ಮಹಾರಾಷ್ಟ್ರ | 130ಕ್ಕೂ ಹೆಚ್ಚು ಜನರಿದ್ದಾಗಲೇ ಕುಸಿದ ಸೇತುವೆ; 80ಕ್ಕೂ ಹೆಚ್ಚು ಜನರು ನದಿಪಾಲು!

Date:

ಮಹಾರಾಷ್ಟ್ರದ ಪುಣೆ ಜಿಲ್ಲೆಯ ಮಾವಲ್ ತಾಲೂಕಿನ ಕುಂದಮಾಲ ಬಳಿ ಇಂದ್ರಾಯಣಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ 30 ವರ್ಷ ಹಳೆಯದಾದ ಕಬ್ಬಿಣದ ಸೇತುವೆ ಭಾನುವಾರ ಕುಸಿದಿದೆ.

ವಾರಾಂತ್ಯದ ಪಿಕ್ನಿಕ್ ತಾಣವಾಗಿ ಈ ಪ್ರದೇಶ ಜನಪ್ರಿಯವಾಗಿದ್ದರಿಂದ ಸಾವಿರಾರು ಪ್ರವಾಸಿಗರು ಅಲ್ಲಿಗೆ ಭೇಟಿ ನೀಡುತ್ತಾರೆ. ಸೇತುವೆ ಕುಸಿದಾಗ ಸುಮಾರು 130ಕ್ಕೂ ಹೆಚ್ಚು ಪ್ರವಾಸಿಗರು ನೀರಿಗೆ ಬಿದ್ದಿದ್ದಾರೆ ಎಂದು ವರದಿಯಾಗಿದೆ.

ಇಲ್ಲಿಯವರೆಗೆ ನಾಲ್ಕು ಮೃತದೇಹಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೇತುವೆ ಕುಸಿದಾಗ 130ಕ್ಕೂ ಹೆಚ್ಚು ಜನ ನೀರಿಗೆ ಬಿದ್ದಿದ್ದಾರೆ. ರಕ್ಷಿಸಲ್ಪಟ್ಟವರಲ್ಲಿ 32 ಜನರಿಗೆ ಗಾಯಗಳಾಗಿದ್ದು, ಆರು ಜನರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. 80ಕ್ಕೂ ಹೆಚ್ಚು ಜನರು ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ ಇದೆ. ಈ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, “ಇದು ದುರದೃಷ್ಟಕರ ಘಟನೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು. ರಕ್ಷಣಾ ಕಾರ್ಯವನ್ನು ಚುರುಕುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ” ಎಂದು ಹೇಳಿದ್ದಾರೆ.

ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ, “ರಾಜ್ಯದ ಎಲ್ಲ ಇಂತಹ ಸೇತುವೆಗಳ ರಚನಾತ್ಮಕ ಲೆಕ್ಕಪರಿಶೋಧನೆ ನಡೆಸಲು ಆದೇಶ ನೀಡಿದ್ದೇವೆ” ಎಂದು ತಿಳಿಸಿದ್ದಾರೆ.

ಸುದ್ದಿಮನೆಯಲ್ಲಿ ಅಪಚಾರ: ರಾಜಾರಾಂ ತಲ್ಲೂರು ಟೀಕೆ

ನಾವು ಶಾಲೆಯಲ್ಲಿದ್ದಾಗ ಲಘುತ್ತಮ ಸಾಮಾನ್ಯ ಅಪವರ್ತನ ಮತ್ತು ಮಹತ್ತಮ ಸಾಮಾನ್ಯ ಅಪವರ್ತನಗಳನ್ನು ಗಣಿತ ಮೇಸ್ಟ್ರುಗಳಿಂದ ಕಲಿತಿದ್ದೇವೆ. ಅಲ್ವಾ? ಸದ್ಯಕ್ಕೆ ಅದನ್ನು ನೆನಪು ಬಿಡಿ. ಈಗ ನಾನು ನಮ್ಮ ಡಿಯರ್ ಮೀಡಿಯಾಗಳ ಲಘುತ್ತಮ ಸಾಮಾನ್ಯ “ಅನುವರ್ತನ” (ಲ.ಸಾ.ಅ) ಮತ್ತು ಮಹತ್ತಮ ಸಾಮಾನ್ಯ “ಅನುವರ್ತನ”ಗಳ (ಮ.ಸಾ.ಅ) ಬಗ್ಗೆ ತಿಳಿಸುವೆ.

ನಮ್ಮ ಸುದ್ದಿಮೂಲ ಸಂಸ್ಥೆಗಳು ಹುಟ್ಟುಹಾಕಿರುವ ಈ ಹೊಸ ಗಣಿತ ಲೆಕ್ಕಾಚಾರವನ್ನು ಉಳಿದ ಮಾಧ್ಯಮಗಳು ಇಷ್ಟ ಪಟ್ಟು ಪಾಲಿಸುತ್ತಿವೆ. ಇದರಿಂದ ಸುದ್ದಿನಷ್ಟ ಜನಸಾಮಾನ್ಯರಿಗೆ. ಪುಣೆ ಸೇತುವೆ ಕುಸಿತದಲ್ಲಿ 4 ಸಾವು ಎಂದು ಬಹುತೇಕ ಎಲ್ಲ ಪತ್ರಿಕೆಗಳೂ ವರದಿ ಮಾಡಿವೆ.

