ಲೋಕಸಭೆ ಚುನಾವಣೆ | ಮತ ಎಣಿಕೆ ವೇಳೆ ಈ ಅಂಶಗಳನ್ನು ತಪ್ಪದೆ ಪರಿಶೀಲಿಸಿ

Date:

ಲೋಕಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಜೂನ್ 4ರಂದು ನಡೆಯಲಿದೆ. ಈಗಾಗಲೇ ಆರು ಹಂತಗಳಲ್ಲಿ ಚುನಾವಣೆ ನಡೆದಿದ್ದು, ಕೊನೆಯ ಮತ್ತು ಏಳನೇ ಹಂತದ ಚುನಾವಣೆಯು ಜೂನ್ 2ರಂದು ನಡೆಯಲಿದೆ.

ಈ ಮತ ಎಣಿಕೆಗೂ ಮುನ್ನ ಎಲ್ಲ ರಾಜಕೀಯ ಪಕ್ಷಗಳು ಮತ್ತು ಜನರು ತಿಳಿದಿರಬೇಕಾದ ಪ್ರಮುಖ ಮಾಹಿತಿಯನ್ನು ಸುಪ್ರೀಂಕೋರ್ಟ್‌ ಬಾರ್‌ ಅಸೋಸಿಯೇಶನ್ ಅಧ್ಯಕ್ಷ, ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ವಿವರಿಸಿದ್ದಾರೆ. ಭಾನುವಾರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಕಪಿಲ್ ಸಿಬಲ್ ಮತ ಎಣಿಕೆ ವೇಳೆ ತಪ್ಪದೆ ಪರಿಶೀಲಿಸ ಬೇಕಾದ ಅಂಶಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಇದನ್ನು ಓದಿದ್ದೀರಾ?  ನಾಲ್ಕನೇ ಬಾರಿಗೆ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ​​ಅಧ್ಯಕ್ಷರಾಗಿ ಕಪಿಲ್ ಸಿಬಲ್ ಆಯ್ಕೆ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಮತ ಎಣಿಕೆ ದಿನ ಇವಿಎಂ ಮಿಷನ್‌ಗಳು ತೆರೆದ ಸಂದರ್ಭದಲ್ಲಿ ಜನರು ಮತ್ತು ರಾಜಕೀಯ ಪಕ್ಷಗಳು ಏನು ಮಾಡಬೇಕು ಎಂಬ ಬಗ್ಗೆ ನಾನು ಅರಿವು ಮೂಡಿಸಲು ಬಯಸುತ್ತೇನೆ. ಇದು ಅತೀ ಮಹತ್ವಪೂರ್ಣವಾದ ವಿಚಾರವಾಗಿದೆ. ಲೋಕಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯ ವೇಳೆ ಎಲ್ಲ ರಾಜಕೀಯ ಪಕ್ಷಗಳು ಮತ್ತು ಏಜೆಂಟ್‌ಗಳು ಪರಿಶೀಲಿಸಬೇಕಾದ ಸುರಕ್ಷತಾ ಅಂಶಗಳ ಬಗ್ಗೆ ನಾನು ಚಾರ್ಟ್ ಒಂದನ್ನು ಮಾಡಿದ್ದೇನೆ” ಎಂದು ತಿಳಿಸಿದರು.

