ಕೆಲವೇ ತಿಂಗಳುಗಳ ಮುನ್ನ ಅಧಿಕಾರಕ್ಕೆ ಬಂದಿರುವ ಮಧ್ಯ ಪ್ರದೇಶ ಬಿಜೆಪಿ ಸರ್ಕಾರದಲ್ಲಿ ಭಿನ್ನಮತ ಭುಗಿಲೆದ್ದಿದೆ. ಸಚಿವ ನಗರ್ ಸಿಂಗ್ ಚೌಹಾನ್ ಹಾಗೂ ಸಂಸದೆಯಾಗಿರುವ ಪತ್ನಿಯ ಜೊತೆ ರಾಜೀನಾಮೆಗೆ ಮುಂದಾಗಿದ್ದಾರೆ.
ಕಾಂಗ್ರೆಸ್ನಿಂದ ಬಿಜೆಪಿಗೆ ಪಕ್ಷಾಂತರವಾಗಿ ಮಂತ್ರಿಯಾಗಿರುವ ರಾಮ್ ನಿವಾಸ್ ರಾವತ್ ಎಂಬುವರಿಗೆ ತಮ್ಮ ಒಂದು ಖಾತೆಯನ್ನು ನೀಡಿರುವುದಕ್ಕೆ ನಗರ್ ಸಿಂಗ್ ಚೌಹಾನ್ ಆಕ್ರೋಶ ವ್ಯಕ್ತಡಿಸಿದ್ದಾರೆ.
ರಾಜೀನಾಮೆಯ ಭಿನ್ನಮತ ವ್ಯಕ್ತಪಡಿಸಿದ ನಂತರ ಚೌಹಾನ್ ಅವರನ್ನು ಹೈಕಮಾಂಡ್ ನಾಯಕರು ದೆಹಲಿಗೆ ಕರೆದಿದ್ದಾರೆ. ಒಬಿಸಿಯ ಪ್ರಮುಖ ನಾಯಕರಾಗಿರುವ ಚೌಹಾಣ್ ಲೋಕಸಭೆ ಚುನಾವಣೆಯ ಮುನ್ನ ಕಾಂಗ್ರೆಸ್ಗೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡಿದ್ದರು.
ಈ ಸುದ್ದಿ ಓದಿದ್ದೀರಾ? ಬಾಂಗ್ಲಾದೇಶ | ಮೀಸಲಾತಿ – ಪ್ರತಿಭಟನೆ – ಹಿಂಸಾಚಾರ
6 ಬಾರಿ ಶಾಸಕರಾಗಿದ್ದ ಚೌಹಾನ್ ಅವರು ಒಬಿಸಿ ಸಮುದಾಯದ ಪ್ರಮುಖ ನಾಯಕರಾಗಿದ್ದಾರೆ.
ರಾವತ್ ಅವರು ಮುಖ್ಯಮಂತ್ರಿ ರಾವತ್ ಸಂಪುಟದಲ್ಲಿ ಕಳೆದ 15 ದಿನಗಳ ಹಿಂದೆಯಷ್ಟೆ ಸೇರ್ಪಡೆಗೊಂಡಿದ್ದರೂ ಕೇವಲ ಎರಡು ದಿನಗಳ ಹಿಂದೆ ಅರಣ್ಯ ಖಾತೆ ನೀಡಲಾಗಿತ್ತು.
ಈಗ ಅವರ ಬಳಿಯಿದ್ದ ಪರಿಶಿಷ್ಟ ಕಲ್ಯಾಣ ಸಾಮಾಜಿಕ ಕಲ್ಯಾಣ ಖಾತೆಯನ್ನು ಕಿತ್ತುಕೊಳ್ಳಲಾಗಿದೆ. ಚೌಹಾನ್ ಅವರ ಪತ್ನಿ ಅನಿತಾ ಅವರು ರತ್ಲಾಮ್ ಕ್ಷೇತ್ರದ ಸಂಸದರಾಗಿದ್ದಾರೆ. ತಮ್ಮನ್ನು ಕಡೆಗಣಿಸುವುದನ್ನು ಮುಂದುವರೆದರೆ ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ಮುಖ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ನಗರ್ ಸಿಂಗ್ ಚೌಹಾನ್ ಅವರು ಕಾಂಗ್ರೆಸ್ ಪಕ್ಷದಲ್ಲಿ ಇದ್ದಾಗ ಮಾಜಿ ಮುಖ್ಯಮಂತ್ರಿ ಕಮಲ್ನಾಥ್ ನಂತರದ ನಾಲ್ಕನೇ ಅತೀ ಮುಖ್ಯ ಹುದ್ದೆಯನ್ನು ಹೊಂದಿದ್ದರು.