ಈಗ ಲ.ಸಾ.ಅ ಮತ್ತು ಮ.ಸಾ.ಅ ಪತ್ತೆ ಹಚ್ಚುವ ಲೆಕ್ಕ ಶುರು ಮಾಡೋಣ. ದುರ್ಘಟನೆಯ ವೇಳೆ ಅಂದಾಜು 130ಕ್ಕೂ ಮಿಕ್ಕಿ ಜನ ಸೇತುವೆಯ ಮೇಲೆ ಇದ್ದರು. ಅವರಲ್ಲಿ 40 ಜನರನ್ನು ರಕ್ಷಿಸಲಾಗಿದೆ; ರಕ್ಷಿಸಲಾದವರಲ್ಲಿ 30 ಜನರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. 4 ಮಂದಿ ಸಾವಿಗೀಡಾಗಿದ್ದಾರೆ. ಹಾಗಿದ್ದರೆ, ಉಳಿದ ಅಂದಾಜು 85 ಮಂದಿ ಏನಾಗಿದ್ದಾರೆ? ಅಥವಾ ನಿಜಕ್ಕೂ ಸಾವಿನ ಸಂಖ್ಯೆ ಎಷ್ಟು?

ಇಲ್ಲಿ ಲ.ಸಾ.ಅ ಮತ್ತು ಮ.ಸಾ.ಅ ಗಳ ಪತ್ತೆ ಹೇಗೆಂದರೆ, ತಮ್ಮ ಧಣಿಗಳಿಗೆ ಡ್ಯಾಮೇಜ್ ಮಾಡುವ ಸುದ್ದಿ ಆಗಿದ್ದರೆ, ಮಾಧ್ಯಮಗಳು ಲ. ಸಾ. ಅ ಬಳಸುತ್ತವೆ. ಅರ್ಥಾತ್, ಸಿಕ್ಕಿದ ಶವಗಳ ಅಧಿಕೄತ ಲೆಕ್ಕಾಚಾರ ಮಾತ್ರ ಸುದ್ದಿ ಆಗುತ್ತದೆ. ಈ ಪ್ರಕರಣದಲ್ಲಿ ಸಧ್ಯಕ್ಕೆ ನಾಲ್ಕು ಸಾವು. ಕೆಳಗೆ ಇಂದ್ರಾಯಣೀ ಹೊಳೆಯಲ್ಲಿ ಭಾರೀ ನೀರು-ಪ್ರವಾಹ ಇದ್ದು , ಕೊಚ್ಚಿಕೊಂಡು ಹೋಗಿರುವವರ ಶವಗಳು ಇನ್ನೂ ಸಿಕ್ಕಿಲ್ಲ.

ತಮ್ಮ ಧಣಿಗಳ ಎದುರಾಳಿಗಳಿಗೆ ಡ್ಯಾಮೇಜ್ ಆಗುವ ಸುದ್ದಿ ಆಗಿದ್ದರೆ, ಮಾಧ್ಯಮಗಳು ಮ. ಸಾ.ಅ. ಲೆಕ್ಕಾಚಾರ ಮಾಡುತ್ತವೆ. ಕಡೇ ಪಕ್ಷ ಒಂದು ಪ್ರಶ್ನಾರ್ಥಕ ಚಿಹ್ನೆ ಆದರೂ ಹಾಕಿ 90ಕ್ಕೂ ಮಿಕ್ಕಿ ಜನ ಕೊಚ್ಚಿಹೋಗಿರಬಹುದು ಎಂದು ಹೇಳುತ್ತಾರೆ. ಹೀಗೆ ಧಣಿಗಳ ಸೇವೆಯಲ್ಲಿ, ಸುದ್ದಿಗೆ ಮೋಸ ಮಾಡುವ, ಸುದ್ದಿಯ ಗುರುತರತೆಯನ್ನು ಕಡೆಗಣಿಸುವ ಮಾಧ್ಯಮಗಳು ಸದ್ಯಕ್ಕೆ ಸಮಾಜದ ಅತಿದೊಡ್ಡ ಶತ್ರುಗಳು.

ಇತ್ತೀಚೆಗಿನ ಎಲ್ಲ ದುರಂತಗಳಲ್ಲೂ ಇದೇ ಲಸಾಅ ಮತ್ತು ಮಸಾಅ ಲೆಕ್ಕಾಚಾರವನ್ನು ನೀವು ಗಮನಿಸಬಹುದು. ಅದು ಕೋವಿಡ್ ಸಾವಿನ ಲೆಕ್ಕಾಚಾರ ಇರಬಹುದು, ವಿಮಾನ ದುರಂತದ ಲೆಕ್ಕಾಚಾರ ಇರಬಹುದು ಅಥವಾ ಮೊನ್ನೆಯ ಕ್ರಿಕೆಟ್ ಕಾಲ್ತುಳಿತದ ಲೆಕ್ಕಾಚಾರ ಇರಬಹುದು. ಎಲ್ಲದರಲ್ಲೂ ಇದೇ ಆಟ.

ಸುದ್ದಿಮನೆಯಲ್ಲಿ ಕುಳಿತು ಸುದ್ದಿಗೆ ಅಪಚಾರ ಮಾಡುವುದೆಂದರೆ ಉಣ್ಣುವ ಬಟ್ಟಲಿಗೆ ಹೇತು ಉಂಡಂತೆ ಎಂಬುದನ್ನು ಇವರಿಗೆ ಅರ್ಥ ಮಾಡಿಸುವವರು ಯಾರು?!

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...