ಚಾರ್ಟ್‌ನಲ್ಲಿ ಪರಿಶೀಲಿಸಬೇಕಾದ ಅಂಶಗಳ ವಿವರ

“ಈ ಚಾರ್ಟ್‌ನಲ್ಲಿ ಸಿಯು ನಂಬರ್ ಎಂದರೆ ಕಂಟ್ರೋಲ್ ಯುನಿಟ್ ನಂಬರ್‌ ಅನ್ನು ಎಡ ಬದಿಯಲ್ಲಿ ಮೇಲ್ಭಾಗದಲ್ಲಿ ಬರೆಯಲಾಗಿರುತ್ತದೆ. ಸಿಯು ನಂಬರ್‌ನ ಕೆಳಗಡೆ ಬಿಯು ನಂಬರ್ ಅಂದರೆ ಬ್ಯಾಲೆಟ್ ಯುನಿಟ್ ನಂಬರ್ ಬರೆಯಲಾಗಿರುತ್ತದೆ. ಪೇಪರ್ಸ್ ಸೀಲ್ ಅದರ ನೇರವಾಗಿ ಇರಲಿದೆ. ಅಲ್ಲಿಯೇ ವಿವಿಪ್ಯಾಟ್ ನಂಬರ್ ಇರಲಿದೆ. ಲಿಖಿತ ರೂಪದಲ್ಲಿರುವ ಈ ನಾಲ್ಕು ಅಂಶಗಳನ್ನು ಪರಿಶೀಲಿಸುವುದು ಅತೀ ಮುಖ್ಯವಾಗಿದೆ” ಎಂದು ಕಪಿಲ್ ಸಿಬಲ್ ವಿವರಿಸಿದ್ದಾರೆ.

“ಕೌಂಟಿಂಗ್ ಟೇಬಲ್ ನಂಬರ್ ಒಂದರಲ್ಲಿ ಇವಿಎಂ ಇಸ್ ಆನ್ ಇಸಿಐ (EVM is on ECI) ಎಂದು ಬರೆಯಲಾಗಿರುತ್ತದೆ. ಇದರಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ. ಮೂರನೇ ಕಾಲಮ್ ಅತೀ ಮುಖ್ಯವಾದುದ್ದು. ಮೂರನೇ ಕಾಲಮ್‌ನಲ್ಲಿ ಮತ ಎಣಿಕೆ ನಡೆಯುವ ದಿನಾಂಕ ನಮೂದಿಸಲಾಗಿರುತ್ತದೆ. ಅದರ ಕೆಳಭಾಗದಲ್ಲಿಯೇ ಸಮಯವನ್ನು ಬರೆಯಲಾಗಿರುತ್ತದೆ. ಫಲಿತಾಂಶಕ್ಕೂ ಮುನ್ನ ಈ ಸಮಯವನ್ನು ಬರೆಯಲಾಗಿರುತ್ತದೆ” ಎಂದು ತಿಳಿಸಿದ್ದಾರೆ.

ಇದನ್ನು ಓದಿದ್ದೀರಾ?  11 ದಿನದ ನಂತರ ಶೇಕಡವಾರು ಮತದಾನದ ವಿವರ ಪ್ರಕಟ: ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಪ್ರಶ್ನಿಸಿದ ಕಪಿಲ್ ಸಿಬಲ್

“ಈ ಸಮಯದಲ್ಲಿ ಅಂತರವಿದ್ದರೆ ಇವಿಎಂನಲ್ಲಿ ಸಮಸ್ಯೆ ಇರಬಹುದು. ಈ ಸಮಯದಲ್ಲಿ ಯಾವುದೇ ಅಂತರ ಇದೆಯೇ ಎಂದು ನೀವು ಮೊದಲು ಪರಿಶೀಲಿಸಬೇಕು. ಮತ ಎಣಿಕೆ ದಿನ ಮೆಷಿನ್‌ ತೆರೆದ ಸಂದರ್ಭದಲ್ಲಿ ನೀವು ಕೌಂಟರ್‌ ನಂಬರ್ ಒಂದರಲ್ಲಿ ಯಾವ ಸಮಯವಿದೆ ಎಂದು ನೋಡಬೇಕು. ಮೆಷಿನ್‌ನಲ್ಲಿ ಯಾವ ಸಮಯವಿದೆ ಎಂದು ನೋಡಬೇಕು. ಈ ಸಮಯದ ನಡುವೆ ವ್ಯತ್ಯಾಸವಿದ್ದರೆ ಈ ಮೆಷಿನ್ ಅನ್ನು ಮತ ಎಣಿಕೆ ಮಾಡುವುದಕ್ಕೂ ಮುನ್ನ ಬೇರೆ ಸ್ಥಳದಲ್ಲಿ ತೆರೆಯಲಾಗಿದೆ ಎಂದು ಅರ್ಥವಾಗಿರುತ್ತದೆ” ಎಂದು ಹೇಳಿದರು.

