾಕಿ. ಅವರು ನಿಮ್ಮ ಮಾತು ಕೇಳಿದರೆ, ಬೂತ್ಗೆ ಕರೆತಂದು ಮತ ಹಾಕಿಸಿ ಮನೆಗೆ ಕಳಿಸಿ.” ಎಂದು ಹೇಳಿದ್ದಾರೆ
ಪಿಟಿಐ ಸಂಸ್ಥೆಯು ಈ ವಿಡಿಯೋದ ಸತ್ಯಾಸತ್ಯತೆಯನ್ನು ಸ್ವತಂತ್ರವಾಗಿ ಪರಿಶೀಲಿಸಿಲ್ಲ ಎಂದಿದೆ. ಆದರೂ ಸಾಮಾಜಿಕ ಮಾಧ್ಯಮಗಳಲ್ಲಿ ಇದು ವೈರಲ್ ಆಗಿದೆ.
ಮೊಕಾಮಾ ಕ್ಷೇತ್ರದಲ್ಲಿ ಜೆಡಿ(ಯು) ಅಭ್ಯರ್ಥಿ ಅನಂತ್ ಸಿಂಗ್ ಅವರ ಪರವಾಗಿ ಪ್ರಚಾರ ಮಾಡುತ್ತಿದ್ದ ಲಲ್ಲನ್, ಕೊಲೆ ಪ್ರಕರಣದಲ್ಲಿ ಅನಂತ್ ಸಿಂಗ್ ಅವರನ್ನು ರಕ್ಷಿಸಿದ್ದಕ್ಕೆ ಈಗಾಗಲೇ ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿದ್ದರು. ಜನ್ ಸುರಾಜ್ ಪಕ್ಷದ ಬೆಂಬಲಿಗ ದುಲಾರ್ ಚಂದ್ ಯಾದವ್ ಕೊಲೆ ಪ್ರಕರಣದಲ್ಲಿ ಅನಂತ್ ಸಿಂಗ್ ಮತ್ತು ಅವರ ಇಬ್ಬರು ಸಹಚರರು – ಮಾಣಿಕಂತ್ ಠಾಕೂರ್ ಮತ್ತು ರಂಜೀತ್ ರಾಮ್ – ಭಾನುವಾರ ರಾತ್ರಿ ಬಂಧಿಸಲ್ಪಟ್ಟಿದ್ದಾರೆ. ಯಾದವ್ ಅವರು ಮೊಕಾಮಾದಲ್ಲಿ ಜನ್ ಸುರಾಜ್ ಪಕ್ಷದ ಅಭ್ಯರ್ಥಿ ಪಿಯೂಷ್ ಪ್ರಿಯದರ್ಶಿ ಅವರ ಪರ ಪ್ರಚಾರ ಮಾಡುತ್ತಿದ್ದಾಗ ಕೊಲ್ಲಲ್ಪಟ್ಟಿದ್ದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅಲೆಮಾರಿಗಳ ಛಲಕ್ಕೊಂದು ಸಲಾಂ; ಮಾತು ತಪ್ಪದಿರಲಿ ಸರ್ಕಾರ
ಸೋಮವಾರ ಮೊಕಾಮಾದಲ್ಲಿ ಅನಂತ್ ಸಿಂಗ್ ಪರ ಪ್ರಚಾರ ನಡೆಸಿದ್ದ ಲಲ್ಲನ್, ಈ ಘಟನೆಯನ್ನು ‘ಪಿತೂರಿ’ ಎಂದು ಕರೆದಿದ್ದರು. “ಅನಂತ್ ಸಿಂಗ್ ಬಂಧನದ ಹಿಂದೆ ಪಿತೂರಿ ಇದೆ. ಪೊಲೀಸ್ ತನಿಖೆಯಲ್ಲಿ ಸತ್ಯ ಬಯಲಾಗುತ್ತದೆ. ಅನಂತ್ ಬಾಬು ಜೈಲಿನಲ್ಲಿರುವುದರಿಂದ ನನ್ನ ಜವಾಬ್ದಾರಿ ಹೆಚ್ಚಾಗಿದೆ. ಇಂದಿನಿಂದ ಮೊಕಾಮಾದ ಆದೇಶ ನನ್ನ ಕೈಯಲ್ಲಿದೆ” ಎಂದು ಘೋಷಿಸಿದ್ದರು. ಉಪಮುಖ್ಯಮಂತ್ರಿ ಸಮ್ರಾಟ್ ಚೌಧರಿ ಅವರೊಂದಿಗೆ ಲಲ್ಲನ್ ಮೊಕಾಮಾಕ್ಕೆ ಭೇಟಿ ನೀಡಿ ಪ್ರಚಾರ ಮಾಡಿದ್ದರು.
ಲಲ್ಲನ್ ಅವರ ಈ ಹೊಸ ವಿಡಿಯೋಗೆ ವಿರೋಧ ಪಕ್ಷಗಳಾದ ಆರ್ಜೆಡಿ ಮತ್ತು ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. “ಚುನಾವಣಾ ಆಯೋಗದ ದೇಹದ ಮೇಲೆ ಬುಲ್ಡೋಜರ್ ಓಡಿಸುತ್ತಾ ಲಲ್ಲನ್ ಸಿಂಗ್ ಹೇಳುತ್ತಿದ್ದಾರೆ, ಬಡವರು ಮತದಾನ ದಿನ ಮನೆಯಿಂದ ಹೊರಗೆ ಬರಬಾರದು! ಆಯೋಗ ನಿಷ್ಪಲವಾಗಿದೆ” ಎಂದಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ, “ಬಿಹಾರದಲ್ಲಿ ‘ಗುಂಡಾಗಿರಿ ಮತ್ತು ಜಂಗಲ್ ರಾಜ್’ದ ಹೊಸ ಉದಾಹರಣೆ ಇದು! ಸೋಲು ಕಂಡು ಜೆಡಿ(ಯು)-ಬಿಜೆಪಿ ನಾಯಕರು ಜನರು ಮನೆಯಿಂದ ಹೊರಗೆ ಬರಬಾರದು, ಕೂಡಿಹಾಕಿ ಎಂದು ಹೇಳಿರುವುದು ಆಪತ್ತಿನ ಸೂಚನೆ” ಎಂದಿದ್ದಾರೆ.
"Those who are not going to vote for BJP, don't let them step out of home"
— Tarun Gautam (@TARUNspeakss) November 4, 2025
These are the words of cabinet minister Lalan Singh (JDU).
Imagine if these were the words of Lalu Yadav or his party, it would have been declared JungleRaj by now.pic.twitter.com/5hFgdFkyqb