“ಅದರ ನಂತರವಿರುವ ಕಾಲಮ್ ಇನ್ನಷ್ಟು ಮುಖ್ಯವಾದುದ್ದು. ಅದುವೇ ಸಿರೀಯಲ್ ನಂಬರ್. ಈ ಸಿರೀಯಲ್ ನಂಬರ್ ಹೊಂದಾಣಿಕೆಯಾದರೆ ಸಮಸ್ಯೆಯಿಲ್ಲ. ಅದಾದ ಬಳಿಕ ಅಭ್ಯರ್ಥಿಗಳ ಹೆಸರು ಇರಲಿದೆ. ಒಟ್ಟು ಮತದಾನ ಪ್ರಮಾಣ ಇರಲಿದೆ. ಒಟ್ಟು ಮತದಾನ ಪ್ರಮಾಣವನ್ನು ನೀವು ಸರಿಯಾಗಿ ಗಮನಿಸಬೇಕು. ಕೌಂಟಿಂಗ್ ವೇಳೆ ಮತ ಹೆಚ್ಚು ಕಡಿಮೆಯಿದ್ದರೆ ಅಲ್ಲಿ ಸಮಸ್ಯೆಯಿದೆ ಎಂದರ್ಥ” ಎಂದು ಕಪಿಲ್ ಸಿಬಲ್ ಮಾಹಿತಿ ನೀಡಿದರು.

“ಈ ಎಲ್ಲ ಅಂಶಗಳನ್ನು ಸರಿಯಾಗಿ ಪರಿಶೀಲಿಸಿ ಹೋಲಿಕೆ ಮಾಡಿದ ನಂತರವೇ ನೀವು ಫಲಿತಾಂಶದ ಬಟನ್ ಅನ್ನು ಒತ್ತಲು ಅವಕಾಶ ನೀಡಬೇಕು. ಮತದಾನ ನಡೆದ ದಿನಾಂಕ ಉಲ್ಲೇಖವಾಗಿರುತ್ತದೆ. ಈ ದಿನಾಂಕದಲ್ಲಿ ವ್ಯತ್ಯಾಸವಿದೆಯೇ ಎಂದು ಪರಿಶೀಲಿಸಬೇಕು. ಮತದಾನ ಆರಂಭವಾದ ಸಮಯ ಮತ್ತು ಮತದಾನ ಮುಕ್ತಾಯವಾದ ಸಮಯ ಅತೀ ಮುಖ್ಯವಾಗಿರುತ್ತದೆ” ಎಂದು ತಿಳಿಸಿದರು.

“ಪ್ರಮುಖವಾಗಿ ಎರಡು ಅಂಶಗಳ ಬಗ್ಗೆ ಗಮನದಲ್ಲಿಟ್ಟುಕೊಳ್ಳಬೇಕು. ಎಲ್ಲ ಕಾಲಮ್‌ಗಳ ಪರಿಶೀಲನೆ ನಡೆದ ಬಳಿಕವೇ ಫಲಿತಾಂಶದ ಬಟನ್ ಒತ್ತಲು ಅವಕಾಶ ನೀಡಿ. ಎಲ್ಲ ರಾಜಕೀಯ ಪಕ್ಷಗಳು ಮತ್ತು ಆಯಾ ಪಕ್ಷದ ಚುನಾವಣಾ ಏಜೆಂಟ್‌ಗಳು ಈ ಮಾಹಿತಿ ತಿಳಿದಿರುವುದು ಅತೀ ಮುಖ್ಯ” ಎಂದು ಹೇಳಿದರು.

 

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...